'ಆಪರೇಷನ್ ಸಿಂದೂರ್‌ ವೇಳೆ ಭಾರತಕ್ಕೆ ಆದ ಡ್ಯಾಮೇಜ್‌ ತೋರಿಸಿ..' ವಿದೇಶಿ ಮಾಧ್ಯಮಗಳಿಗೆ ಸವಾಲೆಸೆದ ಅಜಿತ್‌ ಧೋವಲ್‌

Published : Jul 11, 2025, 03:06 PM IST
National Security Advisor Ajit Doval

ಸಾರಾಂಶ

ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ದೋವಲ್ ಮಾತನಾಡುತ್ತಿದ್ದರು. 

ನವದೆಹಲಿ (ಜು.11): ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದನ್ನು ಟೀಕಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಯಾವುದೇ ಪ್ರದೇಶಗಳಿಗೆ ಆಗಿರುವ ಹಾನಿಯ ಒಂದೇ ಒಂದು ಚಿತ್ರವನ್ನು ಸಹ ಇವರುಗಳು ತೋರಿಸಲು ಸಾಧ್ಯವಿಲ್ಲಎಂದು ಹೇಳಿದರು. ನಿರ್ದಿಷ್ಟವಾಗಿ ನ್ಯೂಯಾರ್ಕ್ ಟೈಮ್ಸ್ ಅನ್ನು ಹೆಸರಿಸಿದ ಅಜಿತ್‌ ಧೋವಲ್‌, "ಅವರು ಕೆಲವೊಂದು ವಿಷಯಗಳನ್ನು ಬರೆದಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌. ಆದರೆ ಚಿತ್ರಗಳಲ್ಲಿ ಅವರು ಮೇ 10 ರ ಮೊದಲು ಮತ್ತು ನಂತರ ಪಾಕಿಸ್ತಾನದ 13 ವಾಯುನೆಲೆಗಳನ್ನು ತೋರಿಸಿವೆ..." ಎಂದು ಹೇಳಿದರು.

ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ್ ಸಮಯದಲ್ಲಿ ವ್ಯಾಪಕವಾಗಿ ಬಳಸಲಾದ ಭಾರತದ ಸ್ಥಳೀಯ ತಂತ್ರಜ್ಞಾನದ ಪರಾಕ್ರಮವನ್ನು ಶ್ಲಾಘಿಸಿದರು.

"ಅಲ್ಲಿ ಎಷ್ಟೊಂದು ಸ್ಥಳೀಯ ಸಾಮಗ್ರಿಗಳಿದ್ದವು ಎಂಬುದರ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ. ಬ್ರಹ್ಮೋಸ್‌ನಿಂದ ರಾಡಾರ್‌ಗಳವರೆಗೆ, ನಾವು ಸಂಪೂರ್ಣವಾಗಿ ಭಾರತೀಯ ಯುದ್ಧ ಸಾಮಗ್ರಗಳನ್ನು ಬಳಸಿದ್ದೇವೆ. ಪಾಕಿಸ್ತಾನದಾದ್ಯಂತ 9 ಭಯೋತ್ಪಾದಕ ಗುರಿಗಳನ್ನು ಟಾರ್ಗೆಟ್‌ ಮಾಡಲು ನಾವು ನಿರ್ಧರಿಸಿದ್ದೆವು. ಯಾವುದೂ ಕೂಡ ನಮ್ಮಿಂದ ತಪ್ಪಿಸಿಕೊಂಡಿಲ್ಲ. ಅದನ್ನು ಹೊರತುಪಡಿಸಿ ನಾವು ಬೇರೆಲ್ಲಿಯೂ ದಾಳಿ ಮಾಡಿಲ್ಲ." ಎಂದು ಹೇಳಿದ್ದಾರೆ.

"ನಾವು ಒಂದು ದೇಶಕ್ಕೆ ಸೇರಿದವರು, ಸಾವಿರ ವರ್ಷಗಳಿಂದ ತೊಂದರೆಗೊಳಗಾದ, ರಕ್ತಸಿಕ್ತ, ಅವಮಾನಕ್ಕೊಳಗಾದ ನಾಗರಿಕತೆಗೆ ಸೇರಿದವರು. ನಾವು ಬಹಳಷ್ಟು ಅನುಭವಿಸಿದ್ದೇವೆ. ನಮ್ಮ ಪೂರ್ವಜರು ಅನುಭವಿಸಿದ್ದಾರೆ. ನಮ್ಮ ಪಿತೃಗಳು ಕೂಡ ಇದನ್ನು ಎದುರಿಸಿದ್ದಾರೆ. ಈ ನಾಗರಿಕತೆಯನ್ನು ಜೀವಂತವಾಗಿಡಲು, ಈ ರಾಷ್ಟ್ರದ ಕಲ್ಪನೆಯನ್ನು ಜೀವಂತವಾಗಿಡಲು ಅವರು ಎಷ್ಟು ಅವಮಾನ, ಕಷ್ಟಗಳನ್ನು ಅನುಭವಿಸಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಅಜಿತ್‌ ಧೋವಲ್‌ ಹೇಳಿದ್ದಾರೆ.

ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸುವ ಕಾರ್ಯತಂತ್ರದ ಮಹತ್ವವನ್ನು ದೋವಲ್ ಒತ್ತಿ ಹೇಳಿದರು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಮತ್ತು ದತ್ತಾಂಶ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ತನ್ನ ಸಂವಹನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ದೇಶೀಯಗೊಳಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬಾಹ್ಯ ಬೆದರಿಕೆಗಳನ್ನು ಎದುರಿಸಲು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ಬಲಪಡಿಸಲು ಈ ಉಪಕ್ರಮ ಅತ್ಯಗತ್ಯ ಎಂದು ಅವರು ಗುರುತಿಸಿದರು. ಹೆಚ್ಚುವರಿಯಾಗಿ, ದೋವಲ್ ಕೃತಕ ಬುದ್ಧಿಮತ್ತೆಯ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು, ಇದನ್ನು "ಗೇಮ್-ಚೇಂಜರ್" ಎಂದು ಉಲ್ಲೇಖಿಸಿದರು ಮತ್ತು ವಿದೇಶಿ ಮೂಲಗಳನ್ನು ಅವಲಂಬಿಸದೆ ಭಾರತವು ಉದಯೋನ್ಮುಖ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

"5G ಅಭಿವೃದ್ಧಿಪಡಿಸಲು ಚೀನಿಯರು 12 ವರ್ಷಗಳನ್ನು ತೆಗೆದುಕೊಂಡು 300 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದಾರೆ. ನಮ್ಮಲ್ಲಿ ಆ ಸಮಯವೂ ಇಲ್ಲ, ಹಣವೂ ಇಲ್ಲ. ಕೇವಲ ಎರಡೂವರೆ ವರ್ಷಗಳಲ್ಲಿ, ನಾವು ಸ್ಥಳೀಯ ಪರ್ಯಾಯವನ್ನು ಸೃಷ್ಟಿಸಿದ್ದೇವೆ. ಈ ಸಾಧನೆಗೆ ನಾವು ನಮ್ಮ ಖಾಸಗಿ ವಲಯಕ್ಕೆ ಋಣಿಯಾಗಿದ್ದೇವೆ" ಎಂದು ಅವರು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್