ಕೆಟ್ಟ ದಿನದ ಸುಳಿವು ನೀಡೋ ಈ ಸೂಚನೆಗಳು!

First Published Feb 17, 2023, 4:50 PM IST

ಜ್ಯೋತಿಷ್ಯದ ಪ್ರಕಾರ, ಕೆಲವೊಂದು ಘಟನೆಗಳು ಹೆಚ್ಚಾಗಿ ಮನೆಗಳಲ್ಲಿ ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ಇದು ಯಾಕೆ ಆಗುತ್ತೆ ಅನ್ನೋದೆ ನಮಗೆ ಗೊತ್ತಾಗೋದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಕೆಲವು ಅಶುಭ ಘಟನೆಗಳು ಸಂಭವಿಸಬಹುದು ಅನ್ನೋದನ್ನು ಈ ಘಟನೆಗಳು ನಮಗೆ ಹೇಳುತ್ತಿವೆ ಎಂದರ್ಥ.ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

ಕುಟುಂಬದ ಸದಸ್ಯರ ಹಠಾತ್ ಅನಾರೋಗ್ಯ(Unhealthy), ಕೆಲಸದಲ್ಲಿ ಬಿಕ್ಕಟ್ಟು, ಒತ್ತಡ (Stress) ಮತ್ತು ಹಣ ವ್ಯರ್ಥದಂತಹ ಅಹಿತಕರ ಘಟನೆಗಳು ಮನೆಯಲ್ಲಿ ಸಂಭವಿಸುತ್ತಿದ್ಯಾ? ಈ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ ಅದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನೀವೇ ಅರ್ಥಮಾಡಿಕೊಂಡು ಎಚ್ಚರದಿಂದಿರಬೇಕು. ಯಾಕೆಂದರೆ ಕೆಲವೊಂದು ಘಟನೆಗಳು ನಿಮ್ಮ ಜೀವನದಲ್ಲಿ ಮುಂಬರುವ ಸನ್ನಿವೇಶದ ಬಗ್ಗೆ ತಿಳಿಸುತ್ತೆ. ಅವುಗಳ ಬಗ್ಗೆ ತಿಳಿಯೋಣ.
 

ತುಳಸಿ ಗಿಡ(Tulsi plant) ಒಣಗೋದು
ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗುತ್ತೆ ಮತ್ತು ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತೆ. ತುಳಸಿ ಗಿಡವು ಮನೆಯಲ್ಲಿ ಹಸಿರಾಗಿ ಉಳಿದರೆ, ಮನೆಯಲ್ಲಿ ಹಣದ ಕೊರತೆಯಿರೋದಿಲ್ಲ ಎಂದರ್ಥ.  ತುಳಸಿ ಸಸ್ಯವು ಒಣಗಬಾರದು ಎಂಬುದನ್ನು ಗಮನಿಸಿ. ತುಳಸಿ ಗಿಡ ಒಣಗಲು ಪ್ರಾರಂಭಿಸಿದ್ರೆ, ನಿಮ್ಮ ಕೆಟ್ಟ ಸಮಯವು ತುಂಬಾ ಹತ್ತಿರದಲ್ಲಿದೆ ಎಂದು ಅರ್ಥಮಾಡಿಕೊಳ್ಳಿ.

ಗಾಜು ಒಡೆಯೋದು(Broken glass)
ಮನೆಯಲ್ಲಿ ಗಾಜು ಒಡೆಯುವುದು ತುಂಬಾ ಸಾಮಾನ್ಯ, ಆದರೆ ಈ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ, ಜೀವನದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುವ ಸೂಚನೆ ಇದಾಗಿದೆ. ಏಕೆಂದರೆ ಗಾಜನ್ನು ರಾಹು ಎಂದು ಪರಿಗಣಿಸಲಾಗುತ್ತದೆ. ಗಾಜು ಮತ್ತೆ ಮತ್ತೆ ಒಡೆಯುತ್ತಿದ್ದರೆ, ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಗಾಜಿನ ತುಂಡು ಅಥವಾ ಮುರಿದ ಪಾತ್ರೆಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು.

ಚಿನ್ನ(Gold) ನಷ್ಟ
ನೀವು ಯಾವುದೇ ಆಭರಣವನ್ನು ಕಳೆದುಕೊಂಡರೆ, ಅದು ತುಂಬಾ ಅಶುಭವಾಗಲಿದೆ ಎಂದರ್ಥ. ಇದನ್ನು ಹಣದ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತೆ. ಚಿನ್ನವನ್ನು ಕಳೆದುಕೊಳ್ಳುವುದು ಮನೆಯ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯ ಸಂಕೇತ. ಇದರೊಂದಿಗೆ, ಘಟನೆಯನ್ನು ತಪ್ಪಿಸುವ ಲಕ್ಷಣಗಳೂ ಇವೆ. ಚಿನ್ನ ಮತ್ತು ಆಭರಣಗಳನ್ನು ಕಳೆದುಕೊಂಡರೆ ನಿಮಗೆ ಉಂಟಾಗುವ ಆರ್ಥಿಕ ಸಮಸ್ಯೆ ಇದರಲ್ಲೇ ನಿವಾರಣೆಯಾಗಿದೆ ಅನ್ನೋದು ತಿಳಿದಿರಲಿ.

ಬೆಕ್ಕಿನ ಅಳು(Crying cat)
ಮನೆಯ ಸುತ್ತಲೂ ಬೆಕ್ಕು ಅಳುವ ಶಬ್ದವಿದ್ದರೆ. ಇದು ದೊಡ್ಡ ಘಟನೆ ಸಂಭವಿಸಲಿದೆ ಎಂಬುದರ ಸಂಕೇತವಾಗಿದೆ. ಇದರೊಂದಿಗೆ, ಸಂತೋಷ ಮತ್ತು ಸಮೃದ್ಧಿಯ ಏನೋ ಅಡ್ಡಿಯಾಗಲಿದೆ ಅನ್ನೋ ಸೂಚನೆಯನ್ನೂ ಸಹ ಇದು ತಿಳಿಸುತ್ತೆ. ಆದರೆ ಮನೆಯ ಬೆಕ್ಕು ಅತ್ತರೆ ತಪ್ಪು ತಿಳಿಯಬೇಡಿ.
 

ಮನೆಯ ಸುತ್ತಲೂ ಬಾವಲಿಗಳು(Bat)
ಜ್ಯೋತಿಷ್ಯ ಶಾಸ್ತ್ರದಲ್ಲಿ, ಮನೆಯ ಸುತ್ತಲೂ ಬಾವಲಿಗಳ ಆಗಮನವನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತೆ. ನಿಮಗೂ ಸಹ ಇಂತಹ ಅನುಭವ ಆಗುತ್ತಿದ್ದರೆ,  ನೀವು ಬಹಳ ಎಚ್ಚರಿಕೆಯಿಂದ ವರ್ತಿಸಬೇಕು. ಇಲ್ಲವಾದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
 

ದೀಪ ಆರೋದು 
ಮನೆಯ ದೇವರ ಕೋಣೆಯಲ್ಲಿ ಆರತಿಯ ಸಮಯದಲ್ಲಿ ಪೂಜೆಯ ದೀಪ ಪದೇ ಪದೇ ಆರಿದರೆ, ಅದು ಅಶುಭ(Unlucky) ಚಿಹ್ನೆ. ಈ ಮೂಲಕ, ದೇವರು ಮತ್ತು ದೇವತೆಗಳು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು ಊಹಿಸಬಹುದು.

click me!