ಹೌದು ಹೊಸ ಧಾರಾವಾಹಿ ಬರುತ್ತಿದೆ ಅಂದರೆ ಮೇಲೆ ಒಂದು ಸೀರಿಯಲ್ ಮುಗಿಯಲೇಬೇಕಲ್ವಾ? ಹಾಗಾಗಿ ಜನ ಸೋಶಿಯಲ್ ಮೀಡಿಯಾದಲ್ಲಿ ಅಮೃತಧಾರೆ ಅಥವಾ ಶ್ರೀರಸ್ತು ಶುಭಮಸ್ತು ಧಾರಾವಾಹಿ ಶೀಘ್ರದಲ್ಲೆ ಕೊನೆ ಕಾಣಲಿದೆ ಎನ್ನುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial), ಗೌತಮ್, ಎಲ್ಲಾ ರೀತಿಯ ತೊಡಕುಗಳನ್ನು ದೂರ ಮಾಡಿ, ಕೊನೆಗೆ ಭೂಮಿಕಾ ಕತ್ತಿಗೆ ತಾಳಿ ಕಟ್ಟಿದ್ದಾನೆ, ಅಲ್ಲದೇ ಇದೇ ಸಂದರ್ಭದಲ್ಲಿ ಭೂಮಿಕಾ ಗರ್ಭಿಣಿ ಅನ್ನೊದು ಸಹ ಗೊತ್ತಾಗಿ, ಮನೆಮಂದಿಯ ಸಂತೋಷ ಕೂಡ ಹೆಚ್ಚಾಗಿದೆ. ಇದನ್ನು ನೋಡುತ್ತಿದ್ದರೆ, ಅಮೃತಧಾರೆ ಕೊನೆಯ ಹಂತಕ್ಕೆ ಬಂದು ಮುಟ್ಟಿದೆಯೇ? ಈ ಸೀರಿಯಲ್ ಶೀಘ್ರದಲ್ಲಿ ಕೊನೆಯಾಗಲಿದೆಯೇ ಎನ್ನುವ ಸಂಶಯ ಮೂಡಿದೆ.