ಆದರೆ ದಿನಕಳೆದಂತೆ ಸೀರಿಯಲ್ ಹಳಿ ತಪ್ಪಲು ಆರಂಭಿಸಿದೆ. ಕಥೆಯೇ ಬದಲಾಗಿದೆ. ಕಥೆ ಯಾವಾಗ ಹೇಗೆ ಬದಲಾಗ್ತಿದೆ ಅನ್ನೋದೆ ತಿಳಿಯದೆ ವೀಕ್ಷಕರು ಕನ್ ಫ್ಯೂಸ್ ಆಗಿದ್ದಾರೆ. ಇದ್ದಕ್ಕಿದ್ದಂತೆ ಕಥೆಯ ನಾಯಕನನ್ನೆ ಸಾಯಿಸಿ ಬಿಟ್ಟಿದ್ದಾರೆ, ಇದ್ದಕ್ಕಿದ್ದಂತೆ ಹೇಳ್ತಿದ್ದಾರೆ ಮಯೂರಿ ಮತ್ತು ಸಚ್ಚಿದಾನಂದ ಮದುವೆ ಆಗಿದೆ ಅಂತ, ಎರಡು ಮೂರು ಸಲ ಮಗಳ ಮುಖ ತೋರಿಸಿ, ಆಮೇಲೆ ಆಕೆಯ ಕಥೆಯೇ ಇಲ್ಲ. ಇದೆಲ್ಲಾ ನೋಡಿ ವೀಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ.