ಮತ್ತೆ ಚೀನಾ ಕಿರಿಕ್‌: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್‌ ಮಾಡಿದ ಜಿನ್‌ಪಿಂಗ್‌ ಸರ್ಕಾರ..!

Published : Apr 05, 2023, 01:45 PM IST
ಮತ್ತೆ ಚೀನಾ ಕಿರಿಕ್‌: ಇಬ್ಬರು ಭಾರತೀಯ ಪತ್ರಕರ್ತರ ವೀಸಾ ಫ್ರೀಜ್‌ ಮಾಡಿದ ಜಿನ್‌ಪಿಂಗ್‌ ಸರ್ಕಾರ..!

ಸಾರಾಂಶ

ತನ್ನ ಭಾರತೀಯ ವೀಸಾವನ್ನು ನವೀಕರಿಸಲಾಗುವುದಿಲ್ಲ ಎಂದು ಕಳೆದ ತಿಂಗಳು ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಹೊಸ ದೆಹಲಿ ಮೂಲದ ವರದಿಗಾರನಿಗೆ ತಿಳಿಸಲಾಗಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಚೀನಾ ಈ ಕ್ರಮ ಕೈಗೊಂಡಿದೆ.

ಹೊಸದೆಹಲಿ (ಏಪ್ರಿಲ್‌ 5, 2023): ಚೀನಾ ಪತ್ರಕರ್ತರೊಬ್ಬರಿಗೆ ಭಾರತ ದೇಶವನ್ನು ತೊರೆಯುವಂತೆ ಕೇಳಿದ ಕೆಲ ವಾರಗಳ ನಂತರ, ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೀಜಿಂಗ್‌ನಲ್ಲಿರುವ ಇಬ್ಬರು ಭಾರತೀಯ ಪತ್ರಕರ್ತರ ವೀಸಾಗಳನ್ನು "ಫ್ರೀಜ್" ಮಾಡಲು ನಿರ್ಧರಿಸಿದೆ. ಇದೇ ರೀತಿ, ಭಾರತದಲ್ಲಿನ ಚೀನೀ ಪತ್ರಕರ್ತರಿಗೆ ನವದೆಹಲಿಯು ಪರಸ್ಪರ ವೀಸಾ ಮತ್ತು ಅಧಿಕಾರಾವಧಿಯ ನಿಯಮಗಳನ್ನು ನೀಡದ ಹೊರತು, ಇತರ ಭಾರತೀಯ ಪತ್ರಕರ್ತರ ವಿರುದ್ಧ ಹೆಚ್ಚಿನ "ಪ್ರತಿ ಕ್ರಮಗಳನ್ನು" ಅನುಸರಿಸಬಹುದು ಎಂದು ಇದು ಸೂಚಿಸುತ್ತದೆ.

ಇನ್ನು, ಬೀಜಿಂಗ್‌ನಲ್ಲಿರುವ ಪ್ರಸಾರ ಭಾರತಿಯ ಪ್ರತಿನಿಧಿ ಅಂಶುಮನ್ ಮಿಶ್ರಾ ಮತ್ತು ದಿ ಹಿಂದೂ ವರದಿಗಾರ ಅನಂತ್ ಕೃಷ್ಣನ್ ಅವರಿಗೆ ಚೀನಾ ವೀಸಾ ಫ್ರೀಜ್‌ ಮಾಡಿದ್ದು, ಚೀನಾಕ್ಕೆ ಹಿಂತಿರುಗಬಾರದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. ಅಂಶುಮನ್ ಮಿಶ್ರಾ ಮತ್ತು ಅನಂತ್ ಕೃಷ್ಣನ್ ಇಬ್ಬರೂ ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.

ಇದನ್ನು ಓದಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರು ನಾಮಕರಣ ಮಾಡಿದ ಚೀನಾ: ಮತ್ತೆ ನರಿ ಬುದ್ಧಿ ಪ್ರದರ್ಶಿಸಿದ ಜಿನ್‌ಪಿಂಗ್

ತನ್ನ ಭಾರತೀಯ ವೀಸಾವನ್ನು ನವೀಕರಿಸಲಾಗುವುದಿಲ್ಲ ಎಂದು ಕಳೆದ ತಿಂಗಳು ಚೀನಾದ ಸರ್ಕಾರಿ ಮಾಧ್ಯಮ ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಹೊಸ ದೆಹಲಿ ಮೂಲದ ವರದಿಗಾರನಿಗೆ ತಿಳಿಸಲಾಗಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಚೀನಾ ಈ ಕ್ರಮ ಕೈಗೊಂಡಿದೆ. ಕ್ಸಿನ್ಹುವಾ ವರದಿಗಾರನನ್ನು ಮಾರ್ಚ್ 31 ರೊಳಗೆ ಚೀನಾಕ್ಕೆ ಹಿಂತಿರುಗುವಂತೆ ಕೇಳಲಾಯಿತು ಮತ್ತು ನಂತರ ಅವರು ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

'ಪ್ರತಿ-ಕ್ರಮಗಳು'
ಈ ಮಧ್ಯೆ, ಪ್ರಸ್ತುತ ಚೀನಾದಲ್ಲಿರುವ ಸುದ್ದಿ ಸಂಸ್ಥೆ ಪಿಟಿಐ ಮತ್ತು ಹಿಂದೂಸ್ತಾನ್ ಟೈಮ್ಸ್‌ಗೆ ಸೇರಿದ ಇನ್ನಿಬ್ಬರು ಪತ್ರಕರ್ತರಿಗೆ ಚೀನಾ ವಿದೇಶಾಂಗ ಸಚಿವಾಲಯ ಸದ್ಯ ಅವರು ಚೀನಾದಲ್ಲ ಇರಬಹುದು ಎಂದು ಹೇಳಿದೆ. ಆದರೆ, ಚೀನಾದ ಪತ್ರಕರ್ತರ ಮೇಲೆ ಭಾರತದ ಅನ್ಯಾಯದ ವಿರುದ್ಧ “ಪ್ರತಿ ಕ್ರಮಗಳನ್ನು” ಪರಿಗಣಿಸುತ್ತಿರುವಾಗಲೂ ಸಹ ಚೀನಾ ಸರ್ಕಾರ ಹೇಳಿದೆ. ಇನ್ನು, ಈ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಆದರೂ, ಚೀನಾದ ಪತ್ರಕರ್ತರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಭಾರತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೌದ್ಧರ 3ನೇ ಉನ್ನತ ಹುದ್ದೆಗೆ ಅಮೆರಿಕದಲ್ಲಿ ಜನಿಸಿದ 8ರ ಬಾಲಕನ ನೇಮಿಸಿದ ದಲೈ ಲಾಮಾ: ಚೀನಾ ಕೆಂಗಣ್ಣು?

ಹಾಗೆ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿ ಮೂಲದ ಅನೇಕ ಚೀನೀ ವರದಿಗಾರರು ತಮ್ಮ ತವರು ದೇಶಕ್ಕೆ ಹೋಗಿದ್ದಾರೆ ಮತ್ತು ಹಿಂತಿರುಗಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೂ, ಅವರ ವಿರುದ್ಧ "ಪ್ರತಿ-ಕ್ರಮ" ಕ್ಕೆ ಅರ್ಹವಾದ ಯಾವುದೇ "ಕ್ರಮಗಳನ್ನು" ಸೂಚಿಸುವುದು "ವಾಸ್ತವವಾಗಿ ತಪ್ಪಾಗಿದೆ" ಎಂದು ಮಾಧ್ಯಮವೊಂದರ ವರದಿ ಹೇಳಿದೆ. 

ಹೆಚ್ಚಿನ ವೀಸಾಗಳಿಗೆ ಬೇಡಿಕೆ ಇಟ್ಟ ಚೀನಾ 
ಭಾರತದ ಬಗ್ಗೆ ವರದಿ ಮಾಡಲು ಚೀನಾ ತನ್ನ ವರದಿಗಾರರಿಗೆ ಹೆಚ್ಚಿನ ವೀಸಾಗಳನ್ನು ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ. ಚೀನಾದ ವಿದೇಶಾಂಗ ಸಚಿವಾಲಯ ಭಾರತೀಯ ಪತ್ರಕರ್ತರಿಗೆ ವರ್ಷಪೂರ್ತಿ ವೀಸಾಗಳನ್ನು ಒದಗಿಸುವುದರಿಂದ, ಪ್ರತಿ ಮೂರು ತಿಂಗಳಿಗೊಮ್ಮೆ ನವೀಕರಿಸಬೇಕಾದ ಪ್ರಸ್ತುತ ವೀಸಾ ಅವಧಿಯನ್ನು 12-ತಿಂಗಳ ವೀಸಾಗಳಿಗೆ ಹೆಚ್ಚಿಸುವಂತೆಯೂ ಕೇಳುತ್ತಿದೆ .ಒಂದು ದಶಕದ ಹಿಂದೆ ಚೀನಾದ 12 ವರದಿಗಾರರಿದ್ದರೂ,  2022 ರ ಅಂತ್ಯದ ವೇಳೆಗೆ ಭಾರತದಲ್ಲಿ ಚೀನಾದ 4 ಪತ್ರಕರ್ತರು ಮಾತ್ರ ಇದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣಗಳಿಗೆ 12 ಬಿಲಿಯನ್ ಡಾಲರ್ ಹೂಡಿಕೆ: ಚೀನಾ ಆರ್ಥಿಕತೆ ಮೀರಿಸಲು ಭಾರತದ ಮಾಸ್ಟರ್‌ಪ್ಲ್ಯಾನ್‌..!

2016 ರಲ್ಲಿ, ಚೀನಾದ ಸರ್ಕಾರಿ ಮಾಧ್ಯಮ ನೆಟ್‌ವರ್ಕ್ ಕ್ಸಿನ್‌ಹುವಾಕ್ಕೆ ಸೇರಿದ ಮೂವರು ಪತ್ರಕರ್ತರನ್ನು ಭದ್ರತಾ ಏಜೆನ್ಸಿಗಳು "ತಮ್ಮ ಪತ್ರಿಕೋದ್ಯಮದ ಸಂಕ್ಷಿಪ್ತತೆಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಆರೋಪಿಸಿದ ನಂತರ ಭಾರತವು ಹೊರಹಾಕಿತ್ತು. ಅಂದಿನಿಂದ, ವಿಶೇಷವಾಗಿ ಏಪ್ರಿಲ್ 2020 ರಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಬಿಕ್ಕಟ್ಟಿನ ನಂತರ ಭಾರತ-ಚೀನಾ ಸಂಬಂಧಗಳಲ್ಲಿ ಬಿರುಕು ಹೆಚ್ಚಾಗಿದೆ. ಈ ವಿಚಾರವನ್ನು ಈಗ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ನಡುವೆ ಚರ್ಚಿಸಲಾಗುತ್ತಿದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!