
ನವದೆಹಲಿ(ಏ.07): ಭಾರತದಲ್ಲಿ ದುಷ್ಕೃತ್ಯ ಎಸಗುವ ಉಗ್ರರು ಪಾಕಿಸ್ತಾನದೊಳಗೆ ನುಗ್ಗಿದರೂ, ಆ ದೇಶದೊಳಗೆ ನುಗ್ಗಿ ಹೊಡಿತೀವೆ ಎಂಬ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಪ್ರಚೋದನಾಕಾರಿಯಾಗಿದೆ ಮತ್ತು ಶಾಂತಿ ಕದಡುವಂತಿದೆ ಎಂದು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.
ಸಿಂಗ್ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, 'ಭಾರತ ಸರ್ಕಾರ, ಪಾಕಿಸ್ತಾನದೊಳಗಿನ ನಾಗರಿಕರನ್ನು 'ಉಗ್ರರು' ಎಂದು ಕರೆದು ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂತಾರಾಷ್ಟ್ರೀಯ ಸಮಯ ದಾಯವು ಭಾರತದ ಈ ಹೀನ ಹಾಗೂ ದುಷ್ಕೃತ್ಯವನ್ನು ತಡೆಯಬೇಕು' ಎಂದು ಕಿಡಿಕಾರಿದೆ.
ಉಗ್ರರ ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದೇನು?
ಪಾಕಿಸ್ತಾನದಲ್ಲಿ ಅನಾಮ ಧೇಯ ವ್ಯಕ್ತಿಗಳಿಂದ ಹತರಾದ 20ಕ್ಕೂ ಹೆಚ್ಚು ಉಗ್ರರ ಸಾವಿಗೆ ಭಾರತ ಕಾರಣ ಎಂದು ಬ್ರಿಟನ್ ನ ಗಾರ್ಡಿಯನ್ ಪತ್ರಿಕೆ ವರದಿಗೆ ಪ್ರತಿಕ್ರಿಯಿಸಿದ ಸಚಿವ ಸಿಂಗ್ ಭಾರತಕ್ಕೆ ತೊಂದರೆ ಕೊಡುವವರು ಪಾಕಿಸ್ತಾನಕ್ಕೆ ತೆರಳಿದರೂ, ಅಲ್ಲೇ ಹೊಗಿ ಕೊಲ್ಲುತ್ತೇವೆ' ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ