ಸಹಾಯಕ್ಕಾಗಿ DM ಮಾಡಿ: ನಟ ಸುನಿಲ್ ಶೆಟ್ಟಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್

Suvarna News   | Asianet News
Published : Apr 29, 2021, 09:31 AM ISTUpdated : Apr 29, 2021, 02:49 PM IST
ಸಹಾಯಕ್ಕಾಗಿ DM ಮಾಡಿ: ನಟ ಸುನಿಲ್ ಶೆಟ್ಟಿಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್

ಸಾರಾಂಶ

ಅಕ್ಷಯ್ ಕುಮಾರ್ ನಂತ್ರ ಜನರ ನೆರವಿಗೆ ನಿಂತ ಸುನಿಲ್ ಶೆಟ್ಟಿ | ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಪೋರೈಕೆ | ಸಹಾಯಕ್ಕೆ ಡೈರೆಕ್ಟ್ ಮೆಸೇಜ್ ಮಾಡಿ ಎಂದ ನಟ

ದೆಹಲಿ(ಏ.29): ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಉಚಿತ ಆಮ್ಲಜನಕ ಕಾನ್ಸ್‌ನ್‌ಟ್ರೇಟರ್‌ಗಳನ್ನು ಒದಗಿಸುವ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ.

ಶೆಟ್ಟಿ ತಮ್ಮ ಟ್ವಿಟ್ಟರ್ ಮೂಲಕ ಈ ವಿಚಾರ ತಿಳಿಸಿದ್ದಾರೆ. ನಾವು ಕೆಲವು ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ.  ಭರವಸೆ ಏನೆಂದರೆ ನಮ್ಮ ಜನರು ಪರಸ್ಪರ ಸಹಾಯ ಮಾಡಲು ಕೈಜೋಡಿಸಿದ ರೀತಿ. ನಾನು ಕೃತಜ್ಞನಾಗಿದ್ದೇನೆ. ಉಚಿತ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಒದಗಿಸಲು ಕೆವಿಎನ್‌ಫೌಂಡೇಶನ್‌ನ ಉಪಕ್ರಮವಾದ ಫೀಡ್‌ಮೈಸಿಟಿ 1 ಜೊತೆಗೆ ಕೈಜೋಡಿಸುತ್ತಿದ್ದೇನೆ ಎಂದಿದ್ದಾರೆ.

ದಳಪತಿ ವಿಜಯ್ ಸಾಂಗ್‌ಗೆ ಕೆನಡಾ ಹುಡುಗರ ಸಖತ್ ಸ್ಟೆಪ್ಸ್

COVID-19 ವಿರುದ್ಧದ ಹೋರಾಟದಲ್ಲಿ ತಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡುವಂತೆ ತಮ್ಮ ಅಭಿಮಾನಿಗಳ ಮತ್ತು ಫಾಲೋವರ್ಸ್‌ಗಳನ್ನು ಒತ್ತಾಯಿಸಿದ ಅವರು, "ಇದು ನನ್ನ ಎಲ್ಲ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಮನವಿ. ನಿಮಗೆ ಸಹಾಯ ಬೇಕಾದರೆ ನನಗೆ ತಿಳಿಸಿ ಮಾಡಿ, ನಿಮಗೆ ಸಹಾಯ ಬೇಕಾದ ಯಾರಾದರೂ ತಿಳಿದಿದ್ದರೆ , ಅಥವಾ ನೀವು ಈ ಮಿಷನ್‌ನ ಕೊಡುಗೆ ನೀಡಲು ಮತ್ತು ಭಾಗವಾಗಲು ಬಯಸಿದರೆ ತಿಳಿಸಿರಿ. ದಯವಿಟ್ಟು ಇದನ್ನು ನಿಮಗೆ ಸಾಧ್ಯವಾದಷ್ಟು ಎಲ್ಲರಿಗೂ ತಲುಪಿಸಿ. ಅಗತ್ಯವಿರುವವರಿಗೆ ಸಹಾಯ ಮಾಡಲು ನಮಗೆ ಸಹಾಯ ಮಾಡಿ. ಪ್ರಸ್ತುತ ಮುಂಬೈ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದಿದ್ದಾರೆ.

ಕೆವಿಎನ್ ಫೌಂಡೇಶನ್ ಸುನಿಯೆಲ್ ಶೆಟ್ಟಿ ಅವರ 'ಹೇರಾ ಫೆರಿ' ಸಹನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಕೂಡ ಒಂದು ಸಂಸ್ಥೆಗೆ ನೂರು ಆಕ್ಸಿಜನ್ ಕಾನ್ಸನ್‌ಟ್ರೇಟರ್ ದಾನ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!