Student Protest Jharkhand: ಸರ್ಕಾರಿ ಹುದ್ದೆ ಅಕ್ರಮ ನೇಮಕಾತಿ: ಪ್ರಧಾನ್‌ ರೀತಿಯಲ್ಲೇ ಜಾರ್ಖಂಡ್ ಸಿಎಂ ರಾಜೀನಾಮೆಗೆ ಪಟ್ಟು!!

Kannadaprabha News   | Kannada Prabha
Published : Aug 07, 2026, 07:23 AM IST
Examination irregularities case If Dharmendra Pradhan Can Resign Why Not like Pradhan rav

ಸಾರಾಂಶ

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಹೇಮಂತ್ ಸೊರೇನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಿದೆ.

ರಾಂಚಿ (ಜು7): ಸರ್ಕಾರಿ ಕೆಲಸಗಳ ನೇಮಕಾತಿ ಪರೀಕ್ಷೆಗಳಲ್ಲಿ ಆಗುತ್ತಿರುವ ಅಕ್ರಮಗಳನ್ನು ಖಂಡಿಸಿ ಜು.25ರಿಂದ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು, ಧರ್ಮೇಂದ್ರ ಪ್ರಧಾನ್‌ ಅವರ ರೀತಿ ಸಿಎಂ ಹೇಮಂತ್‌ ಸೊರೇನ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರಿಗಳನ್ನ ತರಕಾರಿ ರೀತಿ ಮಾರಲಾಗುತ್ತಿದೆ!

ಜೈಪಾಲ್ ಸಿಂಗ್ ಮುಂಡಾ ಸ್ಟೇಡಿಯಂನಲ್ಲಿ ಜು.25ರಿಂದ ಉಪವಾಸ ಮಾಡುತ್ತಿರುವ 6 ಜನರಲ್ಲಿ ಒಬ್ಬರಾದ ಸಬಿತಾ ಕುಮಾರಿ ಮಾತನಾಡಿ, ‘ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ನೌಕರಿಗಳನ್ನು ತರಕಾರಿಯ ರೀತಿ ಮಾರಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ‘ಏಪ್ರಿಲ್‌ನಲ್ಲಿ ನಡೆದ ಜಾರ್ಖಂಡ್ ಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ರದ್ದುಗೊಳಿಸುವುದರ ಜತೆಗೆ ಮರುಪರೀಕ್ಷೆಯ ನಿಖರ ದಿನಾಂಕವನ್ನು ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮುಂದೇನು?

ಅತ್ತ ಮಾತುಕತೆಗೆ ಜಾರ್ಖಂಡ್‌ ಸರ್ಕಾರ ಒಪ್ಪಿದ ಬೆನ್ನಲ್ಲೇ ಪ್ರತಿಭಟನಾಕಾರರು 11 ಜನರ ತಂಡವನ್ನು ರಚಿಸಿದ್ದಾರೆ. ಇದು 8 ವಿದ್ಯಾರ್ಥಿಗಳು, ಇಬ್ಬರು ಪತ್ರಕರ್ತರು ಹಾಗೂ ಓರ್ವ ವಕೀಲರನ್ನು ಒಳಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳೆದ ವರ್ಷ ಮೋದಿ ವಿದೇಶ ಪ್ರವಾಸಕ್ಕೆ ₹180 ಕೋಟಿ ವೆಚ್ಚ
ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ; ಈ ಬಾರಿ ಮನವಿ ಮಾಡಿದ್ದು ಏನೆಂದರೆ..