ಹೊಂಬಾಳೆ ಫಿಲ್ಮ್‌ ಯುವ ಚಿತ್ರಕ್ಕೆ ನನ್ನನ್ನು ಸಂಪರ್ಕಿಸಿಲ್ಲ: ರುಕ್ಮಿಣಿ ವಸಂತ್‌

First Published Feb 23, 2023, 11:38 AM IST

ಹೊಂಬಾಳೆ ಜೊತೆ ಕೈ ಜೋಡಿಸಿದ್ರಾ ರುಕ್ಮಿಣಿ ವಸಂತ್? ಹರಿದಾಡುತ್ತಿರುವ ಗಾಸಿಪ್‌ ಬಗ್ಗೆ ಕ್ಲಾರಿಟಿ ಕೊಟ್ಟ ನಟಿ.......

‘ಹೊಂಬಾಳೆ ಫಿಲಂಸ್‌ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ನಟಿಸುವ ಬಗ್ಗೆ ಚಿತ್ರತಂಡ ನನ್ನನ್ನು ಸಂಪರ್ಕಿಸಿಲ್ಲ’ ಎಂದು ನಟಿ ರುಕ್ಮಿಣಿ ವಸಂತ್‌ ಹೇಳಿದ್ದಾರೆ.

 ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ ಕುಮಾರ್‌ ನಟನೆಯ ಚಿತ್ರಕ್ಕೆ ರುಕ್ಮಿಣಿ ವಸಂತ್‌ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ರುಕ್ಮಿಣಿ ಈ ಸುದ್ದಿ ನಿರಾಕರಿಸಿದ್ದಾರೆ. ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos


ಯುವ ಅವರ ಹೊಸ ಸಿನಿಮಾದ ಟೈಟಲ್‌ ಮಾ.17ರಂದು ಪುನೀತ್‌ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಚಿತ್ರವಿದು. 

ರುಕ್ಮಿಣಿ ಈಗಾಗಲೇ ಸೂರಿ ನಿರ್ದೇಶನದ, ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್‌ನಲ್ಲಿದ್ದೇನೆ. 

ಶ್ರೀಮುರಳಿ ಕಾಲಿಗೆ ಏಟು ಬಿದ್ದು ಅವರು ವಿಶ್ರಾಂತಿಯಲ್ಲಿರುವ ಕಾರಣ ‘ಬಘೀರ’ ಸಿನಿಮಾದ ಶೂಟಿಂಗ್‌ ಸದ್ಯ ಸ್ಥಗಿತಗೊಂಡಿದೆ. ನನ್ನ ಭಾಗದ ಚಿತ್ರೀಕರಣ ಶ್ರೀಮುರಳಿ ಜೊತೆಗೇ ಇರುವ ಕಾರಣ ಅವರು ಬರದೇ ಶೂಟಿಂಗ್‌ ಸಾಧ್ಯವಿಲ್ಲ’ ಎಂದು ರುಕ್ಮಿಣಿ ತಿಳಿಸಿದ್ದಾರೆ.

click me!