ಮಗೆ ಆಪರೇಷನ್ ಥಿಯೇಟರ್ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ 7 ಜನ ಕೇರಳದ ಮೆಡಿಕಲ್ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಸಂಚಲನ ಸೃಷ್ಟಿಸಿದೆ.
ತಿರುವನಂತಪುರ: ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಚಾರದ ಬಗ್ಗೆ ಪರ ವಿರೋಧ ಚರ್ಚೆ ದೇಶಾದ್ಯಂತ ಮುಂದುವರಿದಿದೆ. ಈ ಮಧ್ಯೆ ತಮಗೆ ಆಪರೇಷನ್ ಥಿಯೇಟರ್ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ 7 ಜನ ಕೇರಳದ ಮೆಡಿಕಲ್ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಸಂಚಲನ ಸೃಷ್ಟಿಸಿದೆ. ತಿರುವನಂತಪುರದ ಸರ್ಕಾರಿ ಮೆಡಿಕಲ್ ಕಾಲೇಜಿನ 7 ವಿದ್ಯಾರ್ಥಿಗಳ ಗುಂಪು ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದು, ಆಪರೇಷನ್ ಥಿಯೇಟರ್ಗಳಲ್ಲಿ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ, ಹೀಗಾಗಿ ನಮಗೆ ಉದ್ದ ಕೈಗಳಿರುವ ಸ್ಕ್ರಬ್ ಜಾಕೆಟ್ (long-sleeved scrub jackets)ಹಾಗೂ ಸರ್ಜಿಕಲ್ ಹುಡ್ಸ್ (surgical hoods)ಧರಿಸಲು ಆದಷ್ಟು ಬೇಗ ಅವಕಾಶ ನೀಡಬೇಕು ಎಂದು 2020ನೇ ಬ್ಯಾಚ್ನ ಮೆಡಿಕಲ್ ವಿದ್ಯಾರ್ಥಿನಿ ಪತ್ರ ಬರೆದಿದ್ದು, ಇದಕ್ಕೆ 2018, 2021, 2022ನೇ ಬ್ಯಾಚ್ನ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.
ಆಪರೇಷನ್ ಥಿಯೇಟರ್ನೊಳಗೆ ತಲೆಯನ್ನು ಮುಚ್ಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿಲ್ಲ, ಆದರೆ ನಮ್ಮ ಧಾರ್ಮಿಕ ನಂಬಿಕೆ ಪ್ರಕಾರ, ಎಂತಹಾ ಸಂದರ್ಭದಲ್ಲೂ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ನಮ್ಮ ಧಾರ್ಮಿಕ ಧಿರಿಸನ್ನು ಧರಿಸುವುದರ ಜೊತೆಗೆ ನಮ್ಮ ಘನತೆಯನ್ನು ಕಾಪಾಡಿಕೊಂಡು ಆಪರೇಷನ್ ಥಿಯೇಟರ್ಗಳ ನಿಯಮಗಳನ್ನು ಪಾಲಿಸಿಕೊಂಡು ಎರಡರಲ್ಲೂ ಸಮತೋಲನ ಕಾಯ್ದುಕೊಂಡು ಹೋಗುತ್ತಿದ್ದು ಹಿಜಾಬ್ ಧರಿಸುವ ಮಹಿಳೆಯರಿಗೆ ಇದು ಕಷ್ಟದ ಸಮಯವಾಗಿದೆ. ಹೀಗಾಗಿ ಆದಷ್ಟು ಬೇಗ ನಮಗೆ ಆಪರೇಷನ್ ಥಿಯೇಟರ್ಗಳಲ್ಲಿಯೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು, ಸಾಧ್ಯವಾಗದಿದ್ದಲ್ಲಿ ನಮಗೆ ಉದ್ದ ಕೈಗಳಿರುವ ಸ್ಕ್ರಬ್ ಜಾಕೆಟ್ ಹಾಗೂ ಸರ್ಜಿಕಲ್ ಹುಡ್ಸ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಹಿಜಾಬ್ ವಿವಾದ ಭುಗಿಲೆದ್ದಿದ್ದ ಮಂಗಳೂರಿನ ಕಾಲೇಜಿನಲ್ಲಿ ಮತ್ತೊಂದು ವಿವಾದ!
ತಿರುವನಂತಪುರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಲಿನೆಟ್ಟೆ ಮೋರಿಸ್ (Dr Linette J Morris) ವಿದ್ಯಾರ್ಥಿಗಳು ಪತ್ರ ಬರೆದಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳು ಆಪರೇಷನ್ ಥಿಯೇಟರ್ಗಳಲ್ಲಿ ಉದ್ದನೆಯ ಕೈಗಳಿರುವ ಜಾಕೆಟ್ ಹಾಗೂ ಹೂಡ್ಸ್ಗಳನ್ನು ಬಳಸಲು ಬಯಸಿದ್ದಾರೆ. ನಾನು ಅವರಿಗೆ ದೀರ್ಘಾವಧಿಯಲ್ಲಿಯೂ ಈ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದೇನೆ ಏಕೆಂದರೆ ಆಪರೇಷನ್ ಥಿಯೇಟರ್ಗಳಲ್ಲಿ ಕೆಲಸ ಮಾಡುವಾಗ ಅಥವಾ ವೈದ್ಯರಿಗೆ ಸಹಾಯ ಮಾಡುವಾಗ ನಾವು ಮೊಣಕೈವರೆಗೆ ನೀರಿನಲ್ಲಿ ತೊಳೆಯಬೇಕಾಗುತ್ತದೆ. ಸ್ವಚ್ಛತೆ ಹಾಗೂ ಸೋಂಕು ತಡೆಯುವುದಕ್ಕಾಗಿ ನಾವು ಸಾರ್ವತ್ರಿಕ ಮಾನದಂಡವನ್ನು ಅನುಸರಿಸುತ್ತೇವೆ. ಹಾಗೂ ಇದನ್ನು ನಿರ್ಧರಿಸುವ ಸ್ಥಾನದಲ್ಲಿ ನಾನಿಲ್ಲ ಎಂದೂ ನಾನು ಅವರಿಗೆ ತಿಳಿಸಿದ್ದಾಗಿ ಪ್ರಾಂಶುಪಾಲರಾದ ಲಿನೆಟ್ಟೆ ಮೋರಿಸ್ ಹೇಳಿದ್ದಾರೆ.
ಕರ್ನಾಟಕ ಬಳಿಕ ಜಮ್ಮುಕಾಶ್ಮೀರದಲ್ಲೂ ಹಿಜಾಬ್ ವಿವಾದ, ವಿಶ್ವ ಭಾರತಿ ಶಾಲೆಯಲ್ಲಿ ಬಾಲಕಿಯರ ಪ್ರತಿಭಟನೆ!
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸಕರು ಮತ್ತು ಸೋಂಕು ನಿಯಂತ್ರಣ ತಜ್ಞರ ಸಭೆಯನ್ನು ಕರೆಯಲಾಗುವುದು. ಎಲ್ಲದಕ್ಕಿಂತಲೂ ಮೊದಲು ರೋಗಿಗಳ ಸುರಕ್ಷತೆಯು ಪ್ರಥಮ ಆದ್ಯತೆಯಾಗಿರುತ್ತದೆ. ಈ ಬಗ್ಗೆ ನಾವು ಸಮಿತಿಯನ್ನು ಕರೆದು ಚರ್ಚೆ ನಡೆಸುತ್ತೇವೆ ಹಾಗೂ ರೋಗಿಗಳ ಸುರಕ್ಷತೆಯತ್ತ ಮೊದಲ ಆದ್ಯತೆ ನೀಡುತ್ತೇವೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ, ಎಂದು 32 ವರ್ಷಗಳಿಂದ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿರುವ ಪ್ರಾಂಶುಪಾಲ ಡಾ.ಮೋರಿಸ್ ಹೇಳಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ, ಕುಲ, ಧರ್ಮವನ್ನು ಲೆಕ್ಕಿಸದೆ ಪ್ರಪಂಚದಾದ್ಯಂತ ಅನುಸರಿಸುತ್ತಿರುವ ಪ್ರಮಾಣಿತ ವ್ಯವಸ್ಥೆಯನ್ನೇ ನಾವು ಹೊಂದಿದ್ದೇವೆ. ವೈದ್ಯಕೀಯ ಕ್ಷೇತ್ರಕ್ಕೆ ಧರ್ಮವನ್ನು ತರಲು ನಾವು ಪ್ರಯತ್ನಿಸಬಾರದು. ಮೊದಲು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ನನ್ಗಳು ತಮ್ಮ ಧಾರ್ಮಿಕ ಉಡುಗೆಯನ್ನು ಆಪರೇಷನ್ ಥಿಯೇಟರ್ಗಳಲ್ಲಿ ಧರಿಸುತ್ತಿದ್ದರು, ಆದರೆ ನಂತರದಲ್ಲಿ ಅವರು ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ಉಡುಗೆಯನ್ನೇ ತೊಡಲು ಶುರು ಮಾಡಿದರು. ಸೋಂಕು ರಹಿತ ಕ್ರಿಮಿನಾಶಕ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಅನುಸರಿಸುವ ವೈದ್ಯಕೀಯ ತತ್ವಗಳನ್ನು ದುರ್ಬಲಗೊಳಿಸಬಾರದು ಎಂದು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಶಸ್ತ್ರಚಿಕಿತ್ಸೆಯ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ ರಾಜನ್ ಪಿ ಹೇಳಿದ್ದಾರೆ.