ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಬಳಿಕ ಭೂಮಿಕಾ ಹಾಗೂ ಮಗನನ್ನು ಗೌತಮ್ ನೋಡಿದ್ದಾನೆ. ಆದರೆ ಗೌತಮ್ನನ್ನು ಅವರು ದೂರ ಇಟ್ಟಿದ್ದಾರೆ. ಇನ್ನೊಂದು ಕಡೆ ಗೌತಮ್ ತನ್ನ ಮಗಳ ಹುಡುಕಾಟದಲ್ಲಿದ್ದಾನೆ. ಗೌತಮ್ಗೆ ಅಚಾನಕ್ ಆಗಿ ಒಂದು ಬಾಲಕಿ ಸಿಕ್ಕಿದ್ದು, ಅವಳೇ ತನ್ನ ಮಗಳು ಎನ್ನೋ ಸತ್ಯ ಯಾವಾಗ ಗೊತ್ತಾಗಲಿದೆ ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು-ಪಾರು, ರಾಣಿ-ಮನು, ಜಿಮ್ ಸೀನ-ಗುಂಡಮ್ಮ ಸುತ್ತ ಕಥೆ ಸಾಗುತ್ತಿದೆ. ಇವರೆಲ್ಲರ ಖುಷಿ ಹಾಳುಮಾಡಲು ವೀರಭದ್ರ ರೆಡಿ ಆಗಿದ್ದಾನೆ. ಈ ಕುರಿತು ಎಪಿಸೋಡ್ ಪ್ರಸಾರ ಆಗುತ್ತಿದೆ.
ಕರ್ಣ ಧಾರಾವಾಹಿ
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್ ಮದುವೆ ಕಾರ್ಯ ನಡೆಯುತ್ತಿದೆ. ಈ ಮದುವೆ ಹಾಳಾಗಬೇಕು, ಕರ್ಣ, ನಿತ್ಯಾ ಮದುವೆ ಆಗಬೇಕು ಅಂತ ರಮೇಶ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಚಿನ್-ಸುಮಾ ಮದುವೆ ಆಗಲು ಪುಟ್ಟಕ್ಕ ಒಪ್ಪುತ್ತಿಲ್ಲ. ಈ ಕುರಿತು ಎಪಿಸೋಡ್ ಪ್ರಸಾರ ಆಗ್ತಿದೆ. ಉಮಾಶ್ರೀ, ಧನುಷ್, ರಮೇಶ್ ಪಂಡಿತ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ
ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ ಹಾಗೂ ಅಜಿತ್ ಮದುವೆ ಸುಳ್ಳು ಎಂದು ಮನೆಯಲ್ಲಿ ಕೆಲವರು ಸಾಬೀತುಪಡಿಸಲು ಟ್ರೈ ಮಾಡುತ್ತಿದ್ದಾರೆ. ಅಶ್ವಿನಿ ಮುಖವಾಡ ಕಳಚಲು ಅಜಿತ್ ರೆಡಿಯಾಗಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?