ದುಷ್ಕೃತ್ಯಕ್ಕೆ ಬಂದ ಪಾಕ್‌ ಉಗ್ರನಿಗೆ ರಕ್ತ ನೀಡಿ ಜೀವ ಉಳಿಸಿದ ಸೇನೆ!

By Govindaraj SFirst Published Aug 26, 2022, 6:51 AM IST
Highlights

ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸುವ ದುರುದ್ದೇಶದಿಂದ ಬಂದ ಪಾಕಿಸ್ತಾನಿ ಉಗ್ರ ತಬರಾಕ್‌ ಹುಸ್ಸೇನ್‌ಗೆ ಭಾರತೀಯ ಸೇನೆ ರಕ್ತ ನೀಡಿ ಜೀವ ಉಳಿಸಿದ ಮಾನವೀಯ ಘಟನೆ ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದಿದೆ.

ಜಮ್ಮು (ಆ.26): ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸುವ ದುರುದ್ದೇಶದಿಂದ ಬಂದ ಪಾಕಿಸ್ತಾನಿ ಉಗ್ರ ತಬರಾಕ್‌ ಹುಸ್ಸೇನ್‌ಗೆ ಭಾರತೀಯ ಸೇನೆ ರಕ್ತ ನೀಡಿ ಜೀವ ಉಳಿಸಿದ ಮಾನವೀಯ ಘಟನೆ ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದಿದೆ. ಉಗ್ರ ಹುಸ್ಸೇನ್‌ ಪಾಕ್‌ ಆಕ್ರಮಿತ ಕಾಶ್ಮೀರದ ಸಬ್‌ಜೋತ್‌ ಗ್ರಾಮದ ನಿವಾಸಿಯಾಗಿದ್ದು, ಉಗ್ರ ಚಟುವಟಿಕೆ ನಡೆಸಲು ಭಾರತಕ್ಕೆ ಬಂದಿದ್ದ. ಆದರೆ ಭದ್ರತಾಪಡೆಗಳು ಜಮ್ಮುವಿನ ಗಡಿ ನಿಯಂತ್ರಣ ರೇಖೆ ಬಳಿಯಿಂದ ಹುಸ್ಸೇನ್‌ನನ್ನು ಬಂಧಿಸಿದ್ದರು. ಯೋಧರನ್ನು ಕಂಡಿದ್ದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಕ್ಕೆ ಆತನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಗುಂಡೇಟಿನಿಂದ ಹೆಚ್ಚಿನ ರಕ್ತಸ್ರಾವವಾಗಿ ಹುಸ್ಸೇನ್‌ ಸ್ಥಿತಿ ಗಂಭೀರವಾಗಿದ್ದು, ಯೋಧರೇ ಈತನಿಗೆ ರಕ್ತ ನೀಡಿ ಪ್ರಾಣ ಉಳಿಸಿದ್ದಾರೆ.

ವಿಚಾರಣೆ ವೇಳೆ ಇತರೆ 3-4 ಉಗ್ರರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು, ಭಾರತೀಯ ಯೋಧರ ವಿರುದ್ಧ ಆತ್ಮಾಹುತಿ ದಾಳಿ ನಡೆಸಲು ತನಗೆ ಪಾಕಿಸ್ತಾನಿ ಕರ್ನಲ್‌ ಹಣ ಯುನೂಸ್‌ ಚೌಧರಿ ಎಂಬಾತ ಹಣ ನೀಡಿದ್ದ ಎಂದು ಹುಸೇನ್‌ ಎಂದು ಬಾಯ್ಬಿಟ್ಟಿದ್ದಾನೆ. ಸೇನಾ ಆಸ್ಪತ್ರೆಯಲ್ಲಿ ಉಗ್ರನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ. ಗುಂಡೇಟಿನ ಗಾಯಗಳು ಗುಣವಾಗಲು ಕೆಲ ವಾರಗಳ ಸಮಯ ಬೇಕಾಗಲಿದೆ. ಆದರೆ ಉಗ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ

ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್‌ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ

ಬಿಜೆಪಿಯ ಪ್ರಮುಖ ರಾಜಕೀಯ ನಾಯಕನ ಹತ್ಯೆಗೆ ಸ್ಕೆಚ್‌: ಭಾರತದ ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಐಸಿಸ್ ಭಯೋತ್ಪಾದಕ ಗುಂಪಿನ ಸದಸ್ಯ ಆತ್ಮಾಹುತಿ ಬಾಂಬರ್ ಅನ್ನು ತನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್‌ಎಸ್‌ಬಿ) ಸೋಮವಾರ ಹೇಳಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. "ರಷ್ಯಾದ ಎಫ್‌ಎಸ್‌ಬಿ ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯರೊಬ್ಬರನ್ನು ಗುರುತಿಸಿ ಬಂಧಿಸಿದೆ. 

ಅವರು ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ನಾಗರೀಕನಾಗಿದ್ದು, ಭಾರತದ ಆಡಳಿತ ಪಕ್ಷ (ಬಿಜೆಪಿ) ನಾಯಕರೊಬ್ಬರ ವಿರುದ್ಧ ತನ್ನನ್ನು ಸ್ಫೋಟಿಸುವ ಮೂಲಕ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದನು’’ ಎಂದು ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತನನ್ನು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ಐಸಿಸ್ ನೇಮಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಇನ್ನು, ಈ ಉಗ್ರನನ್ನು ಅಜಾಮೋವ್‌ ಎಂದು ಗುರುತಿಸಲಾಗಿದ್ದು, ಈತ ರಷ್ಯಾದ ಅಧಿಕಾರಿಗಳ ಎದುರು ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈನ ತಪ್ಪೊಪ್ಪಿಗೆಯ 57 ಸೆಕೆಂಡುಗಳ ವಿಡಿಯೋವನ್ನೂ ಸಹ ರಷ್ಯಾ ಬಿಡುಗಡೆ ಮಾಡಿದೆ. 

ಉರಿ ಮಾದರಿಯಲ್ಲಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ 3 ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ!

"2022 ರಲ್ಲಿ ... ನಾನು ರಷ್ಯಾಕ್ಕೆ ಹಾರಿ, ಅಲ್ಲಿಂದ ಭಾರತಕ್ಕೆ ಹೋಗಬೇಕಾಗಿತ್ತು. ಭಾರತದಲ್ಲಿ, ಪ್ರವಾದಿ ಮೊಹಮ್ಮದ್‌ ಅವರನ್ನು ಅವಮಾನಿಸಿದ್ದಕ್ಕಾಗಿ, ಇಸ್ಲಾಮಿಕ್ ಸ್ಟೇಟ್‌ ಸೂಚನೆಯ ಮೇರೆಗೆ ಭಯೋತ್ಪಾದಕ ದಾಳಿಯನ್ನು ನಡೆಸಲು ನನಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಭೇಟಿ ಮಾಡಬೇಕಾಗಿತ್ತು" ಎಂದು ಬಂಧಿತನು ವಿಡಿಯೋದಲ್ಲಿ ಹೇಳಿದ್ದಾನೆ. ರಷ್ಯಾ ಪ್ರಕಾರ, ಅವನ ಉಪದೇಶವನ್ನು ದೂರದಿಂದಲೇ ಟೆಲಿಗ್ರಾಮ್ ಮೆಸೆಂಜರ್ ಖಾತೆಗಳ ಮೂಲಕ ಮತ್ತು ಇಸ್ತಾನ್‌ಬುಲ್‌ನಲ್ಲಿ IS ಪ್ರತಿನಿಧಿಯೊಂದಿಗೆ ವೈಯಕ್ತಿಕ ಸಭೆಗಳ ಸಮಯದಲ್ಲಿ ನಡೆಸಲಾಯಿತು. ಭಯೋತ್ಪಾದಕನು ರಷ್ಯಾಕ್ಕೆ ತೆರಳುವ ಮೊದಲು, ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ ಮತ್ತು ಭಾರತಕ್ಕೆ ಹಾರುವ ಕೆಲಸವನ್ನು ನೀಡುವ ಮೊದಲು ಐಸಿಸ್ ಅಮೀರ್‌ಗೆ ನಿಷ್ಠಾವಂತನಾಗಿ ಪ್ರಮಾಣ ಮಾಡಿದ್ದಾನೆ ಎಂದು ಎಫ್‌ಎಸ್‌ಬಿ ಗಮನಿಸಿದೆ.

click me!