ನಾಲ್ಕು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು ಎಂದು ಹೇಳಿರುವ ಶ್ರುತಿ, ತಮಿಳು ಚಿತ್ರವೊಂದರ ನಿರ್ದೇಶಕರ ತಮಗೆ ಅವರ ಚಿತ್ರದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ಇದರಿಂದ ಫುಲ್ ಎಕ್ಸೈಟ್ ಆಗಿದ್ದೆ. ಆದರೆ, ಚಿತ್ರಕ್ಕೆ ಐವರು ನಿರ್ಮಾಪಕರಿದ್ದು, ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಬಹುದು ಎಂದು ಹೇಳಿದ್ದು ಶಾಕ್ ಆಗಿತ್ತು. ಅದೆಲ್ಲಿತ್ತೋ ಸಿಟ್ಟು. ಇಂಥದ್ದೊಂದು ದುರುದ್ದೇಶವಿದ್ದರೆ, ಕಾಲಲ್ಲಿರೋದು ಕೈಯಿಗೆ ಬರಬೇಕಾಗುತ್ತದೆ ಎಂದೆ, ಎಂದಿದ್ದಾರೆ ನಾತಚರಾಮಿ ನಟಿ ಶ್ರುತಿ. ಆಮೇಲೆ ಬಹುತೇಕ ಕನ್ನಡದಲ್ಲಿ ಆದಂತೆ, ತಮಿಳಿನಲ್ಲಿಯೂ ಅವಕಾಶಗಳು ಪೂರ್ತಿ ಕಡಿಮೆಯಾಯಿತು. ಏನೇ ಆಗಲಿ 'ಇಲ್ಲ' ಎಂದು ಹೇಳುವ ಧೈರ್ಯ ಮಹಿಳೆಯರಿಗೆ ಇರಬೇಕು ಎಂದೂ ಶ್ರುತಿ ಹೇಳಿದ್ದಾರೆ.