
ಅಹಮದಾಬಾದ್: ಅತಿ ತೀವ್ರ ಸ್ವರೂಪದ ಚಂಡಮಾರುತವಾಗಿ ಪರಿವರ್ತನೆಗೊಂಡಿರುವ ‘ಬಿಪೊರ್ಜೊಯ್’ ಚಂಡಮಾರುತ, ಗುಜರಾತ್ನ ಕಛ್ ಜಿಲ್ಲೆಯ ಜಖಾವು ಬಂದರಿಗೆ ಜೂ.15ರಂದು ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತವು ಗಂಟೆಗೆ 150 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಬೀಸುವ ಸಾಧ್ಯತೆ ಇದ್ದು, ಭಾರಿ ವಿನಾಶ ಸೃಷ್ಟಿಸುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (, Prime Minister Narendra Modi) ಅವರು ದಿಲ್ಲಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿ, ವಿಪತ್ತು ನಿರ್ವಹಣೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಆಡಳಿತಕ್ಕೆ ಸೂಚಿಸಿದ್ದಾರೆ.
ಸಂಭಾವ್ಯ ಅನಾಹುತ ತಪ್ಪಿಸುವ ಉದ್ದೇಶದಿಂದ ಕಛ್, ಪೋರಬಂದರ್(Porbandar), ದೇವಭೂಮಿ ದ್ವಾರಕಾ (Devabhoomi Dwarka), ಜುನಾಗಢ (Junagadh) ಹಾಗೂ ಮೋರ್ಬಿ ಕರಾವಳಿಯಲ್ಲಿ ಅಪಾಯದ ವಲಯದಲ್ಲಿರುವ ಜನರ ತೆರವು ಕಾರ್ಯಾಚರಣೆ ಆರಂಭವಾಗಿದೆ. ಸೋಮವಾರ ಸುಮಾರು 7500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಸಮುದ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಾಯದ ವಲಯವನ್ನು ಗುರುತಿಸಲಾಗಿದ್ದು, ಶೀಘ್ರ ಇನ್ನೂ 23 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
Cyclone Biparjoy: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ!
ಚಂಡಮಾರುತ ಸೋಮವಾರ ಬೆಳಗ್ಗೆ 8.30ಕ್ಕೆ ಪೋರಬಂದರ್ನಿಂದ ನೈಋುತ್ಯ ಭಾಗಕ್ಕೆ 320 ಕಿ.ಮೀ. ದೂರದಲ್ಲಿತ್ತು. ಹೀಗಾಗಿ ಕಛ್ ಹಾಗೂ ಸೌರಾಷ್ಟ್ರದಲ್ಲಿ ಈಗಾಗಲೇ ಭಾರಿ ಗಾಳಿ ಬೀಸತೊಡಗಿದೆ. ವಲ್ಸದ್, ಗಿರ್, ಭಾವನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆ ಬಿದ್ದಿದೆ. ಜೂ.15 ಹಾಗೂ 16ರಂದು ಈ ವಲಯದಲ್ಲಿ ಭಾರಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಡಲಿಗೆ ಯಾರೂ ಇಳಿಯದಂತೆ ಕಟ್ಟೆಚ್ಚರ ಸಾರಲಾಗಿದೆ.
ಈ ನಡುವೆ, ಮುಂಜಾಗ್ರತಾ ಕ್ರಮವಾಗಿ ಪಿಪಾವಾವ್ ಬಂದರಿನ (Pipavao port) ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ದೇಶದ 2 ಮುಖ್ಯ ಬಂದರುಗಳಾದ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳ ಗುಜರಾತ್ ಕರಾವಳಿಯಲ್ಲೇ ಇದ್ದು, ಅಲ್ಲೂ ಮುಂಜಾಗ್ರತೆ ವಹಿಸಲಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ 19 ತಂಡಗಳು (7 ಎನ್ಡಿಆರ್ಎಫ್ ಹಾಗೂ 12 ಎಸ್ಡಿಆರ್ಎಫ್ ತಂಡಗಳು) ಸನ್ನದ್ಧ ಸ್ಥಿತಿಯಲ್ಲಿವೆ. ಸೇನೆ, ನೌಕಾಪಡೆ ಹಾಗೂ ಕರಾವಳಿ ಪಡೆಗಳ (Army, navy and security forces)ಜತೆಗೂ ಗುಜರಾತ್ ಸರ್ಕಾರ ಸಂಪರ್ಕದಲ್ಲಿದ್ದು, ತೀರಾ ಆಪಾಯದ ಸ್ಥಿತಿ ಸೃಷ್ಟಿಯಾದರೆ ನೆರವಿಗೆ ಬರುವಂತೆ ಕೋರಲಾಗಿದೆ.
Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು
ಪಾಕ್ನಲ್ಲೂ ಕಟ್ಟೆಚ್ಚರ:
ಗುಜರಾತ್ ಕರಾವಳಿಗೆ ಹೊಂದಿಕೊಂಡಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ತೀರ ಪ್ರದೇಶದ ಜನರ ಸ್ಥಳಾಂತರ ಆರಂಭಿಸಲಾಗಿದೆ.ಈ ಹಿಂದೆ ಗುಜರಾತ್ನಲ್ಲಿ 1998ರಲ್ಲಿ ಬೀಸಿದ ಚಂಡಮಾರುತ 4000 ಜನರನ್ನು ಬಲಿ ಪಡೆದಿತ್ತು.
ಸುದೀರ್ಘದ ದಾಖಲೆ:
ಬಿಪೊರ್ಜೊಯ್, ಅರಬ್ಬಿಸಮುದ್ರದಲ್ಲಿ ಅತಿಹೆಚ್ಚು ಜೀವಿತಾವಧಿ ಹೊಂದಿದ್ದ ಚಂಡಮಾರುತ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂ.6ರಂದು ಸೃಷ್ಟಿಯಾಗಿದ್ದ ಚಂಡಮಾರುತ ಜೂ.15ರಂದು ಗುಜರಾತ್ ಕರಾವಳಿ ಹಾದು ಹೋಗಲಿದೆ. ಅಂದರೆ 10 ದಿನಗಳ ಕಾಲ ಇರಲಿದೆ. ಈ ಹಿಂದೆ 2019ರಲ್ಲಿ ಅಪ್ಪಳಿಸಿದ್ದ ಕ್ಯಾರ್ ಚಂಡಮಾರುತ 9 ದಿನ 15 ಗಂಟೆ ಇತ್ತು. ಅದೇ ರೀತಿ 2018ರಲ್ಲಿ ದಾಳಿ ಮಾಡಿದ್ದ ಗಜ ಕೂಡಾ 9 ದಿನ 15 ಗಂಟೆಗಳ ಕಾಲ ಇತ್ತು.
11 ಜನರ ಏರ್ಲಿಫ್ಟ್
ಚಂಡಮಾರುತ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗುಜರಾತ್ ಕರಾವಳಿಯ ದ್ವಾರಕಾ ಬಳಿ ಇರುವ ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಏರ್ಲಿಫ್ಟ್ ಮಾಡಿ ಸುರಕ್ಷಿತವಾಗಿ ಕರೆತಂದಿದ್ದಾರೆ. ಅಪಾಯ ವಲಯದಲ್ಲಿರುವ ಜನರ ಸುರಕ್ಷತೆಗೆ ಗಮನ ಕೊಡಿ. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜೀವ ಹಾನಿ ತಪ್ಪಿಸಿ. ಅಗತ್ಯ ವಸ್ತುಗಳನ್ನು ಸಿದ್ಧವಾಗಿಡಿ. ಒಂದು ವೇಳೆ ಅನಾಹುತ ಸಂಭವಿಸಿದರೆ ಮರು ನಿರ್ಮಾಣ ಕಾರ್ಯ ತಕ್ಷಣವೇ ಆರಂಭವಾಗುವಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ