
ಪಟನಾ (ನ. 06): ಸುಮಾರು 4 ದಶಕಗಳಿಂದ ಬಿಹಾರ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ, ಜೆಡಿಯು ನಾಯಕ, ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ (69) ಇದೇ ಮೊಟ್ಟಮೊದಲ ಬಾರಿಗೆ ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ಗುರುವಾರ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡುವ ವೇಳೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸುವ ಮೂಲಕ ನಿತೀಶ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
‘ಇಂದು ಚುನಾವಣಾ ಪ್ರಚಾರದ ಕೊನೆಯದಿನ. ಎರಡು ದಿನ ಬಿಟ್ಟು ಮತದಾನ ನಡೆಯಲಿದೆ. ಇದು ನನ್ನ ಚುನಾವಣೆ. ಅಂತ್ಯ ಒಳ್ಳೆಯದಾದರೆ ಎಲ್ಲವೂ ಒಳ್ಳೆಯದೇ’ ಎನ್ನುವ ಮೂಲಕ ನೆರೆದಿದ್ದ ಸಾವಿರಾರು ಜನ ಒಂದು ನಿಮಿಷ ಮೌನಕ್ಕೆ ತೆರಳುವಂತೆ ಮಾಡಿದರು. ತಕ್ಷಣವೇ 15 ವರ್ಷ ಮುಖ್ಯಮಂತ್ರಿಯಾಗಿ ಆಳಿದ ತಮ್ಮ ನಾಯಕನ ಕುರಿತು ನೆರೆದಿದ್ದ ಜನತೆ ಸುದೀರ್ಘ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಅಭಿನಂದಿಸಿದರು.
ಬೈಡೆನ್ ಪೂರ್ಣ ಅಧಿಕಾರ ನಡೆಸಲ್ಲ: ಕಮಲಾ ಅಧ್ಯಕ್ಷರಾಗ್ತಾರೆ!
ನಿತೀಶ್ ತಮ್ಮ ರಾಜಕೀಯ ಜೀವನದ ನಿವೃತ್ತಿ ಕುರಿತು ಮಾತನಾಡಿದ್ದು ಇದೇ ಮೊದಲು. ಕೆಲ ದಿನಗಳ ಹಿಂದೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಈಗಾಗಲೇ ದಣಿದಿದ್ದಾರೆ. ತಾನಿನ್ನೂ ಯುವಕ. ರಾಜ್ಯದ ಅಭಿವೃದ್ಧಿ ಮಾಡಬಲ್ಲೆ ಎನ್ನುವ ಮೂಲಕ ಸಿಎಂಗೆ ಟಾಂಗ್ ನೀಡಿದ್ದರು. ಅದರ ಬೆನ್ನಲ್ಲೇ ನಿತೀಶ್ರಿಂದ ಈ ಹೇಳಿಕೆ ಹೊರಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ