Published : Mar 13, 2026, 10:30 AM ISTUpdated : Mar 13, 2026, 10:57 AM IST
ತುಮಕೂರಿನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ, ತಾಯಿಯೊಬ್ಬರ ಮನವಿಯಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಅಪ್ಪನಿಲ್ಲದ ಮಗುವಿಗೆ 'ಚಿರಾಗ್' ಎಂದು ನಾಮಕರಣ ಮಾಡಿದರು.
ತುಮಕೂರಿನ ಎಂಜಿರಸ್ತೆಯಲ್ಲಿ ಇರುವ ಬಾಲ ಭವನದಲ್ಲಿ ನಡೆದಿದ್ದ ಅಹವಾಲು ಸ್ವೀಕಾರ ಸಭೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ತಾಯಿಯ ಆಸೆಯಂತೆ ಪುಟ್ಟ ಕಂದಮ್ಮನಿಗೆ ಮಹಿಳಾ ಆಯೋಗದ ಅಧ್ಯಕ್ಷರು ಚಿರಾಗ್ ಎಂದು ಹೆಸರಿಟ್ಟರು.
ನಿನ್ನೆ ಬಾಲ ಭವನದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದು, ನೂರಾರು ಮಹಿಳೆಯರು ಸಮಸ್ಯೆ ಹೊತ್ತು ಸಭೆಗೆ ಬಂದಿದ್ರು. ಹಾಗೆಯೇ ನಾಗಮಣಿ ಎಂಬ ಮಹಿಳೆ ತನ್ನ 3 ತಿಂಗಳ ಮಗುವಿನೊಂದಿಗೆ ಅಹವಾಲು ಸಲ್ಲಿಸಲು ಅಲ್ಲಿಗೆ ಬಂದಿದ್ದರು.
ತುಮಕೂರು ನಗರದ ಹನುಮಂತಪುರದ ನಿವಾಸಿಯಾದ ನಾಗಮಣಿ ಅವರ ಪತಿ, ನಾಗಮಣಿ ಗರ್ಭಿಣಿ ಇದ್ದಾಗಲೇ ಸಾವನ್ನಪ್ಪಿದ್ದರು. ಹೀಗಾಗಿ ಯಾರ ಬೆಂಬಲವಿಲ್ಲದ ತನ್ನ ಮಗುವಿಗೆ ನಿಮ್ಮಿಂದಲೇ ನಾಮಕರಣ ಮಾಡಬೇಕು ಎಂದು ಮಹಿಳೆ ನಾಗಲಕ್ಷ್ಮಿ ಅವರಿಗೆ ಮನವಿ ಮಾಡಿದ್ದರು.
ನನಗೆ ಗಂಡನೂ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ. ನಿಮ್ಮ ಹಾಗೆಯೇ ನನ್ನ ಮಗು ಕೂಡ ಬಹಳ ಎತ್ತರಕ್ಕೆ ಬೆಳೆಯಬೇಕು. ಹೀಗಂತ ತಾಯಿ ನಾಗಮಣಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ಮನವಿ ಮಾಡಿದ್ರು.
ತಾಯಿ ಆಸೆಯಂತೆ ಮಗುವಿಗೆ ಚಿರಾಗ್ ಎಂದು ಹೆಸರಿಟ್ಟ ಅಧ್ಯಕ್ಷರು
ಹೀಗಾಗಿ ತಾಯಿಯ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ಅಧ್ಯಕ್ಷರು ತಾಯಿಯ ಆಸೆಯಂತೆ ಪುಟ್ಟ ಕಂದಮ್ಮನಿಗೆ ಚಿರಾಗ್ ಎಂದು ಹೆಸರಿಟ್ಟರು. ಹೀಗಾಗಿ ಅನೇಕರ ಸಂಕಷ್ಟ ಪರಿಹರಿಸುವ ಅಹವಾಲು ಸಭೆ ಅಪರೂಪದ ಘಟನೆಗೆ ಸಾಕ್ಷಿಯಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ