ಚಾಮುಂಡಿ ದೇವಿ, ಸಿದ್ಧಾರೂಡ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದ ಭಕ್ತರು..!
First Published Jun 8, 2020, 11:33 AM ISTಬೆಂಗಳೂರು(ಜೂ.08): ಎರಡೂವರೆ ತಿಂಗಳ ಬಳಿಕ ಇಂದು(ಸೋಮವಾರ) ರಾಜ್ಯಾದ್ಯಂತ ಚರ್ಚ್, ಮಸೀದಿ, ದೇವಸ್ಥಾನಗಳು ಓಪನ್ ಅಗಿವೆ. ಹೀಗಾಗಿ ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೊರೋನಾ ಕಾಟದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಹೀಗಾಗಿ ಧಾರ್ಮಿಕ ಕೇಂದ್ರಗಳು ಬರೋಬ್ಬರಿ ಎರಡೂವರೆ ತಿಂಗಳ ಕಾಲ ಬಂದ್ ಆಗಿದ್ದವು.