ಲಡಾಖ್‌ ಭೀಕರ ಚಳಿಗೆ ಚೀನಾ ಸೇನೆ ಕಂಗಾಲು!

Published : Dec 02, 2020, 07:48 AM ISTUpdated : Dec 02, 2020, 01:18 PM IST
ಲಡಾಖ್‌ ಭೀಕರ ಚಳಿಗೆ ಚೀನಾ ಸೇನೆ ಕಂಗಾಲು!

ಸಾರಾಂಶ

ಲಡಾಖ್‌ ಭೀಕರ ಚಳಿಗೆ ಚೀನಾ ಸೇನೆ ಕಂಗಾಲು!| ನಿತ್ಯ ಯೋಧರು ಬದಲು| ಚಳಿಗೆ ಎದೆಯೊಡ್ಡಿ ಬಹಳ ದಿನ ಅಲ್ಲೇ ಇರುತ್ತಾರೆ ಭಾರತದ ಯೋಧರು!

ನವದೆಹಲಿ(ಡಿ.02): ಭಾರತದ ಭೂಭಾಗಗಳನ್ನು ಕಬಳಿಸಲು ಎಂಟು ತಿಂಗಳ ಹಿಂದೆ ಅತ್ಯುತ್ಸಾಹದಿಂದ ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಿಗೆ ನುಗ್ಗಿದ್ದ ಚೀನಾ ಸೇನೆಯೀಗ ಅಲ್ಲಿನ ಚಳಿಗಾಲ ನೋಡಿ ಕಂಗಾಲಾಗಿದೆ. ಚೀನಿ ಯೋಧರಿಗೆ ಲಡಾಖ್‌ನ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಚೀನಾದ ಸೇನೆ ನಿತ್ಯ ಅಲ್ಲಿ ನಿಯೋಜಿಸಿರುವ ತನ್ನ ಯೋಧರನ್ನು ಬದಲಾಯಿಸುತ್ತಿದೆ.

ಅಚ್ಚರಿಯ ಸಂಗತಿಯೆಂದರೆ, ಅಂತಹ ಚಳಿಯಲ್ಲಿ ಕಾರ್ಯನಿರ್ವಹಿಸಿ ಈಗಾಗಲೇ ಸಾಕಷ್ಟುಅನುಭವ ಹೊಂದಿರುವ ಭಾರತದ ಯೋಧರು ಮಾತ್ರ ಚಳಿಗೆ ಕೆಚ್ಚೆದೆ ಒಡ್ಡಿ ಬಹಳ ದಿನಗಳ ಕಾಲ ಅಲ್ಲೇ ಇರುತ್ತಾರೆ ಎಂದು ಭಾರತೀಯ ಸೇನಾಪಡೆಯ ಮೂಲಗಳು ತಿಳಿಸಿವೆ.

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಚೀನಾದಿಂದ ಬೃಹತ್‌ ಡ್ಯಾಮ್‌!

ಲಡಾಖ್‌ನಲ್ಲೀಗ ತೀವ್ರ ಚಳಿಗಾಲ ಆರಂಭವಾಗಿದೆ. ಪೂರ್ವ ಲಡಾಖ್‌ನ ಮುಂಚೂಣಿ ಪೋಸ್ಟ್‌ಗಳಲ್ಲಿ ನಿಯೋಜಿತರಾಗಿರುವ ಚೀನಾ ಸೈನಿಕರಿಗೆ ಅದನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಸೇನಾಪಡೆ ನಿತ್ಯ ತನ್ನ ಯೋಧರನ್ನು ಬದಲಾಯಿಸುತ್ತಿದೆ. ಆದರೆ, ಭಾರತದ ಯೋಧರು ಈಗಾಗಲೇ ಲಡಾಖ್‌, ಸಿಯಾಚಿನ್‌ ಮುಂತಾದ ಎತ್ತರದ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಬಹಳ ದಿನಗಳ ಕಾಲ ಇವರನ್ನು ಬದಲಾಯಿಸುವ ಅಗತ್ಯ ಬೀಳುವುದಿಲ್ಲ ಎಂದು ಮೂಲಗಳು ಹೇಳಿವೆ.

ಕೊರೋನಾ ಸೃಷ್ಟಿಸಿದ್ದು ಭಾರತ : ಚೀನಾದಿಂದ ಅಪಪ್ರಚಾರ

ಏಪ್ರಿಲ್‌-ಮೇ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಡಿಯೊಳಗೆ ನುಗ್ಗಲು ಯತ್ನಿಸಿದ ಚೀನಾದ ಸೇನೆ ತನ್ನ 60,000ಕ್ಕೂ ಹೆಚ್ಚು ಯೋಧರನ್ನು ಅಲ್ಲಿ ನಿಯೋಜಿಸಿದೆ. ಜೊತೆಗೆ ಭಾರಿ ಟ್ಯಾಂಕ್‌ಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಶಸ್ತಾ್ರಸ್ತ್ರಗಳನ್ನೂ ಯೋಧರಿಗೆ ನೀಡಿದೆ. ಭಾರತ ಕೂಡ ಅಷ್ಟೇ ಪ್ರಮಾಣದಲ್ಲಿ ಯೋಧರು ಹಾಗೂ ಶಸ್ತಾ್ರಸ್ತ್ರಗಳನ್ನು ನಿಯೋಜಿಸಿದೆ. ಸಾಮಾನ್ಯವಾಗಿ ಪ್ರತಿವರ್ಷ ಚಳಿಗಾಲ ತೀವ್ರಗೊಂಡ ಮೇಲೆ ಆ ಪ್ರದೇಶದಲ್ಲಿ ಯೋಧರು ಇರುತ್ತಿರಲಿಲ್ಲ. ಆದರೆ, ಈ ಬಾರಿ ಚೀನಾದ ದುಸ್ಸಾಹಸದಿಂದಾಗಿ ಎರಡೂ ದೇಶಗಳ ಯೋಧರು ಅಲ್ಲಿ ಗಡಿ ಕಾಯುವ ಸಂದರ್ಭ ಬಂದೊದಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!