ಏರ್ ಇಂಡಿಯಾ ಕ್ಯಾಟರಿಂಗ್ ಟೀಮ್ ಅವಾಂತರ: ವೆಜ್ ಆರ್ಡರ್ ಮಾಡಿದವಳಿಗೆ ಊಟದ ಮಧ್ಯೆ ಸಿಕ್ತು ಚಿಕನ್ ಫೀಸ್

Published : Jan 12, 2024, 02:19 PM ISTUpdated : Jan 12, 2024, 02:20 PM IST
ಏರ್ ಇಂಡಿಯಾ ಕ್ಯಾಟರಿಂಗ್ ಟೀಮ್ ಅವಾಂತರ: ವೆಜ್ ಆರ್ಡರ್ ಮಾಡಿದವಳಿಗೆ ಊಟದ ಮಧ್ಯೆ ಸಿಕ್ತು ಚಿಕನ್ ಫೀಸ್

ಸಾರಾಂಶ

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆರ್ಡರ್ ಮಾಡಿದ ಸಸ್ಯಾಹಾರಿ ಆಹಾರದಲ್ಲಿ ಚಿಕನ್ ಫೀಸ್ ಪತ್ತೆಯಾದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆರ್ಡರ್ ಮಾಡಿದ ಸಸ್ಯಾಹಾರಿ ಆಹಾರದಲ್ಲಿ ಚಿಕನ್ ಫೀಸ್ ಪತ್ತೆಯಾದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ವೀರ್ ಜೈನ್‌ ಎಂಬುವವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇವರು ಕ್ಯಾಲಿಕಟ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. 

ನಾನು ಏರ್ ಇಂಡಿಯಾ ವಿಮಾನ ಎಐ582 ದಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿ ನನಗೆ ಸಸ್ಯಾಹಾರಿ ಆಹಾರದ ಜೊತೆ ಚಿಕನ್ ಫೀಸ್ ನೀಡಿದರು. ನಾನು ಕ್ಯಾಲಿಕಟ್‌ನ  ವಿಮಾನ ನಿಲ್ದಾಣದಿಂದ ವಿಮಾನವೇರಿದ್ದು, 6.40ಕ್ಕೆ ಹೊರಡಬೇಕಾದ ವಿಮಾನ ರಾತ್ರಿ 7. 40ಕ್ಕೆ ಹೊರಟಿತ್ತು ಎಂದು ಬರೆದುಕೊಂಡಿರುವ ಅವರು ವಿಮಾನದಲ್ಲಿ ತಮಗೆ ಸರ್ವ್ ಮಾಡಿದ ಆಹಾರದ ಫೋಟೋವನ್ನು ಶೇರ್ ಮಾಡಿದ್ದಾರೆ. ಶೇರ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟ್ ವೈರಲ್ ಆಗಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ಏರ್ ಇಂಡಿಯಾವೂ ಕೂಡ ಮಹಿಳೆಯನ್ನು ಸಂಪರ್ಕಿಸಿದ್ದು, ತಮಗೆ ನೇರವಾಗಿ ಸಂದೇಶ ಕಳುಹಿಸುವ ಮೂಲಕ ನಮ್ಮನ್ನು ಸಂಪರ್ಕಿಸುವಂತೆ ಕೇಳಿದ್ದಾರೆ.

ಭಾರತಕ್ಕೆ ಬಂದಿಳಿಯಿತು ಮೊದಲ ವೈಡ್‌ ಬಾಡಿ ಎ 350 ವಿಮಾನ

ಶೇರ್ ಆಗಿರುವ ಫೋಟೋದಲ್ಲಿ ಅದು ಸಸ್ಯಾಹಾರಿ ಆಹಾರವೆಂದು ಉಲ್ಲೇಖವಿರುವ ಸ್ಲಿಪ್ ಕಾಣಿಸುತ್ತಿದೆ. ಆದರೂ ಆಹಾರ ಪೊಟ್ಟಣದೊಳಗೆ ನಾನ್ವೆಜ್ ತುಂಡೊಂದು ಸಿಕ್ಕಿದೆ. ಅಲ್ಲದೇ ಮತ್ತೊಂದು ಪೋಸ್ಟ್ ಮೂಲಕ ವೀರಾ ಜೈನ್ ಎಂಬುವವರು ಮತ್ತಷ್ಟು ಮಾಹಿತಿ ನೀಡಿದ್ದು, ನಾನು  ಆಹಾರದಲ್ಲಿ ಚಿಕನ್ ಕಾಣಿಸಿಕೊಂಡಿದ್ದರ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಸೋನಾ ಎಂಬುವವರಿಗೆ ತಿಳಿಸಿದಾಗ ಅವರು ಕ್ಷಮೆ ಕೇಳಿದರು. ಅಲ್ಲದೇ ಈ ವಿಚಾರವಾಗಿ ಇನ್ನು ಕೆಲವರು ದೂರು ನೀಡಿದ್ದಾರೆ ಎಂದು ಹೇಳಿದರು. ಆದರೆ ನಾವು ದೂರು ನೀಡಿದ ನಂತರವೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸಸ್ಯಾಹಾರ ಸೇವಿಸುತ್ತಿದ್ದ ಇತರರಿಗೂ ಅದರ ಬಗ್ಗೆ ಮಾಹಿತಿ ನೀಡದೇ ಸುಮ್ಮನಾಗಿದ್ದಾರೆ ಎಂದು ದೂರಿದ್ದಾರೆ.

ಸೋರುತ್ತಿದೆ ಏರ್ ಇಂಡಿಯಾ ಮಾಳಿಗೆ, ವೈರಲ್ ವೀಡಿಯೋಗೆ ಸಂಸ್ಥೆ ಸ್ಪಷ್ಟನೆ!

ಈ ಅನಾಹುತದ ಜೊತೆ ವಿಮಾನವೂ ಕೂಡ ಒಂದು ಗಂಟೆ ವಿಳಂಬವಾಗಿತ್ತು ಹೀಗಾಗಿ ಅಹ್ಮದಾಬಾದ್‌ಗೆ ಹೋಗಬೇಕಾದ ತಮ್ಮ ಜೊತೆಗಿದ್ದ ಸ್ನೇಹಿತೆಯ ರೈಲು ತಪ್ಪುವ ಸಾಧ್ಯತೆ ಇತ್ತು.  ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅವರು ಡಿಜಿಸಿಎ ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಟ್ಯಾಗ್ ಮಾಡಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!