ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆಸ್ಪತ್ರೆಗೆ ದಾಖಲು

First Published Jul 8, 2020, 3:32 PM IST

ಬೆಂಗಳೂರು(ಜು.  08) ಈ ಕೊರೋನಾ ಕಾಟ ಮತ್ತು ಭಯ ನಿಧಾನವಾಗಿ ಎಲ್ಲರನ್ನು ಆವರಿಸಿಕೊಳ್ಳುತ್ತಿದೆ.  ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್  ಮುಂಜಾಗೃತಾ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಸಂಸದೆ ಸುಮಲತಾ ಅವರೊಂದಿಗೆ ಹಲವು ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಸುಮಲತಾ ಅವರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣಕ್ಕೆ ವೆಂಕಟೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
undefined
ಸುಗುಣ ಆಸ್ಪತ್ರೆಗೆ ವೆಂಕಟೇಶ್ ದಾಖಲಾಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರ ಪುತ್ರ ವೈದ್ಯರಾಗಿದ್ದು, ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ.
undefined
ಜೂನ್ 29 ರಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಂಬರೀಶ್ ಸ್ಮಾರಕದ ಬಗ್ಗೆ ಸುಮಲತಾ ಚರ್ಚೆ ನಡೆಸಿದ್ದರು. ಸುಮಲತಾ ಅವರೊಂದಿಗೆ ರಾಕ್ ಲೈನ್ ಸಹ ಇದ್ದರು.ಸುಮಲತಾ ಅವರೊಂದಿಗೆ ಜೂನ್ 29 ರಂದು ನಟ ದೊಡ್ಡಣ್ಣ, ಪುತ್ರ ಅಭಿಷೇಕ್ ಸಹ ಸಿಎಂ ಭೇಟಿಗೆ ಹೋಗಿದ್ದರು. ಅಷ್ಟೆ ಅಲ್ಲದೆ ಸುಮಲತಾ ಅವರೊಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಕೆಲವು ಶಾಸಕರು, ಅಧಿಕಾರಿಗಳು ಸಹ ಭಾಗವಹಿಸಿದ್ದರು.
undefined
ರಾಕ್‌ಲೈನ್ ವೆಂಕಟೇಶ್ ಅವರು ರಾಜ್‌ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ಅವರ ಪುತ್ರ ಅಭಿಲಾಶ್ ಅವರೇ ರಾಕ್‌ಲೈನ್‌ ಗೆ ಚಿಕಿತ್ಸೆ ನೀಡುತ್ತಿದ್ದಾರೆ.
undefined
ಕೊರೋನಾ ತಾಂಡವ ಮುಂದಿವರಿದಿದ್ದು ನಟ ಶ್ರೀನಗರ ಕಿಟ್ಟಿ ಸಹೋದರ ಸಹ ಹೃದಯಾಘಾತದಿಂದ ನಿಧನರಾಗಿದ್ದು ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿತ್ತು.
undefined
click me!