ಆದರೆ ಕಾಂತಮ್ಮನಿಗೆ ಯಾವಾಗ ಶ್ರಾವಣಿ, ಸುಬ್ಬುವನ್ನು ಇಷ್ಟ ಪಡ್ತಿದ್ದಾಳೆ ಅನ್ನೋದು ಗೊತ್ತಾಯ್ತೋ? ಆವಾಗಿನಿಂದ ಸಂಪೂರ್ಣವಾಗಿ ಬದಲಾಗಿದ್ದಾಳೆ. ಹೇಗಾದ್ರು ಮಾಡಿ, ಕಾರ್ತಿಕೇಯ ಮತ್ತು ಶ್ರಾವಣಿಯನ್ನು ಒಂದು ಮಾಡಿದ್ರೆ, ಮಿನಿಸ್ಟರ್ ಮನೆಯವರ ಅಳಿಯನಾಗ್ತಾನೆ ಸುಬ್ಬು, ಇದರಿಂದ ತಾನು ಕೂಡ ಮೆರಿಬಹುದು ಅನ್ನೋ ಭ್ರಮೆಯಲ್ಲಿ ಅವರಿಬ್ಬರನ್ನು ಒಂದು ಮಾಡಲು ಏನು ಸಾಧ್ಯವೋ ಅದೆಲ್ಲವನ್ನೂ ಮಾಡ್ತಿದ್ದಾಳೆ.