ಇಂಟೆಲಿಜೆನ್ಸ್ ಅಂದ್ರೆ ಜೇಮ್ಸ್ ಬಾಂಡ್‌ ಸಿನಿಮಾದಂತಲ್ಲ: ನಿಯೋಜಿತ ಸೇನಾ ಮುಖ್ಯಸ್ಥ!

Suvarna News   | Asianet News
Published : Dec 22, 2019, 01:10 PM IST
ಇಂಟೆಲಿಜೆನ್ಸ್ ಅಂದ್ರೆ ಜೇಮ್ಸ್ ಬಾಂಡ್‌ ಸಿನಿಮಾದಂತಲ್ಲ: ನಿಯೋಜಿತ ಸೇನಾ ಮುಖ್ಯಸ್ಥ!

ಸಾರಾಂಶ

'ಇಂಟೆಲಿಜೆನ್ಸ್ ಎಂದರೆ ಜೇಮ್ಸ್ ಬಾಂಡ್ ಮೂವಿ ಅಂತಲ್ಲ'| ನಿಯೋಜಿತ  ಭೂಸೇನಾ ಮುಖ್ಯಸ್ಥ ಲೆ.ಜ. ಮನೋಜ್ ನಾರವಾನೆ|  'ಆರ್.ಎನ್. ಕಾವೋ: ಜಂಟಲ್‌ಮನ್ ಸ್ಪೈಮಾಸ್ಟರ್' ಪುಸ್ತಕ ಬಿಡುಗಡೆ| ನಿತಿನ್ ಗೋಖಲೆ ಬರೆದಿರುವ ಪುಸ್ತಕ ಬಿಡುಗಡೆ ಮಾಡಿದ ನಾರವಾನೆ| 'ಗುಪ್ತಚರ ಮಾಹಿತಿ ಹಾಗೂ ಸೇನಾ ಕಾರ್ಯಾಚರಣೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ'| 'ಕರಾರುವಕ್ಕಾದ ಮಾಹಿತಿ ಹೆಕ್ಕಿ ತೆಗೆಯಲು ಗುಪ್ತಚರ ಅಧಿಕಾರಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ'|

ಪುಣೆ(ಡಿ.22): ಗುಪ್ತಚರ ಕರ್ತವ್ಯ ಎಂದರೆ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ತೋರಿಸುವ ಬಂದೂಕು, ಆಕರ್ಷಕ ಮಹಿಳೆ ಹಾಗೂ ಗುಂಡು-ತುಂಡಿನ ಪಾರ್ಟಿಗಳಲ್ಲಂತಲ್ಲ ಎಂದು ನಿಯೋಜಿತ ಸೇನಾ ಮುಖ್ಯಸ್ಥ ಲೆ.ಜ. ಮನೋಜ್ ನಾರವಾನೆ ಹೇಳಿದ್ದಾರೆ.

ನಿತಿನ್ ಗೋಖಲೆ ಬರೆದಿರುವ 'ಆರ್.ಎನ್. ಕಾವೋ: ಜಂಟಲ್‌ಮನ್ ಸ್ಪೈಮಾಸ್ಟರ್' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಾರವಾನೆ, ಗುಪ್ತಚರ ಮಾಹಿತಿ ಹಾಗೂ ಸೇನಾ ಕಾರ್ಯಾಚರಣೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೇಳಿದರು.

ಸೇನಾಪಡೆಗಳಲ್ಲಿನ್ನು ಕೆಬಿ, ಚೋಟು, ಮನೋಜ್‌ರದ್ದೇ ಕಾರುಬಾರು!

ಮಿಲಿಟರಿ ಕಾರ್ಯಾಚರಣೆಗಳು ಶುರುವಾಗುವುದೇ 'ದುಶ್ಮನ್ ಕಾ ಖಬರ್'(ಶತ್ರುಗಳ ಕುರಿತು ಮಾಹಿತಿ)ನಿಂದ. ಮಿಲಿಟರಿ ಕಾರ್ಯಾಚರಣೆಗಳು ಯಶಸ್ವಿಯಾಗಬೇಕಾದರೆ ಬಾಹ್ಯ ಹಾಗೂ ಆಂತರಿಕ ಗುಪ್ತಚರ ಇಲಾಖೆ ಸದಾ ಜಾಗೂರಕತೆಯಿಂದ ಕೆಲಸ ಮಾಡಬೇಕು ಎಂದು ನಾರವಾನೆ ಹೇಳಿದರು. 

ಇಂಟೆಲಿಜೆನ್ಸ್ ಎಂದರೆ ಎಲ್ಲರೂ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ತೋರಿಸುವ ಕಾಲ್ಪನಿಕ ಹೀರೋ ಎಂಬಂತೆ ಭಾವಿಸುತ್ತಾರೆ. ಅದರೆ ಕರಾರುವಕ್ಕಾದ ಮಾಹಿತಿ ಹೆಕ್ಕಿ ತೆಗೆಯಲು ಗುಪ್ತಚರ ಅಧಿಕಾರಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂದು ಲೆ.ಜ ಅಭಿಪ್ರಾಯಪಟ್ಟರು.

ಆರ್.ಎನ್.ಕಾವೋ:

ಆರ್.ಎನ್. ಕಾವೋ ಭಾರತದ ಬಾಹ್ಯ ಗುಪ್ತಚರ ಇಲಾಖೆ ರಿಸರ್ಚ್ ಆಂಡ ಎನಾಲಿಸಿಸ್(ರಾ)ದ ಮೊದಲ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದರು. ಭಾರತದ ಗುಪ್ತಚರ ಇತಿಹಾಸದಲ್ಲಿ ಆರ್.ಎನ್. ಕಾವೋ ಸದಾ ಅಮರ.

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜಾಗಕ್ಕೆ ಅನುಭವಿ ಯೋಧ

ಬಾಂಗ್ಲಾದೇಶ ಸ್ವಾತಂತ್ರ್ಯ, ಸಿಕ್ಕಿಂ ಭಾರತಕ್ಕೆ ಸೇರ್ಪಡೆ ಹೀಗೆ ಅನೇಕ ಸೂಕ್ಮ ಭದ್ರತಾ ವಿಷಯಗಳಲ್ಲಿ ಆರ್.ಎನ್. ಕಾವೋ ಮಹತ್ವದ ಪಾತ್ರ ವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..