ಏನಿದು ವಿಶೇಷ ಪರಿಹಾರ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ನೀವು ಯಾವುದೇ ಪ್ರಮುಖ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಈ ಕೆಳಗಿನ ಕ್ರಮವನ್ನು ಅನುಸರಿಸಬಹುದು..
ಮನೆಯಿಂದ ಹೊರಬರುವಾಗ ಕೇವಲ ಒಂದು ಅಕ್ಕಿ ಕಾಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ.
ಮನೆಯ ಹೊಸ್ತಿಲು ದಾಟಿ ಹೊರಗೆ ನಿಂತುಕೊಂಡು, ಅತ್ಯಂತ ಭಕ್ತಿ ಮತ್ತು ನಂಬಿಕೆಯಿಂದ "ಶ್ರೀ ಶಿವಾಯ ನಮಸ್ತುಭ್ಯಂ" ಎಂಬ ಮಂತ್ರವನ್ನು ಒಂದು ಬಾರಿ ಪಠಿಸಿ.
ಆ ಅಕ್ಕಿ ಕಾಳನ್ನು ನಿಮ್ಮ ಮನೆಯ ಹತ್ತಿರವಿರುವ ಯಾವುದಾದರೂ ಒಂದು ಗಿಡದ ಮೇಲೆ ಅಥವಾ ಗಿಡದ ಕುಂಡದಲ್ಲಿ ಹಾಕಿ, ನಂತರ ನಿಮ್ಮ ಕೆಲಸಕ್ಕೆ ಹೊರಡಿ.