ಲಕ್ಷ್ಮೀಯನ್ನು ಪರೀಕ್ಷಿಸಲು ಮನೆಗೆ ವೈದ್ಯರು ಕೂಡ ಬಂದಿದ್ದಾರೆ. ಲಕ್ಷ್ಮಿಯನ್ನು ಕೆರಳಿಸುವಂತೆ ಮಾತನಾಡಿ, ಕಾವೇರಿಯನ್ನು ಕೊಲ್ಲುವಂತೆ, ಕೊನೆಗೆ ತನ್ನನ್ನೇ ಕೊಲ್ಲುವಂತೆ ವೈದ್ಯೆ ತುಂಬಾನೇ ಒತ್ತಾಯ ಮಾಡ್ತಾಳೆ. ಆದರೆ ಲಕ್ಷ್ಮೀ ಹಾಗೇ ಮಾಡಲ್ಲ. ಇದನ್ನ ನೋಡಿದ ವೈದ್ಯೆ, ಲಕ್ಷ್ಮೀ ನೀನು ಕೀರ್ತಿ ಅಲ್ವೇ ಅಲ್ಲ, ಲಕ್ಷ್ಮೀನೆ ಅದಕ್ಕಾಗಿ ನೀನು ಏನು ಮಾಡಲ್ಲ, ಇನ್ನು ಮುಂದೆ ನಿನ್ನ ನಾಟಕ ಈ ಮನೆಯವರ ಮುಂದೆ ನಡೆಯಲ್ಲ, ನಡೆಯೋದಕ್ಕೆ ನಾನು ಬಿಡಲ್ಲ ಎನ್ನುತ್ತಾಳೆ.