ಈಗ ಜೂನಿಯರ್ ಡಾಕ್ಟರ್ ಗೆ ಹಣ ಕೊಟ್ಟು ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದ್ದಾರೆ. ಆದ್ರೆ ಹಿರಿಯ ವೈದ್ಯರು ಮಾತ್ರ ಅದಕ್ಕೆ ಒಪ್ಪುತ್ತಲೇ ಇಲ್ಲ. ಈಗಾಗಲೇ ಲಕ್ಷ್ಮೀ ಜೊತೆ ಮಾತನಾಡಿದ ವೈದ್ಯರಿಗೆ ಲಕ್ಷ್ಮೀಗೆ ಯಾವುದೇ ಸಮಸ್ಯೆ ಇಲ್ಲ ಅನ್ನೋದು ಗೊತ್ತಾಗಿದೆ. ಆದರೆ ಕಾವೇರಿ ಮಾತ್ರ ಅವಳು ತುಂಬಾನೆ ಕೋಪ ಮಾಡ್ತಾಳೆ, ಚಾಕು ಕೈ ತೆಗೋತಾಳೆ ಅಂತೆಲ್ಲಾ ಹೇಳಿ, ಅವಳನ್ನ ಆಸ್ಪತ್ರೆಗೆ ಸೇರಿಸಿ ಅಂತಾಳೆ.