ಪಾಕ್‌ನಿಂದ ಮಸೂದ್ ಅಜರ್ ಕುಟುಂಬಕ್ಕೆ ₹14 ಕೋಟಿ ಪರಿಹಾರ

Published : May 15, 2025, 07:48 AM IST

ಆಪರೇಷನ್ ಸಿಂದೂರದಲ್ಲಿ ಮೃತಪಟ್ಟ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬಕ್ಕೆ ಪಾಕಿಸ್ತಾನ ಸರ್ಕಾರ ₹14 ಕೋಟಿ ಪರಿಹಾರ ಘೋಷಿಸಿದೆ. ಅಜರ್ ಕುಟುಂಬದ 14 ಸದಸ್ಯರಿಗೆ ತಲಾ ₹1 ಕೋಟಿ ಪರಿಹಾರ ನೀಡಲಾಗುವುದು.

PREV
15
ಪಾಕ್‌ನಿಂದ ಮಸೂದ್ ಅಜರ್ ಕುಟುಂಬಕ್ಕೆ ₹14 ಕೋಟಿ ಪರಿಹಾರ

ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್ ಅಜರ್ ಕುಟುಂಬದ 14 ಜನರಿಗೆ ಒಟ್ಟು 14 ಕೋಟಿ ರು. ಪರಿಹಾರ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತಾನು ಉಗ್ರಪೋಷಿತ ರಾಷ್ಟ್ರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

25

ಭಾರತದ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ತಲಾ 1 ಕೋಟಿ ರು, ಪರಿಹಾರ ಘೋಷಿಸಿದ್ದಾರೆ. ಅಜರ್ ಕುಟುಂಬದ 14 ಮಂದಿ ಸತ್ತಿದ್ದು, ಆತನೇ 14 ಕೋಟಿ ರು, ಪರಿಹಾರ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಭಾರತದ ದಾಳಿಯಲ್ಲಿ ಅಜರ್‌ನ ಸಹೋದರಿ, ಭಾವ , ಅಳಿಯ ಮಕ್ಕಳು, ಆಪ್ತರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.

35

ಭಾರತದ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆಯಲ್ಲಿ ತನ್ನ ಕುಟುಂಬದ 10 ಜನ ಹಾಗೂ ತನ್ನ ನಾಲ್ವರು ಸಹಾಯಕರು ಸಾವನ್ನಪ್ಪಿದ್ದಾರೆ ಎಂದು ಆತ ಹೇಳಿಕೆ ನೀಡಿದ್ದಾನೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿತ್ತು. 

45

ಅಲ್ಲಾಹನ ಅತಿಥಿಗಳು

ನನ್ನ ಕುಟುಂಬದ ಹತ್ತು ಸದಸ್ಯರು ಒಟ್ಟಿಗೆ ಈ ಸಂತೋಷವನ್ನು ಪಡೆದರು. ಐವರು ಮುಗ್ಧ ಮಕ್ಕಳು, ನನ್ನ ಅಕ್ಕ, ಅವರ  ಪತಿ. ನನ್ನ ವಿದ್ವಾಂಸ ಫಜಿಲ್ ಭಂಜೆ (ಸೋದರಳಿಯ) ಮತ್ತು ಅವರ ಪತ್ನಿ ಮತ್ತು ನನ್ನ ಪ್ರೀತಿಯ ವಿದ್ವಾಂಸ ಫಜಿಲಾ (ಭಂಜಿ) ... ನನ್ನ ಪ್ರೀತಿಯ ಸಹೋದರ ಹುಜೈಫಾ ಮತ್ತು ಅವರ ತಾಯಿ. ಇನ್ನೂ ಇಬ್ಬರು ಆತ್ಮೀಯ ಸಹಚರರು ಕೊಲ್ಲಲ್ಲಪಟ್ಟಿದ್ದು, ಅವರು ಅಲ್ಲಾಹನ ಅತಿಥಿಗಳಾಗಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾನೆ.

55

ಅವರು ಹೊರಡುವ ಸಮಯ ಬಂದಿತ್ತು, ಆದರೆ ಭಗವಂತ ಅವರನ್ನು ಕೊಲ್ಲಲಿಲ್ಲ ಎಂದು ಅಜರ್ ಹೇಳಿದ್ದು, ಅವರ ಅಂತ್ಯಕ್ರಿಯೆಯ ಪ್ರಾರ್ಥನೆಗೆ ಬರುವಂತೆ ಜನರನ್ನು ಆಹ್ವಾನಿಸಿ ಉಗ್ರ ಮಸೂದ್ ಅಜರ್ ಹೇಳಿಕೆ ಬಿಡುಗಡೆ ಮಾಡಿದ್ದನು.

Read more Photos on
click me!

Recommended Stories