ವಾಟರ್ ಪ್ಲಾಂಟ್ ಮನೆಯಲ್ಲಿದ್ರೆ ಈ ತಪ್ಪು ಮಾಡ್ಬೇಡಿ, ಜೋರಾಗುತ್ತೆ ರಾಹು - ಕೇತು ಅಬ್ಬರ

Published : May 18, 2026, 04:42 PM IST

ನಿಮ್ಮ ಮನೆಯಲ್ಲೂ ವಾಟರ್ ಪ್ಲಾಂಟ್ ಇದ್ರೆ ಅದನ್ನು ನಿಮ್ಮಿಷ್ಟದಂತೆ ಬೆಳೆಸಬೇಡಿ. ನೀವು ಮಾಡುವ ಕೆಲ ತಪ್ಪುಗಳು ವಾಸ್ತುದೋಷಕ್ಕೆ ಕಾರಣವಾಗುತ್ತವೆ. ಇದ್ರಿಂದ ನಾನಾ ಸಮಸ್ಯೆ ಎದುರಾಗುತ್ತದೆ. 

PREV
16
ವಾಟರ್ ಪ್ಲಾಂಟ್ ವಾಸ್ತು

ವಾಟರ್ ಪ್ಲಾಂಟ್ ಮನೆಯ ಸೌಂದರ್ಯ ಹೆಚ್ಚಿಸೋದಲ್ದೆ ಸಕಾರಾತ್ಮಕ ಶಕ್ತಿಗೆ ಕಾರಣವಾಗುತ್ವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಡಲಾಗ್ತಿದೆ. ಮನಿ ಪ್ಲಾಂಟ್ , ಬಿದಿರಿನಂತಹ ನೀರಿನ ಗಿಡಗಳನ್ನು ಗಾಜಿನ ಬಾಟಲಿಯಲ್ಲಿ ಬೆಳೆಸಲಾಗ್ತಿದೆ. ಈ ಗಿಡಗಳಿಗೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲ ವಿಷಯಗಳ ಬಗ್ಗೆ ಗಮನ ಹರಿಸದಿದ್ರೆ ರಾಹು – ಕೇತುವಿನ ಕಾಟ ಹೆಚ್ಚಾಗುತ್ತದೆ.

26
ನೀರು ಬದಲಿಸಿ

ನೀರಿನ ಬಾಟಲಿಯಲ್ಲಿ ಬೆಳೆಯುವ ಈ ವಾಟರ್ ಪ್ಲಾಂಟ್ ಗಳನ್ನು ಬೆಳೆಸುವಾಗ ಇರುವ ಆಸಕ್ತಿ ನಂತ್ರ ಇರೋದಿಲ್ಲ. ಬಾಟಲಿಗೆ ಹಾಕಿದ ನೀರನ್ನು ಬಹುತೇಕರು ಬದಲಿಸೋದಿಲ್ಲ. ತಿಂಗಳವರೆಗೆ ಬಾಟಲಿ ನೀರು ಬದಲಾಗೋದಿಲ್ಲ. ಅನೇಕರು ಮಾಡುವ ಈ ತಪ್ಪು ದೋಷಕ್ಕೆ ಕಾರಣವಾಗುತ್ತದೆ. ಇದ್ರಿಂದ ರಾಹು ಕೋಪಗೊಳ್ತಾನೆ. ಕೊಳಕು ಹಾಗೂ ವಾಸನೆ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ನೀವು ನಾಲ್ಕರಿಂದ ಐದು ದಿನಕ್ಕೊಮ್ಮೆ ನೀರು ಬದಲಿಸಿ.

36
ಕೊಳೆಯುವ ಎಲೆ

ವಾಟರ್ ಪ್ಲಾಂಟ್ ಎಲೆಗಳ ಬಗ್ಗೆಯೂ ಗಮನ ಹರಿಸಬೇಕು. ಎಲೆಗಳು ಹಳದಿಯಾದ್ರೆ, ಕೊಳೆತ್ರೆ ಜನರು ಅದನ್ನು ತೆಗೆಯೋದಿಲ್ಲ. ಕೊಳೆತ ಎಲೆ ಗಿಡದ ಮೇಲಿದ್ರೆ ಕೇತುವಿನ ಪ್ರಭಾವ ಹೆಚ್ಚಾಗುತ್ತದೆ. ಇದು ಕುಟುಂಬದಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಎಲೆ ಹಳದಿ ಅಥವಾ ಒಣಗಿದಂತೆ ಕಂಡುಬಂದ ತಕ್ಷಣ ಅದನ್ನು ಕತ್ತರಿಸಿ.

46
ಸೂರ್ಯನ ಬೆಳಕು

ಪ್ರತಿಯೊಂದು ಗಿಡಕ್ಕೂ ನೀರು ಹಾಗೂ ಸೂರ್ಯನ ಬೆಳಕು ಅಗತ್ಯವಿರುತ್ತದೆ. ಮನೆಯ ಮೂಲೆಯಲ್ಲಿ ಗಿಡವಿದ್ರೆ ಅದಕ್ಕೆ ಸೂರ್ಯನ ಬೆಳಕು ಸರಿಯಾಗಿ ಸಿಗೋದಿಲ್ಲ. ಸೂರ್ಯನ ಬೆಳಕಿನ ಕೊರತೆ ಸಸ್ಯಕ್ಕೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಇದರಿಂದ ಉದ್ವಿಗ್ನತೆ ಮತ್ತು ಸಂಘರ್ಷ ಹೆಚ್ಚಾಗುತ್ತದೆ. ತಾಜಾ ಬೆಳಕು ಸಿಗುವ ಹಾಗೂ ಸೂರ್ಯನ ಬೆಳಕಿರುವ ಜಾಗದಲ್ಲಿ ಗಿಡ ಬೆಳೆಸಿ.

56
ಈ ತಪ್ಪು ಮಾಡಬೇಡಿ

ವಾಟರ್ ಪ್ಲಾಂಟ್ ನೆಡಲು ಸರಿಯಾದ ವಿಧಾನವಿದೆ. ವರ್ಣರಂಜಿತ ಹಾಗೂ ಪ್ಲಾಸ್ಟಿಕ್ ಪಾಟ್ ನಲ್ಲಿ ವಾಟರ್ ಪ್ಲಾಂಟ್ ಬೆಳೆಸಬಾರದು. ಇದು ಗಂಭೀರ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ವಾಟರ್ ಪ್ಲಾಂಟ್ ಬೆಳೆಸಿದ್ರೆ ಅದು ಧನಾತ್ಮಕ ಶಕ್ತಿಯನ್ನು ತೆಗೆಯುತ್ತದೆ. ವಾಟರ್ ಪ್ಲಾಂಟನ್ನು ಯಾವಾಗಲೂ ಗಾಜಿನ ಅಥವಾ ಸೆರಾಮಿಕ್ ಮಡಕೆಗಳಲ್ಲಿ ಇಡಬೇಕು.

66
ದಿಕ್ಕು ಮುಖ್ಯ

ವಾಸ್ತು ಶಾಸ್ತ್ರದ ಪ್ರಕಾರ, ವಾಟರ್ ಪ್ಲಾಂಟ್ ಗಳನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು. ವಿಶೇಷವಾಗಿ, ಅವುಗಳನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬಾರದು. ತಪ್ಪು ದಿಕ್ಕಿನಲ್ಲಿ ಸಸ್ಯವನ್ನು ಬೆಳೆಸಿದ್ರೆ ಆರ್ಥಿಕ ತೊಂದರೆಗಳು ಉಂಟಾಗಬಹುದು. ವಾಸ್ತು ಪ್ರಕಾರ, ನೀರು ತುಂಬಿದ ಸಸ್ಯಗಳನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

Read more Photos on
click me!

Recommended Stories