ಇದಾದ ನಂತರ ಧಾರಾವಾಹಿಯಲ್ಲಿ ವೈದ್ಯರು ತುಳಸಿ ಮಗುವನ್ನ ತೆಗೆಸಬೇಕು, ಇಲ್ಲಾಂದ್ರೆ ಅಪಾಯ ಉಂಟಾಗುತ್ತೆ ಅಂತ ಹೇಳಿದ್ರು. ಆವಾಗ ವೀಕ್ಷಕರು, ಈವಾಗ್ಲಾದ್ರೂ ನಿರ್ದೇಶಕರಿಗೆ ಬುದ್ದಿ ಬಂತು, ಅಂತೂ ಕಥೆಯನ್ನು ಬದಲಾಯಿಸಿದ್ರು ಎಂದು ಹೇಳಿದ್ದರು ಜನರು. ಆದರೆ ಇದೀಗ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದು, ತುಳಸಿ ಮಗುವನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದು, ಪೂರ್ಣಿಗೋಸ್ಕರನಾದ್ರೂ ತನ್ನ ಜೀವ ಹೋದ್ರೂ ಸರಿ ಮಗುವನ್ನ ಉಳಿಸಿಕೊಳ್ಳುವೆ ಎಂದು ಪಣ ತೊಟ್ಟಿದ್ದಾರೆ ತುಳಸಿ.