ನೆನಪುಗಳಾದವು ಕಂಠಪೂರ್ತಿ, ಕನಸುಗಳಾದವು ತುಂಬಾ ಜಾಸ್ತಿ.. ಮುಂಗಾರು ಮಳೆ ತಂಡ ಒಂದೇ ಕಡೆ!

First Published Sep 6, 2021, 10:22 PM IST

ಸ್ನೇಹ ಅಮರ
ನೆನಪು ಮಧುರ
ರಾತ್ರಿ ಜೀ ತಂಡದ ಜೊತೆ "ಹನಿ ನೀರಾವರಿ"
ನೆನಪುಗಳಾದವು ಕಂಠಪೂರ್ತಿ
ಕನಸುಗಳಾದವು ತುಂಬಾ ಜಾಸ್ತಿ
ಜೈ ಮುಂಗಾರು ಮಳೆ...

ಇದು  ನಿರ್ದೇಶಕ ಯೋಗರಾಜ ಭಟ್ ಸಾಲುಗಳು. ಮುಂಗಾರು ಮಳೆ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ಮುಂಗಾರು ಮಳೆಯ ಎಲ್ಲ ಶಕ್ತಿಗಳು ಒಂದೇ ಕಡೆ ಸೇರಿದ್ದರು.

ಇದು  ನಿರ್ದೇಶಕ ಯೋಗರಾಜ ಭಟ್ ಸಾಲುಗಳು. ಮುಂಗಾರು ಮಳೆ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ಮುಂಗಾರು ಮಳೆಯ ಎಲ್ಲ ಶಕ್ತಿಗಳು ಒಂದೇ ಕಡೆ ಸೇರಿದ್ದರು.

ಈ " ಮುಂಗಾರು ಮಳೆ "ಯಲ್ಲಿ
ಇಷ್ಟೊಂದು ಬೆಂಕಿ ಇದೆ ಅಂತ 
ಗೊತ್ತಿರಲಿಲ್ಲ ಕಣೋ ದೇವದಾಸ......🐇
    ಮುಂಗಾರು ಮಳೆಯೆ ..
         ಏನು ನಿನ್ನ ಹನಿಗಳ ಲೀಲೆ ! ಈ  ಸಾಲುಗಳನ್ನು ಗೋಲ್ಡರ್ ಸ್ಟಾರ್ ಗಣೇಶ್ ಹಂಚಿಕೊಂಡಿದ್ದಾರೆ.

ಜೋಗ ಜಲಪಾತವನ್ನು ವಿಶಿಷ್ಟವಾಗಿ ತೋರಿಸಿದ್ದ ಮುಂಗಾರು ಮಳೆಯ ಎಲ್ಲ ಹಾಡುಗಳು ಇಂದಿಗೂ ಜನಪ್ರಿಯ. ಜಯಂತ್ ಕಾಯ್ಕಿಣಿ ನೀಡಿದ ಒಂದೊಂದು ಸಾಲುಗಳನ್ನು ಇನ್ನೂ ಗುನುಗುತ್ತಲೇ ಇರುತ್ತೇವೆ.

ಆದಷ್ಟೂ ಬೇಗ ಈ ತಂಡದಿಂದ ಮತ್ತೊಂದು ಮೈಲಿಗಲ್ಲು ಚಿತ್ರ ಮುಂಗಾರುಮಳೆ 3 ಹೊರ ಹೊಮ್ಮಲಿ  ನಾವೆಲ್ಲಾ ಕಾತುರದಿಂದ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್, ಗಣೇಶ್, ಪೂಜಾ ಗಾಂಧಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ಪ್ರೀತಂ ಗುಬ್ಬಿ  ಈ ಚಿತ್ರದ ನಂತರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. 

ತಂಡದವ್ರೆಲ್ಲ ಒಂದೇ ಕಡೆ ಸೇರಿದ್ದು ಅಲ್ಲದೇ ಪೋಟೋ ಹಂಚಿಕೊಂಡಿರುವುದರಿಂದ ಹೊಸ ಸುದ್ದಿ ಇದೆಯೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಒಳ್ಳೆಯ ಸುದ್ದಿ ನೀಡಿ ಎಂದು ಹಾರೈಸಿದ್ದಾರೆ. 

click me!