ಗುಡ್ ನ್ಯೂಸ್ : ನಿರೀಕ್ಷೆಗಿಂತ ಮೊದಲೇ ಭಾರತದ ಕೊರೋನಾ ಲಸಿಕೆ ಬಿಡುಗಡೆ

Kannadaprabha News   | Asianet News
Published : Nov 06, 2020, 07:55 AM ISTUpdated : Nov 06, 2020, 08:18 AM IST
ಗುಡ್ ನ್ಯೂಸ್ : ನಿರೀಕ್ಷೆಗಿಂತ ಮೊದಲೇ ಭಾರತದ ಕೊರೋನಾ  ಲಸಿಕೆ ಬಿಡುಗಡೆ

ಸಾರಾಂಶ

ಭಾರತೀಯರಿಗೆ ಇದು ಅತ್ಯಂತ ಸಿಹಿ ಸುದ್ದಿ ಇದು. ಶೀಘ್ರದಲ್ಲೇ ಭಾರತದಲ್ಲಿ ಕೊರೋನಾ ಲಸಿಕೆ ಬಿಡುಗಡೆ ಆಗಲಿದೆ. 

ನವದೆಹಲಿ (ನ.06): ಭಾರತ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್‌’ ನಿರೀಕ್ಷೆಗೂ ಮೊದಲೇ, ಅಂದರೆ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಈ ಮೊದಲು ಲಸಿಕೆ ಜೂನ್‌ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು.

ಭಾರತ್‌ ಬಯೋಟೆಕ್‌ ಎಂಬ ಖಾಸಗಿ ಔಷಧ ಕಂಪನಿಯು ಸರ್ಕಾರಿ ಸ್ವಾಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಹೈದರಾಬಾದ್‌ ವೈರಾಣು ಸಂಸ್ಥೆಯ ಸಹಯೋಗದಲ್ಲಿ ಈ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಎರಡು ಹಂತದ ಪ್ರಯೋಗದಲ್ಲಿ ಲಸಿಕೆ ಯಶಸ್ವಿಯಾಗಿದ್ದು, ಮೂರನೇ ಹಂತದ ಕೊನೆಯ ಪ್ರಯೋಗ ಈ ತಿಂಗಳು ಆರಂಭವಾಗುತ್ತಿದೆ. ಇಲ್ಲಿಯವರೆಗಿನ ಎಲ್ಲಾ ಪರೀಕ್ಷೆಯಲ್ಲೂ ಲಸಿಕೆ ಧನಾತ್ಮಕ ಫಲಿತಾಂಶ ನೀಡಿದೆ. ಕೊರೋನಾ ಬಾರದಂತೆ ತಡೆಯಲು ಲಸಿಕೆ ಸಮರ್ಥವೂ ಸುರಕ್ಷಿತವೂ ಆಗಿದೆ ಎಂಬುದು ಕಂಡುಬಂದಿದೆ. ಹೀಗಾಗಿ ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ಇದು ಬಳಕೆಗೆ ಲಭ್ಯವಾಗಬಹುದು ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿ ರಜನಿಕಾಂತ್‌ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಒಂದಂಕಿಗೆ ಇಳಿದ ಸೋಂಕಿತರ ಸಾವಿನ ಸಂಖ್ಯೆ ..

ಫೆಬ್ರವರಿಯಲ್ಲಿ ಈ ಲಸಿಕೆ ಬಿಡುಗಡೆಯಾದರೆ ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಕೊರೋನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆಯುವ ಸಾಧ್ಯತೆಯಿದೆ. ‘ಕೋವ್ಯಾಕ್ಸಿನ್‌ ಲಸಿಕೆಯನ್ನು ಮೂರನೇ ಹಂತದ ಪ್ರಯೋಗಕ್ಕೂ ಮೊದಲೇ ಬೇಕಾದರೂ ಜನರಿಗೆ ನೀಡಬಹುದು. ಆದರೆ, ಆ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ 1 ಮತ್ತು 2ನೇ ಹಂತದ ಪರೀಕ್ಷೆಯಲ್ಲಿ, ಅಂದರೆ ಸುರಕ್ಷತೆ ಮತ್ತು ದಕ್ಷತೆಯ ಪರೀಕ್ಷೆಯಲ್ಲಿ, ಇದು ಪಾಸಾಗಿದೆ. ಹೀಗಾಗಿ ಜನರಿಗೆ ಈಗಲೇ ಲಸಿಕೆ ನೀಡಬಹುದು. ಜನರು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿದ್ದರೆ ಲಸಿಕೆ ಪಡೆದುಕೊಳ್ಳಬಹುದು. ಆದರೆ, 3ನೇ ಹಂತದ ಪರೀಕ್ಷೆ ಮುಗಿಯುವವರೆಗೂ ಶೇ.100ರಷ್ಟುಗ್ಯಾರಂಟಿ ನೀಡಲು ಸಾಧ್ಯವಿಲ್ಲ’ ಎಂದೂ ಅವರು ಹೇಳಿದ್ದಾರೆ.

ಕೋವ್ಯಾಕ್ಸಿನ್‌ ಅಲ್ಲದೆ ಬ್ರಿಟನ್ನಿನ ಪ್ರಸಿದ್ಧ ಆಸ್ಟ್ರಾಜೆನೆಕಾ ಲಸಿಕೆ, ಮಾಡರ್ನಾ ಇಂಕ್‌ ಲಸಿಕೆ, ಫೈಸರ್‌ ಇಂಕ್‌ ಲಸಿಕೆ ಹಾಗೂ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಮುಂತಾದವೂ ಈಗಾಗಲೇ ಮೂರನೇ ಹಂತದ ಪ್ರಯೋಗದಲ್ಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ