ತಮ್ಮ ಹಲ್ಲಿನಿಂದ ಅವಕಾಶ ಕಳೆದುಕೊಂಡ 'ಗಿಣಿರಾಮ' ಮಹತಿ; ಪ್ರತಿಕ್ರಿಯೆ ಹೇಗಿದೆ ಗೊತ್ತಾ?

First Published Jan 25, 2021, 2:09 PM IST

'ಪಾಪ ಪಾಂಡು' ನಂತರ 'ಗಿಣಿರಾಮ' ಧಾರಾವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ನಟಿ ಮಹತಿ ಅಲಿಯಾಸ್ ನಯನಾ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ...

ಬಿಕಾಂ ವ್ಯಾಸಂಗ ಮಾಡಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನಯನ ನಾಗರಾಜ್‌ ತಮ್ಮ ಬಣ್ಣದ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
undefined
ರಂಗಭೂಮಿಯಲ್ಲಿ ಸಕ್ರಿಯರಾಗಿರುವ ನಯನ ಈ ಒಂದೇ ಒಂದು ಕಾರಣದಿಂದ ಸಿನಿಮಾ ಹಾಗೂ ಧಾರಾವಾಹಿ ಆಫರ್‌ಗಳನ್ನು ಕಳೆದುಕೊಳ್ಳುತ್ತಿದ್ದಂತೆ.
undefined
ಹೌದು! ನಯನ ನಕ್ಕರೆ ಎದ್ದು ಕಾಣುವುದು ಅವರ ಹಲ್ಲುಗಳು. ಎಷ್ಟೋ ಅವಕಾಶಗಳನ್ನು ಈ ಹಲ್ಲಿನಿಂದ ಕಳೆದುಕೊಂಡಿರುವ ಕಾರಣ ಹಲ್ಲು ಸರಿ ಮಾಡಿಸೋಣ ಎಂದುಕೊಂಡಾಗ ಮನೆಯಲ್ಲಿ ಯಾರೂ ಒಪ್ಪಿಕೊಳ್ಳಲಿಲ್ಲ ಎಂದಿದ್ದರಂತೆ.
undefined
ಹಲ್ಲು ಸರಿ ಮಾಡಿಸಿಕೊಂಡರೂ ಕೂಡ ಚೆನ್ನಾಗಿ ಕಾಣದಿದ್ದರೆ ಆಗಲೂ ಅವಕಾಶಗಳು ಸಿಗುವುದಿಲ್ಲ ತನ್ನ ಹೀಗೆ ಒಪ್ಪಿಕೊಂಡರೆ ಮಾತ್ರ ನಟಿಸುವೆ ಎಂದು ನಯನ ನಿರ್ಧರಿಸಿದರು.
undefined
ಪಾಪ ಪಂಡು ಕಾಮಿಡಿ ಜಾನರ್‌ನಂತರ ಗಿಣಿರಾಮ್‌ ಒಪ್ಪಿಕೊಂಡಾಗ ಮಹತಿ ಹೆದರಿದರಂತೆ ಆದರೆ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಧೈರ್ಯ ಕೊಟ್ಟ ನಂತರ ಪಾತ್ರಕ್ಕೆ ಮುಂದೆ ಬಂದರಂತೆ.
undefined
ಮೇಕಪ್‌ನಿಂದ ದೂರವಿರುವ ನಯನಾಗೆ ಅಭಿನಯದ ಬಗ್ಗೆ ಈವರೆಗೂ ನೆಗೆಟಿವ್ ಕಾಮೆಂಟ್‌ ಬಂದಿಲ್ಲ ಆದರೆ ಹೀರೋಯಿನ್ ಮಟೀರಿಯಲ್ ಅಲ್ಲ ಎಂದ ಜನರು ಸೌಂದರ್ಯದ ಬಗ್ಗೆ ಹೆಚ್ಚಾಗಿ ಮಾತನಾಡಿದ್ದಾರಂತೆ.
undefined
ನಯನಾ 1 ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿದ್ದಾರೆ.
undefined
ಧಾರಾವಾಹಿ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಕೂಡ ಪಡೆದುಕೊಂಡಿದ್ದಾರೆ.
undefined
click me!