ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ!

Published : Aug 17, 2020, 11:39 AM ISTUpdated : Aug 17, 2020, 04:33 PM IST
ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ!

ಸಾರಾಂಶ

ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ| 1 ಲಕ್ಷ ಮಂದಿಗೆ ತರಬೇತಿ: ರಾಜನಾಥ್‌ ಸಮ್ಮತಿ

ನವದೆಹ(ಆ.17): ನ್ಯಾಷನಲ್‌ ಕೆಡೆಟ್‌ ಕೋರ್‌ (ಎನ್‌ಸಿಸಿ) ಅನ್ನು 173 ಗಡಿ ಹಾಗೂ ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅನುಮೋದನೆ ನೀಡಿದ್ದಾರೆ. ಈ ಕಾರ್ಯಕ್ರಮದ ಅನ್ವಯ 1 ಲಕ್ಷ ಹೊಸ ಕೆಡೆಟ್‌ಗಳಿಗೆ ಗಡಿ ಹಾಗೂ ಕರಾವಳಿ ಜಿಲ್ಲೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ.

ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

ಎನ್‌ಸಿಸಿ ವಿಸ್ತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲಿ ಶನಿವಾರ ಹೇಳಿದ್ದರು. ಇದರ ಬೆನ್ನಲ್ಲೇ ಪ್ರಸ್ತಾವಕ್ಕೆ ಅನುಮೋದನೆ ದೊರಕಿದೆ. ಭವಿಷ್ಯದಲ್ಲಿ ಯುವಕರು ಸೇನೆ ಹಾಗೂ ನೌಕಾಪಡೆ ಸೇರಲು ಇದರಿಂದ ಅನುಕೂಲವಾಗಲಿದೆ. ಸಶಸ್ತ್ರ ಪಡೆಗಳನ್ನು ಸೇರಲು ಎನ್‌ಸಿಸಿ ‘ವೇದಿಕೆ’ಯಂತೆ ಕಾರ್ಯನಿರ್ವಹಿಸಲಿದೆ.

ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ ಮಾಡಿ: ಕೇಂದ್ರದ ಸೂಚನೆ!

ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ರಕ್ಷಣಾ ಸಚಿವಾಲಯ, ‘ಎನ್‌ಸಿಸಿ ಯೋಜನೆಯ ವಿಸ್ತರಣೆಗೆ 173 ಗಡಿ ಹಾಗೂ ಕರಾವಳಿ ಜಿಲ್ಲೆಯ 1000 ಶಾಲೆ-ಕಾಲೇಜುಗಳನ್ನು ಗುರುತಿಸಲಾಗಿದೆ. ಇಲ್ಲಿನ ಎನ್‌ಸಿಸಿ ಕೆಡೆಟ್‌ಗಳಿಗೆ ವಿಕೋಪ ಪರಿಹಾರ ಹಾಗೂ ಸೇನೆ ಸೇರಲು ಅನುಕೂಲ ಆಗುವಂಥ ತರಬೇತಿ ನೀಡಲಾಗುತ್ತದೆ. ಇದೇ ವೇಳೆ 83 ಎನ್‌ಸಿಸಿ ಘಟಕಗಳನ್ನು (53 ಸೇನೆ, 20 ನೌಕಾಪಡೆ, 10 ವಾಯುಪಡೆ ಘಟಕಗಳು) ತರಬೇತಿಗಾಗಿ ಉನ್ನತೀಕರಣಗೊಳಿಸಲಾಗುತ್ತದೆ’ ಎಂದು ತಿಳಿಸಿದೆ.

‘ಗಡಿ ಜಿಲ್ಲೆಗಳಲ್ಲಿ ತರಬೇತಿಗೆ ಸೇನೆ ಕೂಡ ಸಹಾಯ ಮಾಡಲಿದೆ. ಕರಾವಳಿ ಭಾಗಗಳಲ್ಲಿ ನೌಕಾಪಡೆ ನೆರವಾಗಲಿದೆ. ರಾಜ್ಯ ಸರ್ಕಾರಗಳ ಸಹಭಾಗಿತ್ವ ಕೂಡ ಇರಲಿದೆ’ ಎಂದು ಅದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?