ಬಡವರ ಹಸಿವು ನೀಗಿಸುತ್ತಿದೆ 'ಕೊಡೋಣ' ತಂಡ!
First Published Apr 12, 2020, 5:28 PM ISTಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾದ ಪರಿಣಾಮ ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಹಸಿವು ನಿಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಾಯಕ ನವೀನ್ ಸಜ್ಜು, ನಿರ್ದೇಶಕ ಸಹನಾಮೂರ್ತಿ, ವರುಣ್ ಕುಮಾರ್ ಸೇರಿದಂತೆ ಹತ್ತು ಮಂದಿ ಸಮಾನ ಮನಸ್ಕ ಗೆಳೆಯರು ಈ ‘ಕೊಡೋಣ’ ತಂಡ ಕಟ್ಟಿಕೊಂಡು ಮಾ.22ರಿಂದಲೂ ಪ್ರತಿದಿನ ನಗರದ ವಿವಿಧ ಪ್ರದೇಶಗಳಲ್ಲಿ 500 ಜನರಿಗೆ ಉಚಿತವಾಗಿ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದೆ. ಈ ಕೊಡೋಣ ತಂಡದ ಜೊತೆ ಕೈಜೋಡಿಸಲು ಬಯಸುವವರು ಹೆಚ್ವಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 96324 01199 ಸಂಪರ್ಕಿಸಬಹುದು.