ಕ್ರಿಸ್‌ಮಸ್‌ ಆದ್ಮೇಲೆ ಚರ್ಚಿಸೋಣ: ಸಿಎಂ ಗೆ ಅಮಿತ್ ಶಾ ಹೇಳಿದ ಗುಟ್ಟೇನು?

By Suvarna NewsFirst Published Dec 15, 2019, 2:31 PM IST
Highlights

ಸಿಎಂ ಜೊತೆ ಕ್ರಿಸ್’ಮಸ್ ಜೊತೆ ಅಮಿತ್ ಶಾ ಮಾತುಕತೆ| ಕ್ರಿಸ್’ಮಸ್ ಆದ್ಮೇಲೆ ಅಮಿತ್ ಶಾ ಏನು ಮಾತನಡಿಲಿದ್ದಾರೆ? ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮೇಘಾಲಯದಲ್ಲಿ ಭಾರೀ ವಿರೋಧ| ಕಾಯ್ದೆಯಲ್ಲಿ ಬದಲಾವಣೆಗೆ ಸಿಎಂ ಕೋನಾರ್ಡ್ ಸಂಗ್ಮಾ ಮನವಿ| ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ ಅಮಿತ್ ಶಾ| ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಗೃಹ ಸಚಿವ|

ರಾಂಚಿ(ಡಿ.15): ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮೇಘಾಲಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಕಾಯ್ದೆಯ ವಿಮರ್ಶಾತ್ಮಕ ಚರ್ಚೆಗೆ ಸಿಎಂ ಕೋನಾರ್ಡ್ ಸಂಗ್ಮಾ ಜೊತೆ ಮಾತುಕತೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಜಾರ್ಖಂಡ್’ನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಯ್ದೆಯ ಪ್ರಯೋಜನಗಳ ಕುರಿತು ಈಶಾನ್ಯ ರಾಜ್ಯಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

CAB: ಈಶಾನ್ಯಕ್ಕೆ ರಾ‘ಜೀವ’ ತುಂಬಿದ ಚಂದ್ರಶೇಖರ್!

HM Amit Shah in J'khand y'day: Abhi CAB aya hai... Kal Meghalaya CM mujhe mile,unka aagreh tha ki kuch parivartan karne padenge. Maine unhe kaha hai ki aaram se beth kar sakaratmak roop se soch kar Meghalaya ki samasya ka samadhan nikalenge. Kisi ko darne ki zaroorat nahi pic.twitter.com/0LAQTFbYQL

— ANI (@ANI)

ಮೇಘಾಲಯ ಸಿಎಂ ಕೋನಾರ್ಡ್ ಸಂಗ್ಮಾ ಅವರನ್ನು ಭೇಟಿಯಾಗಿ ಕಾಯ್ದೆಯ ವಿಮರ್ಶಾತ್ಮಕ ಚರ್ಚೆ ನಡೆಸುವುದಾಗಿ ಶಾ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ಕಾಯ್ದೆ ಕಿಡಿ: ಶಿಲ್ಲಾಂಗ್ ಭೇಟಿ ರದ್ದುಗೊಳಿಸಿದ ಅಮಿತ್ ಶಾ!

ಕಾಯ್ದೆಯಲ್ಲಿ ಕೆಲವು ಬದಲಾವಣೆ ಮಾಡಲು ಸಂಗ್ಮಾ ಮನವಿ ಮಾಡಿದ್ದು, ಈ ಕುರಿತು ಕೇಂದ್ರ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದೆ ಎಂಧು ಶಾ ಭರವಸೆ ನೀಡಿದರು.

Thank you Hon’ble Home Minister ji for hearing us and assuring to resolve our concerns. pic.twitter.com/imQErbKc1X

— Conrad Sangma (@SangmaConrad)

ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯಿಂದಾಗಿ ಈಶಾನ್ಯ ರಾಜ್ಯಗಳ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ ಅಮಿತ್ ಶಾ, ಕಾಯ್ದೆಯ ಎಲ್ಲ ಆಯಾಮಗಳ ಕುರಿತು ಚರ್ಚೆಗೆ ನಾವು ಸಿದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!