ತಂದೆ ನಿಧನರಾದರೂ ಪರೇಡಲ್ಲಿ ಭಾಗಿಯಾದ ಮಹಿಳಾ ಇನ್ಸ್‌ಪೆಕ್ಟರ್‌!

Published : Aug 17, 2020, 10:54 AM ISTUpdated : Aug 17, 2020, 11:01 AM IST
ತಂದೆ ನಿಧನರಾದರೂ ಪರೇಡಲ್ಲಿ  ಭಾಗಿಯಾದ ಮಹಿಳಾ ಇನ್ಸ್‌ಪೆಕ್ಟರ್‌!

ಸಾರಾಂಶ

ತಂದೆ ನಿಧನರಾದರೂ ಪರೇಡಲ್ಲಿ ಭಾಗಿಯಾದ ಮಹಿಳಾ ಇನ್ಸ್‌ಪೆಕ್ಟರ್‌| ಮಹಿಳಾ ಅಧಿಕಾರಿ ದೇಶಪ್ರೇಮಕ್ಕೆ ಭಾರಿ ಮೆಚ್ಚುಗೆ

ತಿರುನೆಲ್ವೇಲಿ(ಆ.17): ತನ್ನ ತಂದೆಯ ಅಗಲಿಕೆಯ ಹೊರತಾಗಿಯೂ ಮಹಿಳಾ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಸ್ವಾತಂತ್ರ್ಯ ದಿನದ ಪರೇಡ್‌ ಮುನ್ನಡೆಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಘಟನೆಯೊಂದು ನಡೆದಿದೆ. ಈ ಅಧಿಕಾರಿಯ ದೇಶ ಪ್ರೇಮದ ಬಗ್ಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಎನ್‌. ಮಹೇಶ್ವರಿ ಅವರ 83 ವರ್ಷದ ತಂದೆ ನಾರಾಯಣ ಸ್ವಾಮಿ ತಿರುನೆಲ್ವೇಲಿಯಿಂದ 200 ಕಿ.ಮೀ. ದೂರದಲ್ಲಿರುವ ದಿಂಡಿಗಲ್‌ ಜಿಲ್ಲೆಯಲ್ಲಿ ನಿಧನರಾಗಿದ್ದರು.

ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ವರ್ಷ ಬಾಲಕನ ವಿಡಿಯೋ ನೋಡಿ ಪುಳಕಿತರಾಗ್ತಾರೆ ಆನಂದ್ ಮಹೀಂದ್ರ!

ಆ.14ರ ರಾತ್ರಿ ತಂದೆ ತೀರಿಹೋದ ಸುದ್ದಿ ತಿಳಿದಿತ್ತು. ಇದರ ಹೊರತಾಗಿಯೂ ಮಹೇಶ್ವರಿ ಅವರು ಪರೇಡ್‌ನಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್‌ ಸತೀಶ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಮಣಿವಣ್ಣನ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ.ಕರ್ತವ್ಯದ ವೇಳೆ ತಮ್ಮ ದುಃಖವನ್ನು ಕೊಂಚವೂ ತೋರಿಸಿಕೊಂಡಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು