ಕೀರ್ತಿ ತನ್ನನ್ನು ಬದುಕಿಸಿ ಎಂದು ಅಂಗಲಾಚುತ್ತಿದ್ದರೂ, ಮಗನ ಮುಂದೆ ತನ್ನ ಸತ್ಯ ಎಲ್ಲಿ ಬಯಲಾಗಿ ಬಿಡುತ್ತೋ ಎನ್ನುವ ಭಯದಿಂದ ಕೀರ್ತಿ ಕೈಗಳಿಗೆ ಮೆಟ್ಟಿ ಆಕೆ ಬೀಳುವಂತೆ ಮಾಡಿದ್ದಾಳೆ. ಕೀರ್ತಿಯನ್ನು ಹುಡುಕಿಕೊಂಡು ಬಂದ ವೈಷ್ಣವ್ ಮತ್ತು ಲಕ್ಷ್ಮೀ ಎದುರು ಮತ್ತಷ್ಟು ನಾಟಕ ಮಾಡಿ, ಕೀರ್ತಿ ಅಲ್ಲಿಂದ ಓಡಿ ಹೋದಳು ಎಂದು ದೂರುತ್ತಾ, ಎಲ್ಲದರೂ ವಿಡೀಯೋ ಸಿಕ್ಕಿ ತನ್ನ ಗುಟ್ಟು ರಟ್ಟಾಗುತ್ತೆ ಎನ್ನುವ ಭಯದಿಂದ ಬೆಟ್ಟದಿಂದ ವೈಷ್ಣವ್ -ಲಕ್ಷ್ಮೀಯನ್ನು ಇಳಿಸಿಕೊಂಡು ಬಂದಿದ್ದಾಳೆ.