ಬಿಗ್ ಬಾಸ್ ಸೀಸನ್ 13 : ಜನಸಾಮಾನ್ಯರ ಸೆಲೆಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆ

Published : Aug 08, 2026, 11:28 AM IST

Big Boss Season 13: ಬಿಗ್ ಬಾಸ್ ಸೀಸನ್ 13ಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಇದೇ ಆಗಸ್ಟ್ 16 ರಿಂದ ಅಗ್ನಿ ಪರೀಕ್ಷೆ ಶುರು ಆಗ್ತಿದೆ. ಆದ್ರೆ ಅದಕ್ಕೂ ಮೊದಲೇ ಬಿಗ್ ಬಾಸ್ ಸ್ಪರ್ಧಿಗಳ ಸೆಲೆಕ್ಷನ್ ಬಗ್ಗೆ ಅಸಮಾಧಾನ ಕೇಳಿ ಬಂದಿದೆ.

PREV
15
ಬಿಗ್ ಬಾಸ್ ಕನ್ನಡ ಸೀಸನ್ 13

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಜನ ಕಾಯ್ತಿದ್ದಾರೆ. ಈ ಬಾರಿ ಸಾರ್ವಜನಿಕರಿಗೆ ಅವಕಾಶ ಸಿಗ್ತಿದೆ. ಈಗಾಗಲೇ ಸೆಲೆಕ್ಷನ್ ನಡೆಯುತ್ತಿದ್ದು, ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಸ್ಪರ್ಧಿಗಳು ಸಿದ್ಧರಾಗ್ತಿದ್ದಾರೆ.

25
ಅಗ್ನಿಪರೀಕ್ಷೆ

ಇದೇ ಆಗಸ್ಟ್ 16 ರಂದು ಬಿಗ್ ಬಾಸ್ ಅಗ್ನಿಪರೀಕ್ಷೆ ಶುರುವಾಗಲಿದೆ. ಇದ್ರಲ್ಲಿ ಗೆದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಲಿದ್ದಾರೆ. ಶೃತಿ, ವಿನಯ್ ಗೌಡ, ಸಂಗಿತಾ ಹಾಗೂ ಚಂದನ್ ಶೆಟ್ಟಿ ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬರ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಅವರು ನಿರೂಪಣೆ ಮಾಡಲಿದ್ದಾರೆ. ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ಶೋ ಶುರುವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ.

35
ಜನಸಾಮಾನ್ಯರಿಗೆ ಅವಕಾಶ

ಬಿಗ್ ಬಾಸ್ ಈ ಬಾರಿ ಹೊಸ ರೂಪದಲ್ಲಿ ಬರಲಿದೆ ಅಂತ ಮೊದಲೇ ಅನೌನ್ಸ್ ಆಗಿತ್ತು. ಜನಸಾಮಾನ್ಯರಿಗೆ ವಿಡಿಯೋ ಕಳಿಸುವಂತೆ ಕಲರ್ಸ್ ಕನ್ನಡ ಕೇಳಿತ್ತು. ಅದಕ್ಕೆ ತಕ್ಕಂತೆ ಜನರು ತಮ್ಮ ಸಾಮರ್ಥ್ಯ, ಯಾಕೆ ಬಿಗ್ ಬಾಸ್ ಗೆ ಹೋಗ್ಬೇಕು ಎಂಬುದನ್ನು ತಿಳಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.

45
ಮಹಿಳೆ ಆರೋಪ

ಬಂದ ಲಕ್ಷಗಟ್ಟಲೆ ವಿಡಿಯೋದಲ್ಲಿ ಸೆಲೆಕ್ಟರ್ಸ್ ಕೆಲವರನ್ನು ಸೆಲೆಕ್ಟ್ ಮಾಡಿ, ಆಡಿಷನ್ ಗೆ ಕರೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಆಸೆ ಹೊತ್ತಿದ್ದ ಮಹಿಳೆಯೊಬ್ಬರು ಇದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಸುಮಾರು 60 ಜನರು ಆಡಿಷನ್ ಗೆ ಬಂದಿದ್ದರು. ಆದ್ರೆ ಆಡಿಷನ್ ಒಂದೇ ದಿನ ನಡೆದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಪರ್ಧಿಗಳು ಕಾದಿದ್ದಾರೆ. ಕೆಲವರಿಗೆ 20 ನಿಮಿಷ ತೆಗೆದುಕೊಂಡ್ರೆ ಮತ್ತೆ ಕೆಲವರಿಗೆ ಅರ್ಧ ಗಂಟೆ ಆಡಿಷನ್ ಮಾಡಲಾಗಿದೆ. ನಂತ್ರ ಗ್ರೂಪ್ ಡಿಸ್ಕಷನ್ ಕೂಡ ನಡೆದಿದೆ. ಆದ್ರೆ ಸಮಯ ಕಳೆಯುತ್ತಿದ್ದಂತೆ ಸೆಲೆಕ್ಟರ್ಸ್ ಸುಸ್ತಾಗಿದ್ರು ಅನ್ನೋದು ಮಹಿಳೆ ಆರೋಪ.

55
ಸುದೀಪ್ ಗೆ ಮನವಿ ಮಾಡಿದ ಮಹಿಳೆ

ಕಿಚ್ಚ ಸುದೀಪ್ ಅವರ ಫೋಟೋ ಹಾಕಿರುವ ಮಹಿಳೆ, ಸುದೀಪ್ ಅವರಿಗೆ ಮನವಿ ಮಾಡಿದ್ದಾರೆ. ಪ್ರತಿಯೊಬ್ಬರೂ ಆಸೆಯಲ್ಲಿ ಬಂದಿರ್ತಾರೆ. ಆದ್ರೆ ಸೆಲೆಕ್ಟರ್ಸ್ ಒಬ್ಬರ ಮಾತು ಕೇಳುವ, ಸರಿಯಾಗಿ ಆಡಿಷನ್ ಮಾಡುವ ಆಸಕ್ತಿ ತೋರಲಿಲ್ಲ. ಆಡಿಷನ್ ಸ್ಪ್ಲಿಟ್ ಮಾಡಿ ಎರಡನೇ ದಿನಕ್ಕೆ ಮುಂದೂಡಬಹುದಿತ್ತು. ಆದ್ರೆ ರಾತ್ರಿಯವರೆಗೆ ಆಡಿಷನ್ ಮಾಡಿದ್ದು, ಆಡಿಷನ್ ಸರಿಯಾಗಿ ನಡೆದಿಲ್ಲ. ನಮ್ಮನ್ನು ಕೇಳುವವರೇ ಇರಲಿಲ್ಲ ಎಂಬುದು ಮಹಿಳೆ ಆರೋಪ. ಈಗಾಗಲೇ ಸೆಲೆಕ್ಟ್ ಆದವರಿಗೆ ಶಾಕ್ ಆಗಿದೆ. ನಮ್ಮನ್ನು ಹೇಗೆ ಸೆಲೆಕ್ಟ್ ಮಾಡಿದ್ರು ಎನ್ನುವ ಪ್ರಶ್ನೆ ಅವರನ್ನು ಕಾಡ್ತಿದೆ. ಸೆಲೆಕ್ಟ್ ಆಗ್ತಾರೆ ಅಂದ್ಕೊಂಡವರು ಆಗಿಲ್ಲ. ಇದ್ರಿಂದ ಸೂಕ್ತ ಸ್ಪರ್ಧಿಗಳಿಗೆ ಮೋಸ ಆದಂತಾಗಿದೆ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತ ಮಹಿಳೆ ಮನವಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories