ಬೆಂಗಳೂರು(ಫೆ. 21) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶಾಂತಂ ಪಾಪಂ ಸರಣಿಯಲ್ಲಿ ಸೋಮವಾರ(ಫೆ. 22) ರಾತ್ರಿ ಹತ್ತು ಗಂಟೆಗೆ ವಿಶೇಷ ಸಂಚಿಕೆ ಕಡಲೂರ ಕನಸುಗಳು ಪ್ರಸಾರವಾಗಲಿದೆ, ಇದರ ವಿಶೇಷವೆಂದರೆ ಫೆಬ್ರವರಿ 21ರಂದು ಆಚರಿಸುವ ವಿಶ್ವ ತಾಯ್ನುಡಿ ದಿನಾಚರಣೆಯ ಉಡುಗೊರೆ.
ಕನ್ನಡ ನಮ್ಮೆಲ್ಲರ ತಾಯ್ನುಡಿ ಹಾಗೂ ಕರ್ನಾಟಕದಾಂತ್ಯ ಕನ್ನಡ ಭಾಷೆಯಲ್ಲಿ ವಿವಿಧತೆ ಮತ್ತು ವಿಭಿನ್ನ ಸೊಗಡುಗಳಿವೆ.
ಕನ್ನಡ ನಮ್ಮೆಲ್ಲರ ತಾಯ್ನುಡಿ ಹಾಗೂ ಕರ್ನಾಟಕದಾಂತ್ಯ ಕನ್ನಡ ಭಾಷೆಯಲ್ಲಿ ವಿವಿಧತೆ ಮತ್ತು ವಿಭಿನ್ನ ಸೊಗಡುಗಳಿವೆ.
213
ಅವುಗಳಲ್ಲಿ ಒಂದು ಕುಂದಾಪ್ರ ಕನ್ನಡ, ಟಿವಿ ಮಾಧ್ಯಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕುಂದಾಪ್ರ ಕನ್ನಡವನ್ನು ಬಳಸಿರುವ ಸತ್ಯಘಟನೆ ಆಧಾರಿತ ಕಡಲೂರ ಕನಸುಗಳು ವಿಶೇಷ ಸಂಚಿಕೆ ಫೆಬ್ರವರಿ 22ರಂದು ವೀಕ್ಷಕರ ಮುಂದೆ ಬರಲಿದೆ.
ಅವುಗಳಲ್ಲಿ ಒಂದು ಕುಂದಾಪ್ರ ಕನ್ನಡ, ಟಿವಿ ಮಾಧ್ಯಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕುಂದಾಪ್ರ ಕನ್ನಡವನ್ನು ಬಳಸಿರುವ ಸತ್ಯಘಟನೆ ಆಧಾರಿತ ಕಡಲೂರ ಕನಸುಗಳು ವಿಶೇಷ ಸಂಚಿಕೆ ಫೆಬ್ರವರಿ 22ರಂದು ವೀಕ್ಷಕರ ಮುಂದೆ ಬರಲಿದೆ.
313
ಸಾಗರ,ಕಡಲು,ವಾರಿಧಿ ಎಂದೆಲ್ಲ ಕರೆಯುವ ಭೂಮಿಯನ್ನ ಆವರಿಸಿಕೊಂಡಿರುವ ಅಗಾಧ ಜೀವರಾಶಿಗೆ ಆಶ್ರಯ ನೀಡಿ ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರುವ, ಈ ಸಮುದ್ರದ ಜೊತೆ ಮನುಷ್ಯನ ಸಂಬಂಧ ಅತ್ಯಂತ ವಿಶಿಷ್ಟವಾದದ್ದು,ವಿಚಿತ್ರವಾದದ್ದು,ವಿಶೇಷವಾದದ್ದು.
ಸಾಗರ,ಕಡಲು,ವಾರಿಧಿ ಎಂದೆಲ್ಲ ಕರೆಯುವ ಭೂಮಿಯನ್ನ ಆವರಿಸಿಕೊಂಡಿರುವ ಅಗಾಧ ಜೀವರಾಶಿಗೆ ಆಶ್ರಯ ನೀಡಿ ತನ್ನ ಒಡಲಿನಲ್ಲಿ ಅಡಗಿಸಿಕೊಂಡಿರುವ, ಈ ಸಮುದ್ರದ ಜೊತೆ ಮನುಷ್ಯನ ಸಂಬಂಧ ಅತ್ಯಂತ ವಿಶಿಷ್ಟವಾದದ್ದು,ವಿಚಿತ್ರವಾದದ್ದು,ವಿಶೇಷವಾದದ್ದು.
413
ಕಡಲಿನ ಆಕರ್ಷಣೆ ಯಾವತ್ತಿಗೂ ಮನುಷ್ಯನನ್ನು ಬಿಟ್ಟಿಲ್ಲ, ಮನುಷ್ಯನನ್ನ ಹಲವಾರು ಸಾಹಸಗಳಿಗೆ ಪ್ರಚೋದಿಸಿದ್ದೆ ಈ ಸಮುದ್ರ ಈ ಸಾಗರ ಅನ್ನೋ ಮಹಾಜಲ, ಇನ್ನೂ ಈ ಕಡಲಿನ ಮಕ್ಕಳೇ ಆದ ಮೀನುಗಾರರಿಗೂ ಕಡಲಿಗೂ ಇರೋ ಸಂಬಂಧವೇ ವಿಶಿಷ್ಟ.
ಕಡಲಿನ ಆಕರ್ಷಣೆ ಯಾವತ್ತಿಗೂ ಮನುಷ್ಯನನ್ನು ಬಿಟ್ಟಿಲ್ಲ, ಮನುಷ್ಯನನ್ನ ಹಲವಾರು ಸಾಹಸಗಳಿಗೆ ಪ್ರಚೋದಿಸಿದ್ದೆ ಈ ಸಮುದ್ರ ಈ ಸಾಗರ ಅನ್ನೋ ಮಹಾಜಲ, ಇನ್ನೂ ಈ ಕಡಲಿನ ಮಕ್ಕಳೇ ಆದ ಮೀನುಗಾರರಿಗೂ ಕಡಲಿಗೂ ಇರೋ ಸಂಬಂಧವೇ ವಿಶಿಷ್ಟ.
513
ಈ ಕಡಲು ಇವರಿಗಾಗಿ ಇದೆಯೋ, ಇವರು ಕಡಲಿಗಾಗಿ ಇದ್ದಾರೋ ಹೇಳುವುದು ಕಷ್ಟ, ಇವರಿಬ್ಬರ ಸಂಬಂಧ ಒಂದು ರೀತಿ ಪ್ರೀತಿ ಸಂಘರ್ಷದ ಕಥೆ ಎನ್ನಬಹುದು, ಕಡಲು ಇವರಿಗೆ ಜೀವನವೂ ಹೌದು,ಕೆಲವೊಮ್ಮೆ ಮೈಮರೆತರೆ ಕಡಲು ಇವರ ಪಾಲಿಗೆ ಮೃತ್ಯುವೂ ಹೌದು.
ಈ ಕಡಲು ಇವರಿಗಾಗಿ ಇದೆಯೋ, ಇವರು ಕಡಲಿಗಾಗಿ ಇದ್ದಾರೋ ಹೇಳುವುದು ಕಷ್ಟ, ಇವರಿಬ್ಬರ ಸಂಬಂಧ ಒಂದು ರೀತಿ ಪ್ರೀತಿ ಸಂಘರ್ಷದ ಕಥೆ ಎನ್ನಬಹುದು, ಕಡಲು ಇವರಿಗೆ ಜೀವನವೂ ಹೌದು,ಕೆಲವೊಮ್ಮೆ ಮೈಮರೆತರೆ ಕಡಲು ಇವರ ಪಾಲಿಗೆ ಮೃತ್ಯುವೂ ಹೌದು.
613
ನಾಲ್ಕು ಮಕ್ಕಳ ತಂದೆ ನಾರಾಯಣ ಕಡಲನ್ನೇ ನಂಬಿ ಜೀವನ ನೆಡೆಸುತ್ತಿದ್ದವನು,ಆದರೆ ಅದೇ ಕಡಲು ಅವನನ್ನ ತನ್ನ ಒಡಲೊಳಗೆ ಸೆಳೆದುಕೊಂಡು ಅವನ ನಾಲ್ಕು ಮಕ್ಕಳನ್ನ ಅನಾಥರನ್ನಾಗಿ ಮಾಡಿದೆ.
ನಾಲ್ಕು ಮಕ್ಕಳ ತಂದೆ ನಾರಾಯಣ ಕಡಲನ್ನೇ ನಂಬಿ ಜೀವನ ನೆಡೆಸುತ್ತಿದ್ದವನು,ಆದರೆ ಅದೇ ಕಡಲು ಅವನನ್ನ ತನ್ನ ಒಡಲೊಳಗೆ ಸೆಳೆದುಕೊಂಡು ಅವನ ನಾಲ್ಕು ಮಕ್ಕಳನ್ನ ಅನಾಥರನ್ನಾಗಿ ಮಾಡಿದೆ.
713
ಆದರೆ ಮನುಷ್ಯನ ಬದುಕಿಗಾಗಿನ ಹೋರಾಟ ಇದೆಯಲ್ಲ ಅದು ಕಡಲಿಗಿಂತ ದೊಡ್ಡದು, ನಾರಾಯಣನ ಮಗಳು ರುಕ್ಕೂ, ತನ್ನ ತಮ್ಮ ತಂಗಿಯರಿಗೆ ಆಸರೆಯಾಗಿ ನಿಂತು ಅವರನ್ನು ದಡ ಸೇರಿಸಲು ಹೋರಾಡುತ್ತಾಳೆ.
ಆದರೆ ಮನುಷ್ಯನ ಬದುಕಿಗಾಗಿನ ಹೋರಾಟ ಇದೆಯಲ್ಲ ಅದು ಕಡಲಿಗಿಂತ ದೊಡ್ಡದು, ನಾರಾಯಣನ ಮಗಳು ರುಕ್ಕೂ, ತನ್ನ ತಮ್ಮ ತಂಗಿಯರಿಗೆ ಆಸರೆಯಾಗಿ ನಿಂತು ಅವರನ್ನು ದಡ ಸೇರಿಸಲು ಹೋರಾಡುತ್ತಾಳೆ.
813
ಈ ಹೋರಾಟದಲ್ಲಿ ಈ ನಾಲ್ವರು ಮಕ್ಕಳ ಏಳು ಬೀಳಿನ ಕಥೆಯೇ ಕಡಲೂರ ಕನಸುಗಳು.
ಈ ಹೋರಾಟದಲ್ಲಿ ಈ ನಾಲ್ವರು ಮಕ್ಕಳ ಏಳು ಬೀಳಿನ ಕಥೆಯೇ ಕಡಲೂರ ಕನಸುಗಳು.
913
ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದಲ್ಲಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ,ಸಂಘರ್ಷ,ಹೋರಾಟ ಹಾಗೂ ಬದುಕಿನ ಕಥೆಯನ್ನು ಹೇಳುತ್ತದೆ.
ಕರಾವಳಿ ತೀರದ ಗಂಗೊಳ್ಳಿ ಬಳಿಯ ಸಮುದ್ರ ತೀರದಲ್ಲಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಗೊಂಡಿರುವ ಈ ವಿಶೇಷ ಸಂಚಿಕೆ ಕಡಲೊಂದಿಗಿನ ಮನುಷ್ಯನ ಪ್ರೀತಿ,ಸಂಘರ್ಷ,ಹೋರಾಟ ಹಾಗೂ ಬದುಕಿನ ಕಥೆಯನ್ನು ಹೇಳುತ್ತದೆ.
1013
ಕಡಲನೀರು ಉಪ್ಪಾಗಿರುವುದು ಕಡಲತೀರದ ಬದುಕಿನ ಕಣ್ಣೀರು ಸೇರಿರುವುದರಿಂದಲೇ ಅಲ್ಲವೇ ,ಅಲ್ಲಿ ನೂರಾರು ಹೋರಾಟ ಹಾಗೂ ಸಂಘರ್ಷದ ಕಥೆಗಳಿವೆ,ಅಂತಹ ಅಪರೂಪದ ಕಥೆಯನ್ನು ಹೆಕ್ಕಿ ಕಲರ್ಸ್ ಕನ್ನಡ ತಂಡ ವೀಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.
ಕಡಲನೀರು ಉಪ್ಪಾಗಿರುವುದು ಕಡಲತೀರದ ಬದುಕಿನ ಕಣ್ಣೀರು ಸೇರಿರುವುದರಿಂದಲೇ ಅಲ್ಲವೇ ,ಅಲ್ಲಿ ನೂರಾರು ಹೋರಾಟ ಹಾಗೂ ಸಂಘರ್ಷದ ಕಥೆಗಳಿವೆ,ಅಂತಹ ಅಪರೂಪದ ಕಥೆಯನ್ನು ಹೆಕ್ಕಿ ಕಲರ್ಸ್ ಕನ್ನಡ ತಂಡ ವೀಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.
1113
ಈ ಸಂಚಿಕೆಯ ನಿರ್ದೇಶಕರು ನವೀನ್ ಸೋಮನಹಳ್ಳಿ, ಕಥೆ ಡಾವೆಂಕಿ,ಜಗದೀಶ್ ಭಾವೆ ಚಿತ್ರಕಥೆ ಸಂಭಾಷಣೆ ಅನಂತ್ ಶಾಂದ್ರೇಯ, ಛಾಯಾಗ್ರಹಣ ರವಿ ಕನಕಪುರ ,ನಿರ್ಮಾಣ ರವೀಣ್ ಕುಮಾರ್, ಪಾತ್ರವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.
ಈ ಸಂಚಿಕೆಯ ನಿರ್ದೇಶಕರು ನವೀನ್ ಸೋಮನಹಳ್ಳಿ, ಕಥೆ ಡಾವೆಂಕಿ,ಜಗದೀಶ್ ಭಾವೆ ಚಿತ್ರಕಥೆ ಸಂಭಾಷಣೆ ಅನಂತ್ ಶಾಂದ್ರೇಯ, ಛಾಯಾಗ್ರಹಣ ರವಿ ಕನಕಪುರ ,ನಿರ್ಮಾಣ ರವೀಣ್ ಕುಮಾರ್, ಪಾತ್ರವರ್ಗದಲ್ಲಿ ಚಿತ್ರನಟಿ ಕಾವ್ಯಾ ಗೌಡ, ಅರುಣ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.
1213
ವಿಶ್ವ ತಾಯ್ನುಡಿ ದಿನ ಪ್ರಯುಕ್ತ, ಕುಂದಾಪ್ರ ಕನ್ನಡದಲ್ಲಿ ಶಾಂತಂ ಪಾಪಂ
ವಿಶ್ವ ತಾಯ್ನುಡಿ ದಿನ ಪ್ರಯುಕ್ತ, ಕುಂದಾಪ್ರ ಕನ್ನಡದಲ್ಲಿ ಶಾಂತಂ ಪಾಪಂ
1313
ಈ ವಾರದ ಶಾಂತಂ ಪಾಪಂ ಮಿಸ್ ಮಾಡಿಕೊಳ್ಳೇಬೇಡಿ
ಈ ವಾರದ ಶಾಂತಂ ಪಾಪಂ ಮಿಸ್ ಮಾಡಿಕೊಳ್ಳೇಬೇಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.