ಒಂದು ರಾತ್ರಿ, ಒಂದು ಸಸ್ಪೆನ್ಸ್: ದಟ್ಟ ಕಾಡಿನಲ್ಲಿ ಮಿಸ್ಟ್ರಿ ಥ್ರಿಲ್ಲರ್ ಕಥೆ 'ವೃತ್ತ'

Published : Jul 26, 2025, 12:57 PM IST

ಮಿಸ್ಟ್ರಿ ಥ್ರಿಲ್ಲರ್‌ ಕಥಾಹಂದರದ ವೃತ್ತ ಚಿತ್ರದಲ್ಲಿ ನಾಯಕ ಸಿದ್ಧಾರ್ಥ ಒಂದು ಫೋನ್‌ ಕರೆಯಿಂದ ದಾರಿ ತಪ್ಪುತ್ತಾನೆ.

PREV
15

‘ವೃತ್ತ’ ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ಸಿನಿಮಾ. ಆಗಸ್ಟ್‌ 1ರಂದು ಬಿಡುಗಡೆಯಾಗಲಿದೆ. ಮಿಸ್ಟ್ರಿ ಥ್ರಿಲ್ಲರ್‌ ಕಥಾಹಂದರದ ಈ ಚಿತ್ರದಲ್ಲಿ ನಾಯಕ ಸಿದ್ಧಾರ್ಥ ಒಂದು ಫೋನ್‌ ಕರೆಯಿಂದ ದಾರಿ ತಪ್ಪುತ್ತಾನೆ.

25

ಆತನ ಮನಸ್ಥಿತಿಯ ಮೇಲೆ ಸಿನಿಮಾದ ಕಥೆ ಕೇಂದ್ರೀಕೃತವಾಗಿದೆ. ಚೈತ್ರಾ ಆಚಾರ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್‌ ನೀನಾಸಂ ಈ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

35

ಲಿಖಿತ್ ಕುಮಾರ್‌ ನಿರ್ದೇಶನದ ಈ ಸಿನಿಮಾವನ್ನು ಟಿ ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ. ಮಾಹಿರ್‌ ಮೊಯ್ಯುದ್ದೀನ್‌ ನಾಯಕ. ಹರಿಣಿ ಸುಂದರರಾಜನ್‌ ನಾಯಕಿ.

45

ಈ ಬಗ್ಗೆ ವಿವರ ನೀಡಿದ ಕತೆಗಾರ ಯೋಗಿ, ಈ ಸಿನಿಮಾ ಒಂದು ರಾತ್ರಿ ನಡೆಯುವ ಘಟನೆ. ಸಿನಿಮಾದ ಶೇ.90ರಷ್ಟು ಭಾಗ ನಾಯಕನೊಬ್ಬನೇ ಇರುತ್ತಾನೆ. ದಟ್ಟ ಕಾಡಿನಲ್ಲಿ ಮುಖ್ಯ ಕಥಾಹಂದರ ನಡೆಯುತ್ತದೆ.

55

ನೀವು ನಿಜಕ್ಕೂ ಭಯ ಪಡುವುದು ಬಯಲಿನ ಕತ್ತಲಿಗಾ ಅಥವಾ ನಿಮ್ಮೊಳಗಿನ ಅಸಹನೀಯ ಮೌನಕ್ಕಾ ಅನ್ನೋದನ್ನು ಈ ಸಿನಿಮಾ ಹೇಳುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories