ಚಿಕ್ಕ ವಯಸ್ಸಲ್ಲೇ ಇಹಲೋಕ ತ್ಯಜಿಸಿದ ಕನ್ನಡ ಕಿರುತೆರೆ ನಟ- ನಟಿಯರಿವರು

Published : Nov 23, 2024, 04:52 PM ISTUpdated : Nov 23, 2024, 06:56 PM IST

ಕನ್ನಡ ಕಿರುತೆರೆಯ ಅನೇಕ ನಟ -ನಟಿಯರು ಜೀವನದಲ್ಲಿ ಏನೋ ಸಾಧನೆ ಮಾಡುವ ಮುನ್ನವೇ ಸಾವನ್ನಪ್ಪಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಕೆಲವರು ಅನಾರೋಗ್ಯದಿಂದ, ಆಕ್ಸಿಡೆಂಟ್ ನಿಂದ ಸಾವನ್ನಪ್ಪಿದ್ದಾರೆ. ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ನಟ ನಟಿಯರು ಇವರೇ ನೋಡಿ.  

PREV
18
ಚಿಕ್ಕ ವಯಸ್ಸಲ್ಲೇ ಇಹಲೋಕ ತ್ಯಜಿಸಿದ ಕನ್ನಡ ಕಿರುತೆರೆ ನಟ- ನಟಿಯರಿವರು

ಸಂಪತ್ ಜಯರಾಮ್ (Sampath Jayaram)
ಕನ್ನಡ ಕಿರುತೆರೆ  ಮತ್ತು ಹಿರಿತೆರೆ ನಟರಾದ ಹಾಗೂ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ಸಂಪತ್ ಜಯರಾಮ್ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ನಟನೆಯಲ್ಲಿ ಅವಕಾಶ ಸಿಗದ್ದಕ್ಕೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿತ್ತು, ಇದರ ಜೊತೆಗೆ ಹೆಂಡತಿ ಜೊತೆ ಜಗಳ ಆಡಿ ಹೆಸರಿಸೋಕೆ ಹೋಗಿ ನಿಜವಾಗಿಯೂ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು.  

28

ಸತೀಶ್ ವಜ್ರ (Sathish Vajra)
ಕನ್ನಡ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚಿದ್ದ ನಟ ಸತೀಶ್‌ ವಜ್ರನನ್ನು ರಾಜರಾಜೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹೆಂಡತಿಯ ತಮ್ಮ, ಅಂದ್ರೆ ಬಾಮೈದನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. 
 

38

ಜಯಶ್ರೀ ರಾಮಯ್ಯ (Jayashree Ramaiah)
ಬಿಗ್​ ಬಾಸ್ ಸೀಸನ್ 3 ಜೊತೆಗೆ ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಯಶ್ರೀ ರಾಮಯ್ಯ ನೇಣಿಗೆ ಶರಣಾಗಿ ಸಾವನ್ನಪ್ಪಿದ್ದರು. ಇವರು ಖಿನ್ನತೆಯಿಂದ ಬಳಲುತ್ತಿದ್ದು, ಅದೇ ಖಿನ್ನತೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. 

48

ಸುಶೀಲ್ ಗೌಡ (Susheel Gowda)
 'ಅಂತಃಪುರ' ಧಾರಾವಾಹಿಯಲ್ಲಿ ಸುದೀಪ್‌ ಪಾತ್ರಕ್ಕೆ ಜೀವ ತುಂಬಿದ್ದ ನಟ ಸುಶೀಲ್ ಗೌಡ ಕೊರೊನಾ ವೈರಸ್ ವೇಳೆ ಆತ್ಮಹತ್ಯೆಗೆ ಶರಣಾಗಿದ್ದರು.  ಇವರು  'ಸಲಗ' ಚಿತ್ರದಲ್ಲಿ ಸುಶೀಲ್‌ ಪೊಲೀಸ್‌ ಪಾತ್ರ ನಿಭಾಯಿಸಿದ್ದರು. ಜೊತೆಗೆ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. 

58

ಹೇಮಶ್ರೀ (Hemashree)
ಹೇಮಶ್ರೀ  ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಇವರು ವಠಾರ, ತುಳಸಿ, ಉತ್ತರಾಯಣ, ಮಹಾಮಾಯಿ ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ, ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷದಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ವೈವಾಹಿಕ ಜೀವನದಲ್ಲಿ, ರಾಜಕೀಯದಲ್ಲಿ ಸೋಲನ್ನು ಅನುಭವಿಸಿದ್ದರು. ನಟಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದು, ಇದು ಕೊಲೆ ಎನ್ನುವ ಬಗ್ಗೆ ಕೂಡ ಭಾರಿ ಸುದ್ದಿಯಾಗಿತ್ತು. 
 

68

ಚಂದನ (Chandana)

ಕನ್ನಡ ಕಿರುತೆರೆ, ಜಾಹೀರಾತು ಮತ್ತು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ನಟಿ ಚಂದನ, 2020ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ತಾವು ಪ್ರೀತಿಸಿದ ಹುಡುಗ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಟಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

78

ಪವಿತ್ರಾ ಜಯರಾಮ್ (Pavithra Jayaram)
ಕನ್ನಡದಲ್ಲಿ ಜೋಕಾಲಿ, ನೀಲಿ, ರಾಧಾರಮಣ ಹಾಗೂ ತೆಲುಗಿನ ತ್ರಿನಯನಿ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿದ್ದ ನಟಿ ಪವಿತ್ರ ಜಯರಾಮ್ ಇತ್ತೀಚೆಗೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. 
 

88

ಮಂಡ್ಯ ರವಿ (Mandya Ravi)
ಮಗಳು ಜಾನಕಿ, ಮುಕ್ತ ಮುಕ್ತ, ಅರ್ಧಾಂಗಿ, ಮಿಂಚು, ಮರಳಿ ಮನಸಾಗಿದೆ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದ ನಟ ಮಂಡ್ಯ ರವಿ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಸಣ್ಣ ವಯಸ್ಸಲ್ಲೆ ಸಾವನ್ನಪ್ಪಿದ್ದರು.

click me!

Recommended Stories