ಒಂದು ಕಡೆ ತನಗೆ ಇಷ್ಟವಿಲ್ಲದಿದ್ದರೂ, ಅಮ್ಮನಿಗಾಗಿ, ಕೃಷ್ಣನಿಗಾಗಿ ಮದುವೆಯಾಗುವ ರಚನಾ, ಇನ್ನೊಂದು ಕಡೆ ಮದುವೆ ನಿಲ್ಲಿಸಲು ಮನೆಯವರ ಹರ ಸಾಹಸ, ಮತ್ತೊಂದೆಡೆ, ತನಗೆ ಸ್ಟಾರ್ ಬೇಕೆನ್ನುವ ಕೃಷ್ಣಾ, ಇನ್ನೊಂದು ಕಡೆ ಕೃಷ್ಣಾಗಾಗಿ ರಚನಾ ಮಾಡಿದ ತ್ಯಾಗದ ಬಗ್ಗೆ ತಿಳಿದು ನೆರವಿಗಾಗಿ ಧಾವಿಸಿ ಬರುತ್ತಿದ್ದಾನೆ ಜೀವಾ. ಮುಂದೆ ಕಥೆ ಏನಾಗಲಿದೆ ಅನ್ನೋದು ಗೊತ್ತಿಲ್ಲ. ಇವತ್ತಿನ ಎಪಿಸೋಡ್ ನಲ್ಲಿ ಕಾದು ನೋಡಬೇಕು.