Vastu Tips: ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯುವ ಅಭ್ಯಾಸ ನಿಮಗಿದೆಯೇ?, ಹಣದ ಸಮಸ್ಯೆ ಫಿಕ್ಸ್‌!

Published : Jun 30, 2026, 12:29 PM IST

Vastu tips for eating: ಭಾರತೀಯ ಸಂಸ್ಕೃತಿಯಲ್ಲಿ ಆಹಾರವನ್ನು ದೈವಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ನಾವು ಸೇವಿಸುವ ಅನ್ನವನ್ನು 'ಅನ್ನಪೂರ್ಣೇಶ್ವರಿ' ದೇವಿಯ ಸ್ವರೂಪ ಎಂದು ಪೂಜಿಸುತ್ತೇವೆ. ಆದರೆ, ನಮ್ಮಲ್ಲಿ ಅನೇಕರಿಗೆ ಊಟವಾದ ನಂತರ ಅದೇ ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸವಿರುತ್ತದೆ.

PREV
15
ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ

ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ
ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ, ಆಹಾರವನ್ನು ಪರಬ್ರಹ್ಮ ಸ್ವರೂಪ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಅನ್ನವನ್ನು ಎಷ್ಟು ಗೌರವಿಸುತ್ತೇವೆಯೋ ಅಷ್ಟು ಸಂಪತ್ತು ಮತ್ತು ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದರೆ, ತಿಳಿಯದೆಯೋ ಅಥವಾ ಸೋಮಾರಿತನದಿಂದಲೋ ನಾವು ಮಾಡುವ ಕೆಲವು ತಪ್ಪುಗಳು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು.

25
ತಟ್ಟೆಯಲ್ಲಿ ಕೈ ತೊಳೆಯುವುದು ಅಶುಭ

ತಟ್ಟೆಯಲ್ಲಿ ಕೈ ತೊಳೆಯುವುದು ಅಶುಭ
ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯುವುದು ಅತ್ಯಂತ ದೊಡ್ಡ ಅಪಶಕುನ. ತಟ್ಟೆಯಲ್ಲಿ ನೀರನ್ನು ಸುರಿದಾಗ ಉಳಿದಿರುವ ಅನ್ನದ ಕಣಗಳು ಅಶುದ್ಧವಾಗುತ್ತವೆ. ಇದು ಅನ್ನಕ್ಕೆ ಮಾಡುವ ಅಪಮಾನ ಎಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣಕಾಸಿನ ತೊಂದರೆಗಳು ಆರಂಭವಾಗುತ್ತವೆ ಮತ್ತು ಲಕ್ಷ್ಮಿ ದೇವಿಯು ಆ ಮನೆಯಿಂದ ಹೊರನಡೆಯುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ, ಕೈ ತೊಳೆಯಲು ಪ್ರತ್ಯೇಕ ಪಾತ್ರೆ ಬಳಸಿ ಅಥವಾ ಎದ್ದು ಹೋಗಿ ವಾಶ್ ಬೇಸಿನ್‌ನಲ್ಲಿ ಕೈ ತೊಳೆಯಿರಿ.

35
ಆಹಾರದ ವ್ಯರ್ಥ ಮತ್ತು ಗೌರವ

ಆಹಾರದ ವ್ಯರ್ಥ ಮತ್ತು ಗೌರವ ಉಳಿದ ಆಹಾರವನ್ನು ನೇರವಾಗಿ ಕಸದ ಬುಟ್ಟಿಗೆ ಎಸೆಯುವುದು ಕೂಡ ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ದ್ರೋಹವಾಗಿದೆ. ಶಾಸ್ತ್ರಗಳ ಪ್ರಕಾರ, ಉಳಿದ ಆಹಾರವನ್ನು ಹಸಿದವರಿಗೆ ಅಥವಾ ಪ್ರಾಣಿ-ಪಕ್ಷಿಗಳಿಗೆ ನೀಡಬೇಕು. ಆಹಾರವನ್ನು ವ್ಯರ್ಥ ಮಾಡುವುದರಿಂದ ಮನೆಯಲ್ಲಿ ಆಹಾರದ ಅಭಾವ ಉಂಟಾಗಬಹುದು.

45
ಊಟದ ಸಮಯದಲ್ಲಿನ ಶಿಸ್ತು

ಊಟದ ಸಮಯದಲ್ಲಿನ ಶಿಸ್ತು
ಇಂದಿನ ದಿನಗಳಲ್ಲಿ ಅನೇಕರು ಊಟ ಮಾಡುವಾಗ ಟಿವಿ ನೋಡುವುದು ಅಥವಾ ಮೊಬೈಲ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ಗಮನ ಆಹಾರದ ಮೇಲಿರುವುದಿಲ್ಲ. ಏಕಾಗ್ರತೆಯಿಲ್ಲದೆ ಊಟ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲದೆ, ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಊಟವನ್ನು ಯಾವಾಗಲೂ ಸಂತೋಷದಿಂದ ಮತ್ತು ಕೃತಜ್ಞತೆಯಿಂದ ಸ್ವೀಕರಿಸಬೇಕು.

55
ಸ್ವಚ್ಛತೆಗೆ ಮೊದಲ ಆದ್ಯತೆ

ಸ್ವಚ್ಛತೆಗೆ ಮೊದಲ ಆದ್ಯತೆ
ಊಟವಾದ ನಂತರ ಎಂಜಲು ತಟ್ಟೆಯನ್ನು ಹಾಗೆಯೇ ಬಿಡುವುದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಊಟವಾದ ತಕ್ಷಣ ತಟ್ಟೆಯನ್ನು ಸ್ವಚ್ಛಗೊಳಿಸಬೇಕು. ತಟ್ಟೆಯಲ್ಲಿ ಆಹಾರವನ್ನು ಎಂಜಲು ಬಿಡುವುದು ಕೂಡ ಸಾಲದ ಭಾದೆ ಮತ್ತು ಕೌಟುಂಬಿಕ ಕಲಹಗಳಿಗೆ ದಾರಿಯಾಗುತ್ತದೆ. ಅನ್ನವನ್ನು ಪ್ರಸಾದದಂತೆ ಭಾವಿಸಿ ಗೌರವಿಸಿದರೆ ಮಾತ್ರ ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಸಾಧ್ಯ.

Read more Photos on
click me!

Recommended Stories