ಇದೆಲ್ಲಾ ಪರಿಸ್ಥಿತಿ ನೋಡಿದಾಗ ಒಂದು ಬಾರಿ ಮಕ್ಕಳಿಗೆ ವಿಷ ನೀಡಿ ಸಾಯುವ ನಿರ್ಧಾರ ಕೂಡ ಮಾಡಿಕೊಂಡಿದ್ದರಂತೆ. ಆದರೆ ಆ ಸಂಕಷ್ಟದ ಸಂದರ್ಭದಲ್ಲಿ ನಟ ಶರಣ್ ಮತ್ತು ಕೃಷ್ಣ ರುಕ್ಮಿಣಿ ಧಾರವಾಹಿಯ ನಿರ್ದೇಶಕ ರವಿ ಆರ್ ಗರಣಿ ಇವರು ಧೈರ್ಯ ತುಂಬಿ, ಮುನ್ನುಗ್ಗಲು ನೆರವಾದರು ಎನ್ನುತ್ತಾರೆ ಚಂದ್ರಕಲಾ. ಇದೀಗ ಮಗ ಕೊಂಚ ಚೇತರಿಸಿಕೊಂಡಿದ್ದಾನೆ ನಿಜಾ, ಆದರೆ ದೇಹದಲ್ಲಿ ಯಾವುದೇ ಚಲನೆ ಇಲ್ಲ, ವೀಲ್ ಚೇರ್ ನಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ, ಇಂತಹ ಪರಿಸ್ಥಿತಿ ಯಾವ ತಾಯಿಗೂ ಬಾರದಿರಲಿ ಕಣ್ಣೀರು ಹಾಕುತ್ತಾರೆ ಚಂದ್ರಕಲಾ ಮೋಹನ್.