
ನವದೆಹಲಿ:ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳುವ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರದ 'ಅಗ್ನಿವೀರ್' ಯೋಜನೆಯಡಿಯಲ್ಲಿ ಇದೀಗ ಮತ್ತೊಂದು ಅತ್ಯಂತ ಪ್ರಮುಖ ಹಾಗೂ ಶುಭ ಸುದ್ದಿ ಹೊರಬಿದ್ದಿದೆ. ೪ ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ ನಂತರ ಕೇವಲ ಶೇಕಡಾ 25ರಷ್ಟು ಅಗ್ನಿವೀರರನ್ನು ಮಾತ್ರವೇ ಖಾಯಂ ಸೈನಿಕರನ್ನಾಗಿ ಉಳಿಸಿಕೊಳ್ಳಲಾಗುವುದು ಎಂಬ ನಿಯಮವನ್ನು ಬದಲಾಯಿಸಿ, ಈ ಮಿತಿಯನ್ನು ಶೇಕಡಾ 50-75ಕ್ಕೆ ಹೆಚ್ಚಿಸಲು ಸಶಸ್ತ್ರ ಪಡೆಗಳು ಚಿಂತನೆ ನಡೆಸಿವೆ. ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಮೊದಲ ಬ್ಯಾಚ್ ಅಗ್ನಿವೀರರು ತಮ್ಮ ೪ ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸುತ್ತಿದ್ದಂತೆ, ಈ ನೀತಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಲು ಸೇನೆಯ ಪ್ರಮುಖ ವಿಭಾಗಗಳು ರಕ್ಷಣಾ ಸಚಿವಾಲಯ ಹಾಗೂ 'ಮಿಲಿಟರಿ ವ್ಯವಹಾರಗಳ ಇಲಾಖೆಗೆ' ಪ್ರಸ್ತಾವನೆ ಸಲ್ಲಿಸಿವೆ. ಯಾವ ವಿಭಾಗದಲ್ಲಿ ಎಷ್ಟು ಶೇಕಡಾ ಹೆಚ್ಚಳ? ಇಲ್ಲಿದೆ ಸಂಪೂರ್ಣ ವಿವರ!
ನೌಕಾಪಡೆಯಲ್ಲಿ ತಾಂತ್ರಿಕ ಹಾಗೂ ಜಟಿಲ ಯುದ್ಧ ನೌಕೆಗಳ ಕಾರ್ಯಾಚರಣೆಗೆ ಸುದೀರ್ಘ ತರಬೇತಿಯ ಅಗತ್ಯವಿರುತ್ತದೆ. ಹೀಗಾಗಿ, ನೌಕಾಪಡೆಯು ತನ್ನಲ್ಲಿ ತರಬೇತಿ ಪಡೆದ ಶೇಕಡಾ 75ರಷ್ಟು ಅಗ್ನಿವೀರರನ್ನು ಖಾಯಂ ಸೇವೆಯಲ್ಲಿ ಉಳಿಸಿಕೊಳ್ಳಲು ಅತ್ಯಂತ ಹೆಚ್ಚಿನ ಆಸಕ್ತಿ ವಹಿಸಿದೆ.
ಭಾರತೀಯ ಭೂಸೇನೆ ಹಾಗೂ ವಾಯುಪಡೆಗಳು ಪ್ರಸ್ತುತ ಇರುವ ಶೇ. 25ರ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಿಸಲು ಪ್ರಸ್ತಾವನೆ ನೀಡಿವೆ. ಶೇ. 75ರಷ್ಟು ವಿಸ್ತರಣೆಗೆ ಪ್ರಮುಖ ಕಾರಣಗಳೆಮದರೆ, ಅನುಭವ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ, 4 ವರ್ಷಗಳ ಕಾಲ ಕಠಿಣ ತರಬೇತಿ ಪಡೆದು, ಆಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಪರಿಣತಿ ಹೊಂದಿದ ಅಗ್ನಿವೀರರನ್ನು ಸೇವೆಯಿಂದ ಕೈಬಿಟ್ಟರೆ, ಆ ಅನುಭವದ ಲಾಭ ಸೇನೆಗೆ ಸಿಗುವುದಿಲ್ಲ. ಹೀಗಾಗಿ ತರಬೇತಿ ಪಡೆದ ಸೈನಿಕರ ಅನುಭವವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ.
ಪ್ರತಿ 4 ವರ್ಷಕ್ಕೊಮ್ಮೆ ಹೊಸಬರಿಗೆ ಶೂನ್ಯದಿಂದ ತರಬೇತಿ ನೀಡುವುದು ಅಪಾರ ವೆಚ್ಚ ಹಾಗೂ ಸಮಯ ಬೇಡುವ ಪ್ರಕ್ರಿಯೆ. ಈಗಾಗಲೇ ತರಬೇತಿ ಹೊಂದಿದವರನ್ನು ಮುಂದುವರಿಸುವುದರಿಂದ ಸೇನೆಯ ಆಡಳಿತಾತ್ಮಕ ವೆಚ್ಚ ಕಡಿಮೆಯಾಗುತ್ತದೆ. ಸೇನೆಯ ಬಲವರ್ಧನೆ: ದೇಶದ ಗಡಿ ಭದ್ರತೆ, ಆಧುನಿಕ ತಂತ್ರಜ್ಞಾನ ಆಧಾರಿತ ಯುದ್ಧ ಶೈಲಿ ಮತ್ತು ಸೇನೆಯಲ್ಲಿದ್ದ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಸುಸಜ್ಜಿತ ಯುವ ಸೈನಿಕರ ಅಗತ್ಯವಿದೆ.
ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ದೊರೆತರೆ, ಅಗ್ನಿವೀರರಾಗಿ ಸೇನೆಗೆ ಸೇರುವ ಲಕ್ಷಾಂತರ ಯುವಕರಿಗೆ ಸೇನೆಯಲ್ಲಿ ಖಾಯಂ ಉದ್ಯೋಗ ಪಡೆಯುವ ಅವಕಾಶ ಮೂರು ಪಟ್ಟು ಹೆಚ್ಚಾಗಲಿದೆ. ಶೇ. 75ರಷ್ಟು ಸೈನಿಕರು ಖಾಯಂ ಆದರೆ, ಉದ್ಯೋಗ ಭದ್ರತೆಯ ಆತಂಕವೂ ದೂರವಾಗಲಿದೆ. ಇದಲ್ಲದೆ, 4 ವರ್ಷಗಳ ನಂತರ ಹೊರಬರುವಳಿದ ಶೇ. 25ರಷ್ಟು ಸೈನಿಕರಿಗೆ ಸಶಸ್ತ್ರ ಗಡಿ ಪಡೆಗಳು, ರಾಜ್ಯ ಪೊಲೀಸ್ ಇಲಾಖೆಗಳು ಹಾಗೂ ಭಾರತೀಯ ರೈಲ್ವೇಯಲ್ಲಿ 10% ರಿಂದ 15% ರವರೆಗೆ ಮೀಸಲಾತಿ ಹಾಗೂ 'ಸೇವಾ ನಿಧಿ' ಪ್ಯಾಕೇಜ್ಗಳು ಕೂಡ ಎಂದಿನಂತೆ ಲಭ್ಯವಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ