ಚೆನ್ನೈ ಸಮುದ್ರದಡದಲ್ಲಿ ಪತ್ತೆಯಾಗಿದ್ದ ಜಾನು, ಅಲ್ಲಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ನರಸಿಂಹನ ಕಾರ್ ಡಿಕ್ಕಿಯಲ್ಲಿ ಆಡಗಿದ್ದಳು. ಮಾರ್ಗಮಧ್ಯೆ ಅಪಘಾತಕ್ಕೊಳಗಾಗುತ್ತಿದ್ದ ನರಸಿಂಹನ ಪ್ರಾಣವನ್ನು ಜಾನು ರಕ್ಷಿಸಿದ್ದಳು. ಈ ವೇಳೆ ತನ್ನ ಹೆಸರು ಚಂದನಾ, ತನ್ನೂರು ಕುಂದಾಪುರ. ಈಗ ನನ್ನೊಂದಿಗೆ ಅಪ್ಪ-ಅಮ್ಮ ಇಲ್ಲ. ತಾನು ಅನಾಥೆ ಎಂದು ಜಾಹ್ನವಿ ಹೇಳಿಕೊಂಡಿದ್ದಳು. ಈ ವಿಷಯ ತಿಳಿದ ಜಾಹ್ನವಿಯನ್ನು ತನ್ನೊಂದಿಗೆ ನರಸಿಂಹ ಕರೆದುಕೊಂಡು ಬಂದಿದ್ದನು.