ಮುದ್ದು ಮಾಡ್ತಾ ಹೊತ್ಕೊಂಡೆ ಹೋದ್ರು: ನಾಯಿಮರಿ ಪತ್ತೆಗೆ ಪೋಸ್ಟರ್: ಭಾರಿ ಮೊತ್ತದ ಬಹುಮಾನ

Published : Aug 27, 2023, 11:54 AM ISTUpdated : Aug 27, 2023, 12:00 PM IST
ಮುದ್ದು ಮಾಡ್ತಾ ಹೊತ್ಕೊಂಡೆ ಹೋದ್ರು: ನಾಯಿಮರಿ ಪತ್ತೆಗೆ ಪೋಸ್ಟರ್: ಭಾರಿ ಮೊತ್ತದ ಬಹುಮಾನ

ಸಾರಾಂಶ

ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ

ಜೈಪುರ: ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ. ಪಾಪ್‌ಕಾರ್ನ್ ಹೆಸರಿನ ಈ ಪುಟ್ಟ ಶ್ವಾನಕ್ಕಾಗಿ ಎಲ್ಲೆಡೆ ಮಾಲೀಕರು ಶೋಧ ನಡೆಸಿದ್ದರು ನಾಯಿಮರಿ (Puppy) ಮಾತ್ರ ಸಿಕ್ಕಿಲ್ಲ, ಇದರಿಂದ ಬೇಜಾರಾದ ಮಾಲೀಕ ಈ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ. ಮೂರು ದಿನಗಳ ಹಿಂದೆ ಈ ನಾಯಿಮರಿ ಜೈಪುರ ನಗರದಲ್ಲಿ (Jaipur city) ತಪ್ಪಿಸಿಕೊಂಡಿದೆ. ನಾಯಿ ಮರಿಯ ಶೋಧಕ್ಕಾಗಿ ಇಡೀ ನಗರದಲ್ಲಿ ಮಾಲೀಕ ಪೋಸ್ಟರ್ ಕೂಡ ಅಂಟಿಸಿದ್ದಾರೆ. ಜೈಪುರ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಿರುವ ಮಾಲೀಕರು ನಾಯಿ ಮರಿ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ನಗದು ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಅಲ್ಲದೇ ಒಂದು ಸಿಸಿಟಿವಿ ದೃಶ್ಯಾವಳಿಯನ್ನು (Cctv Footage) ಕೂಡ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಪುರದ ಮಾಳವೀಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ವಾಸಿಸುವ ಅನಿತಾ ದಾಸ್ ಎಂಬುವವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.  ಅನಿತಾ ದಾಸ್ ಅವರು ವಿದೇಶಿ ತಳಿಯ ನಾಯಿಯೊಂದನ್ನು ಸಾಕಿದ್ದರು. ಎರಡು ದಿನಗಳ ಹಿಂದೆ ಇವರ ಮನೆಯ ಕೆಲಸಗಾರರು ಈ ಶ್ವಾನವನ್ನು ವಾಕಿಂಗ್ ಕರೆದೊಯ್ದಿದ್ದಾರೆ. ನಾಯಿ ವಾಕ್ ಹೋಗುತ್ತಿದ್ದ ಮಾರ್ಗದಲ್ಲಿ ಕಾರೊಂದು ನಿಂತಿದ್ದು, ನಾಯಿಯನ್ನು ನೋಡಿ ಕಾರಿನಲ್ಲಿದ್ದ ಇಬ್ಬರು ಯುವಕರು ಕೆಳಗಿಳಿದಿದ್ದಾರೆ. ಅಷ್ಟೇ ಅಲ್ಲ ಈ ವಿದೇಶಿ ತಳಿಯ (foreign breed Dog) ಶ್ವಾನವನ್ನು ಮುದ್ದು ಮಾಡಲು ನೋಡಿದ್ದಾರೆ.  ಅಲ್ಲದೇ ನಾಯಿಯ ಜೊತೆಯೇ ಇವರು ನಡೆಯಲು ಆರಂಭಿಸಿದ್ದಾರೆ.

ಇಂಟರ್ನೆಟ್‌ನಲ್ಲಿ ಭಾರಿ ವೈರಲ್‌ ಆಗಿದ್ದ ಮೀಮ್ಸ್ ನಾಯಿ ‘ಚೀಮ್ಸ್’ ಇನ್ನಿಲ್ಲ: ನೆಟ್ಟಿಗರ ಸಂತಾಪ

ಈ ವೇಳೆ ನಾಯಿಯನ್ನು ನೋಡಿಕೊಳ್ಳುತ್ತಿದ್ದವರು ಈ ಯುವಕರು ನಾಯಿಯನ್ನು ಮುದ್ದು ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಈ ಖತರ್ನಾಕ್‌ ನಾಯಿ ಕಳ್ಳರು, ನಾಯಿಯನ್ನು ಹಿಡಿದು ಮೇಲೆತ್ತಿಕೊಂಡಿದ್ದು, ಬಳಿಕ ಮಡಿಲಲ್ಲಿ ಕೂರಿಸಿ ನಿಧಾನಕ್ಕೆ ಕಾರಿನತ್ತ ಕರೆದೊಯ್ದಿದ್ದಾರೆ.  ಬಳಿಕ ಕಾರಿನಲ್ಲಿ ಕುಳಿತು ಮೆಲ್ಲನೇ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಲೀಕರು ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಪೊಲೀಸರಿಗೆ ಒದಗಿಸಿದ್ದಾರೆ. ಹೀಗಾಗಿ ನಾಯಿ ಮಾಲೀಕರು ಬೇಸರಗೊಂಡಿದ್ದು, ನಗರದೆಲ್ಲೆಡೆ ಪೋಸ್ಟರ್ ಅಂಟಿಸಿರುವ ಜೊತೆ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.  

Kolar: ಕೊಲೆ ಮಾಡಿ ಅವಿತು ಕುಳಿತಿದ್ದ ಆರೋಪಿಯನ್ನ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಶ್ವಾನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!