ಅಧಿಕಮಾಸದಲ್ಲಿ ಈ ಕೆಲಸ ಮಾಡಿ, ಅದೃಷ್ಟಾನೇ ಬದಲಾಗಬಹುದು ನೋಡಿ!

First Published Jul 24, 2023, 5:32 PM IST

ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಬಾರಿ ಅಧಿಕ ಮಾಸ ಬರುತ್ತೆ. ನೀವು ಲಕ್ಷ್ಮೀ ಪೂಜೆಯ ಜೊತೆಗೆ ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಇದು ಉತ್ತಮ ಸಮಯ. ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಸಲಹೆಗಳು ಸಹ ಈ ತಿಂಗಳು ನಿಮಗೆ ಉಪಯುಕ್ತವಾಗಬಹುದು. 
 

ಸೌರ ಕ್ಯಾಲೆಂಡರ್ ಪ್ರಕಾರ 1 ವರ್ಷವನ್ನು 365 ದಿನಗಳು, 5 ಗಂಟೆ 48 ಸೆಕೆಂಡುಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಆದರೆ ಚಾಂದ್ರಮಾನ ಆಧಾರಿತ ಕ್ಯಾಲೆಂಡರ್ ನಲ್ಲಿ, ಒಂದು ವರ್ಷವು 354 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಅವುಗಳನ್ನು ಸರಿಹೊಂದಿಸಲು, ಪ್ರತಿ ಮೂರು ವರ್ಷಗಳಿಗೊಮ್ಮೆ ಹೆಚ್ಚುವರಿ ತಿಂಗಳನ್ನು ಸೇರಿಸಲಾಗುತ್ತದೆ, ಅಂದರೆ ಆ ವರ್ಷ 12 ರ ಬದಲು 13 ತಿಂಗಳು ಬರುತ್ತವೆ ಮತ್ತು ಹೆಚ್ಚುವರಿ ತಿಂಗಳನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ.
 

ಅಧಿಕ ಮಾಸದಂದು ವಿಷ್ಣುವಿನ ಆಶೀರ್ವಾದ (blessings from Vishnu) ಪಡೆಯುವುದರಿಂದ, ಇದನ್ನು ಪುರುಷೋತ್ತಮ ತಿಂಗಳು ಎಂದೂ ಕರೆಯಲಾಗುತ್ತದೆ. ಈ ತಿಂಗಳಲ್ಲಿ, ನೀವು ವಾಸ್ತುವಿನ ಕೆಲವು ವಿಶೇಷ ಪರಿಹಾರಗಳನ್ನು ಪ್ರಯತ್ನಿಸಿದರೆ, ಮನೆಯಲ್ಲಿ ಯಾವಾಗಲೂ ಸಂತೋಷವಿರುತ್ತದೆ. ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತು ವೃದ್ಧಿಯಾಗಲು, ಅಧಿಕ ಮಾಸದಲ್ಲಿ ನೀವು ಒಂದಿಷ್ಟು ಕೆಲಸಗಳನ್ನು ಮಾಡಬೇಕಾಗುತ್ತೆ. ಹಾಗಿದ್ರೆ ಈ ತಿಂಗಳು ಏನು ಮಾಡಬೇಕು ನೋಡೋಣ. 
 

ದಾನ ಮಾಡಿ 
ವಾಸ್ತುವನ್ನು ನಂಬಿದರೆ, ದಾನ ಮಾಡುವುದು ತುಂಬಾನೆ ಮಂಗಳಕರವಾಗಿದೆ. ಈ ತಿಂಗಳುದ್ದಕ್ಕೂ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು (food to poor) ನೀಡಿ ಮತ್ತು ಹಣವನ್ನು ದಾನ ಮಾಡಿ. ವಾಸ್ತು ಶಾಸ್ತ್ರದ ಪ್ರಕಾರ, ಅಧಿಕ ಮಾಸದಲ್ಲಿ ಚಿನ್ನ, ಬೆಳ್ಳಿ ಅಥವಾ ಹಿತ್ತಾಳೆಯಂತಹ ಯಾವುದೇ ಲೋಹವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇನ್ನು ಅಧಿಕ ಮಾಸದಲ್ಲಿ ಸಿಹಿ ವಸ್ತುಗಳನ್ನು ದಾನ ಮಾಡಿದರೆ, ನಿಮ್ಮ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಇದರೊಂದಿಗೆ, ದೇವಾಲಯಕ್ಕೆ ಬಿಳಿ ವಸ್ತುಗಳನ್ನು ಸಹ ದಾನ ಮಾಡಬೇಕು. ಅಧಿಕ ಮಾಸದಲ್ಲಿ ದಾನ ಮಾಡೋದು ಹೆಚ್ಚಾದಷ್ಟು ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ, ಹೆಚ್ಚುತ್ತದೆ. 
 

ಅಧಿಕ ಮಾಸದಲ್ಲಿ ಮುಖ್ಯದ್ವಾರದಲ್ಲಿ ಇದನ್ನ ಮಾಡಿ
ಅಧಿಕ ಮಾಸದಲ್ಲಿ ನೀವು ಮುಖ್ಯ ಬಾಗಿಲಿನ ಮೇಲೆ ಕೆಲವು ವಿಶೇಷ ಚಿಹ್ನೆಗಳನ್ನು ಮಾಡಿದರೆ, ಮನೆಯಲ್ಲಿ ಯಾವಾಗಲೂ ಸಂತೋಷವಿರುತ್ತದೆ. ಮುಖ್ಯ ಬಾಗಿಲಿನ ಮೇಲೆ ಅರಿಶಿನ ಅಥವಾ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಮಾಡಿ, ಇದು ತಾಯಿ ಲಕ್ಷ್ಮಿಯ ಅನುಗ್ರಹ ಇರುವಂತೆ ನೋಡಿಕೊಳ್ಳುತ್ತೆ ಮತ್ತು ಮುಖ್ಯ ದ್ವಾರದ (main gate) ಮೂಲಕ ಸಮೃದ್ಧಿ ಪ್ರವೇಶಿಸುತ್ತದೆ.

ಮುಖ್ಯ ದ್ವಾರದ ಮೇಲೆ ಯಾವುದೇ ರೀತಿಯ ಕೊಳೆಯನ್ನು ಬಿಡಬೇಡಿ ಮತ್ತು ಈ ಸ್ಥಳದಲ್ಲಿ ರಂಗೋಲಿ ಹಾಕಲು ಪ್ರಯತ್ನಿಸಿ ಅಥವಾ ಹೂವುಗಳಿಂದ ಅಲಂಕರಿಸಿ. ಈ ವಾಸ್ತು ಪರಿಹಾರದಿಂದ, ವರ್ಷಪೂರ್ತಿ ಮನೆಯಲ್ಲಿ ಸಮೃದ್ಧಿ ಉಳಿಯುತ್ತದೆ. ಅಷ್ಟೇ ಅಲ್ಲ ಮನೆಯ ಮುಖ್ಯ ದ್ವಾರದಲ್ಲಿ ಆರೋಗ್ಯಕರ ಸಸ್ಯಗಳನ್ನು ಇರಿಸುವುದು ಸಹ ಉತ್ತಮ..
 

ಈ ವಾಸ್ತು ಪರಿಹಾರಗಳನ್ನು ಪಾಲಿಸಿ
ನಿಮ್ಮ ಮನೆ ಅಥವಾ ಕೆಲಸದ ಸ್ಥಳದ ಉತ್ತರ ದಿಕ್ಕನ್ನು ಸ್ವಚ್ಛವಾಗಿರಿಸಿ ಮತ್ತು ಗೊಂದಲ ಮುಕ್ತವಾಗಿರಿಸಿ. ಉತ್ತರ ದಿಕ್ಕು ಯಾವಾಗಲೂ ಸಂಪತ್ತಿನ ದೇವತೆಯಾದ ಕುಬೇರನೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಈ ಪ್ರದೇಶವನ್ನು ಸ್ವಚ್ಛವಾಗಿಡುವುದು ಸಮೃದ್ಧಿಯನ್ನು ಆಕರ್ಷಿಸುತ್ತದೆ ಮತ್ತು ಯಾವಾಗಲೂ ಸಂತೋಷ ನೀಡುತ್ತೆ. 

ಉತ್ತರ ದಿಕ್ಕಿನಲ್ಲಿ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತಗಳೆಂದು ಪರಿಗಣಿಸಲಾದ ಕೆಲವು ವಿಶೇಷ ಚಿಹ್ನೆಗಳನ್ನು ಇರಿಸಿ. ಉದಾಹರಣೆಗೆ, ಈ ದಿಕ್ಕಿನಲ್ಲಿ, ಉದಯಿಸುತ್ತಿರುವ ಸೂರ್ಯನ (Sun rise) ಚಿತ್ರವನ್ನು ಹಾಕಬಹುದು ಮತ್ತು ಹರಿಯುವ ನದಿ ಅಥವಾ ಜಲಪಾತದ ಚಿತ್ರವನ್ನು ಹಾಕಬಹುದು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಯುತ್ತದೆ. 

ಅಧಿಕ ಮಾಸದಲ್ಲಿ ಈ ಬಣ್ಣಗಳಿಂದ ಮನೆಯನ್ನು ಅಲಂಕರಿಸಿ 
ಅಧಿಕ ಮಾಸದಲ್ಲಿ ಸಮೃದ್ಧಿಗಾಗಿ ಕೆಲವು ವಿಶೇಷ ವಾಸ್ತು ಪರಿಹಾರಗಳನ್ನು ಹುಡುಕುತ್ತಿದ್ದರೆ ಮನೆಯನ್ನು ಕೆಲವು ವಿಶೇಷ ಬಣ್ಣಗಳಿಂದ ಅಲಂಕರಿಸಿ. ಮನೆಯ ಅಲಂಕಾರದಲ್ಲಿ ನೀವು ಹಸಿರು, ನೇರಳೆ ಮತ್ತು ಚಿನ್ನದ ಬಣ್ಣಗಳನ್ನು ಬಳಸಬೇಕು, ಏಕೆಂದರೆ ವಾಸ್ತುವಿನ ಪ್ರಕಾರ ಈ ಬಣ್ಣಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತೆ ಎಂದು ಪರಿಗಣಿಸಲಾಗುತ್ತದೆ. ಮನೆಯ ಪರದೆಗಳು ಅಥವಾ ಬೆಡ್ ಶೀಟ್ ಗಳಿಗೆ ನೀವು ಈ ಬಣ್ಣಗಳನ್ನು ಬಳಸಬಹುದು. 

ಅಧಿಕ ಮಾಸದಲ್ಲಿ ತುಳಸಿಯ ಆರಾಧನೆ 
ಅಧಿಕ ಮಾಸದಲ್ಲಿ ತುಳಸಿಯ ನಿಯಮಿತ ಪೂಜೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ತುಳಸಿಯ ಪೂಜೆಯೊಂದಿಗೆ ಆರತಿ ಮಾಡಿದರೆ, ವಿಷ್ಣುವಿನ ಅನುಗ್ರಹ ಪಡೆಯಬಹುದು. ತುಳಸಿಯ ಪೂಜೆಯ ಜೊತೆಗೆ, ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸಿ, ಇದು ಮನೆಗೆ ಸಮೃದ್ಧಿಯ ಬಾಗಿಲುಗಳನ್ನು ತೆರೆಯಲು ಸಹಾಯ ಮಾಡುತ್ತದೆ.

ಲಾಫಿಂಗ್ ಬುದ್ಧ ಮನೆಗೆ ತನ್ನಿ 
ನೀವು ಅಧಿಕ ಮಾಸದಲ್ಲಿ ಮನೆಗೆ ಲಾಫಿಂಗ್ ಬುದ್ಧನನ್ನು (laughing Buddha) ತರೋದು ಉತ್ತಮ. ಬುದ್ಧನು ಮನೆಯ ಮುಖ್ಯ ಬಾಗಿಲಿನಿಂದ ಒಳಗೆ ಮುಖ ಮಾಡಿ ನಗುತ್ತಲೇ ಇರಬೇಕು, ಇದರಿಂದ  ಲಕ್ಷ್ಮೀ ದೇವಿಯ ಆಗಮನವಾಗುತ್ತಂತೆ, ಅಲ್ಲದೇ ಮನೆಯಲ್ಲಿ ಯಾವಾಗಲೂ ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ.. 
 

click me!