ಕಲರ್ಸ್ ಕನ್ನಡದ ತುಂಬೆಲ್ಲಾ ತುಕಾಲಿ ಜೋಡಿ… ಇವ್ರ ಸಂಪೂರ್ಣ ಜವಾಬ್ಧಾರಿ ಚಾನೆಲ್ ತೆಗೊಂಡಿದ್ಯಾ? ನೆಟ್ಟಿಗರ ಪ್ರಶ್ನೆ

First Published Oct 1, 2024, 7:51 PM IST

ಈಗಷ್ಟೇ ಆರಂಭವಾದ ಬಿಗ್ ಬಾಸ್ ಸೀಸನ್ 11 ನಲ್ಲಿ ತುಕಾಲಿ ಸಂತೋಷ್ ಪತ್ನಿ ಕೂಡ ಸ್ಪರ್ಧಿಯಾಗಿದ್ದು, ಕಲರ್ಸ್ ಕನ್ನಡದ ತುಂಬಾ ಈ ಗಂಡ ಹೆಂಡ್ತೀನೆ ಕಾಣಿಸ್ತಿದ್ದಾರಲ್ಲ ಕೇಳ್ತಿದ್ದಾರೆ ನೆಟ್ಟಿಗರು. 
 

ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ ಇಟ್ಕೊಂಡು ಈಗಷ್ಟೇ ಆರಂಭವಾದ ಬಿಗ್ ಬಾಸ್ ಸೀಸನ್ 11 (Bigg Boss Season 11) ಎರಡೇ ದಿನದಲ್ಲಿ ಭಾರಿ ಸದ್ದು ಮಾಡ್ತಿದೆ. ಆರಂಭದಲ್ಲೇ ಜಗಳ, ಮನಸ್ತಾಪ ಉಂಟಾಗಿ, ಮುಂದೆ ಮೂರು ತಿಂಗಳು ಏನೇನು ಆಗಬಹುದು ಅಂತಾನೆ ಯೋಚ್ನೆ ಮಾಡ್ತಿದ್ದಾರೆ ವೀಕ್ಷಕರು. 

ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಮೊದಲ ದಿನದಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಇದೀಗ ತುಕಾಲಿ ಮಾನಸ (Tukali Manasa) ಜೊತೆ ಕೂಡ ಕಾದಟಕ್ಕೆ ಇಳಿದಿದ್ದಾರೆ. ಚೈತ್ರಾ ಧ್ಯಾನ ಮಾಡೋದನ್ನ ನೋಡಿ, ನಿದ್ದೆ ಮಾಡ್ತಿದ್ದೀರ ಅಂತಾ ಡೌಟ್ ಎಂದ ಮಾನಸ ಮೇಲೆ ಸಿಕ್ಕಾಪಟ್ಟೆ ರೇಗಾಡಿದ್ದಾರೆ ಚೈತ್ರಾ. 
 

Latest Videos


ಇದೆಲ್ಲದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ತುಕಾಲಿ ಜೋಡಿಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಕಳೆದ ವರ್ಷ ಅಂದ್ರೆ ಬಿಗ್ ಬಾಸ್ ಸೀಸನ್ 10ರಲ್ಲಿ ತುಕಾಲಿ ಸಂತೋಷ್ ಕಾಣಿಸಿಕೊಂಡಿದ್ದರು, ಇದೀಗ ಸೀಸನ್ 11 ರಲ್ಲಿ ಅವರ ಪತ್ನಿ ಮಾನಸ ಕಾಣಿಸಿಕೊಂಡಿದ್ದೆ ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗಿಲ್ಲ ಅನ್ಸತ್ತೆ. 

ಸೀಸನ್ 10 ರಲ್ಲಿ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದ ಸಂತೋಷ್ (Tukali Santhosh) ಅವರನ್ನ ಬಿಗ್ ಬಾಸ್ ಮನೆಗೆ ಭೇಟಿ ಮಾಡೋದಕ್ಕೆ ಅವರ ಪತ್ನಿ ಹೋಗಿದ್ದರು, ಆ ಎಪಿಸೋಡ್ ಸಿಕ್ಕಾಪಟ್ಟೆ ಮಜಾ ನೀಡಿದ್ದು, ಗಂಡನ ಬಂಡವಾಳವನ್ನೆಲ್ಲಾ ಬಯಲು ಮಾಡುತ್ತಾ, ತುಕಾಲಿ ಕಾಲೆಳಿದ್ದರು ಮಾನಸ. ಅದನ್ನ ನೋಡಿದ ವೀಕ್ಷಕರು ನಿಜವಾಗಿ ತುಕಾಲಿ ಸಂತೋಷ್ ಬದಲಿಗೆ ಮಾನಸ ಬಿಗ್ ಬಾಸ್ ನಲ್ಲಿರಬೇಕಿತ್ತು, ಆವಾಗ ಮಜಾ ಬರ್ತಿತ್ತು ಎಂದಿದ್ದರು. 

ಆದರೆ ಇದೀಗ ಸೀಸನ್ 11 ರಲ್ಲಿ ಮಾನಸ ಅವರನ್ನು ನೋಡುತ್ತಿದ್ದಂತೆ ವೀಕ್ಷಕರು ಕಿಡಿ ಕಾರಿದ್ದಾರೆ. ಗಿಚ್ಚಿ ಗಿಲಿಗಿಲಿ, ರಾಜಾ ರಾಣಿ, ಕಾಮಿಡಿ ಕಿಲಾಡಿಗಳು, ಬಿಗ್ ಬಾಸ್ ಸೀಸನ್ 10 (Bigg Boss Season 10) , ಈಗ ಸೀಸನ್ 11 ಎಲ್ಲದರಲ್ಲೂ ಕಲರ್ಸ್ ಕನ್ನಡ ಇವರಿಬ್ಬರಿಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ ನೀಡ್ತಿದೆ, ಅಲ್ಲದೇ ವಾಹಿನಿ ಇವರಿಬ್ಬರ ಜವಾಬ್ಧಾರಿಯನ್ನು ತಾನೆ ಹೊತ್ಕೊಂಡಿದೆಯೋ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. 
 

ಬಿಗ್ ಬಾಸ್ ಸೀಸನ್ 10ರ ಬಳಿಕ ಮಾನಸ ಅವರಿಗೆ ಗಿಚ್ಚಿ ಗಿಲಿಗಿಲಿಯಲ್ಲಿ ನಾನ್ ಕಾಮಿಡಿಯನ್ ವಿಭಾಗದಲ್ಲಿ ಸ್ಥಾನ ಕೊಡಲಾಗಿತ್ತು, ಅಲ್ಲೂ ಆಕೆ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದರು, 3 ಲಕ್ಷದ ಬಹುಮಾನವನ್ನೂ ಗೆದ್ದಿದ್ದರು. ಈಗ ಇಲ್ಲೂ ಅವಕಾಶ ನೀಡಿರೋದಕ್ಕೆ ವೀಕ್ಷಕರು ಗರಂ ಆಗಿದ್ದು, ಬೇರೆ ಯಾರೂ ಸಿಕ್ಕಿಲ್ವಾ ಅಂತಿದ್ದಾರೆ. 
 

ಅಷ್ಟೇ ಅಲ್ಲ ಟ್ಯಾಲೆಂಟ್ ಇದ್ದೋರು ನಮ್ಮ ರಾಜ್ಯದಲ್ಲಿ ಎಷ್ಟೆಷ್ಟೋ ಜನ ಇದ್ದಾರೆ, ಅವರಿಗೂ ಒಂದು ಅವಕಾಶ ಕೊಡಬಹುದಿತ್ತಲ್ವಾ ಎಂದಿದ್ದಾರೆ. ಇವರು ಮಾತ್ರ ಉದ್ದಾರ ಆಗ್ಬೇಕಾ.. ಕಾಮನ್ ಮ್ಯಾನ್ ಕನ್ಸಿಡರ್ ಮಾಡಬೇಕು. ಬರಿ ಇವರ ಫ್ಯಾಮಿಲಿ ಮಾತ್ರ ಇರೋದ ಪ್ರಪಂಚದಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. 
 

click me!