ಬಿಗ್ ಬಾಸ್ ಮಲಯಾಳಂ ಸೀಸನ್ 7 ಆರಂಭವಾಗಿದೆ. ಮೋಹನ್ ಲಾಲ್ ಅವರ ಈ ಕಾರ್ಯಕ್ರಮದಲ್ಲಿ, ಸಿನಿಮಾ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಆಗಮಿಸಿದ್ದು,. ಆದರೆ ಲೆಸ್ಬಿಯನ್ ಜೋಡಿಗಳ ಸುದ್ದಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುವ ಕಾರ್ಯಕ್ರಮ. ಅದು ಹಿಂದಿಯಾಗಿರಲಿ ಅಥವಾ ಮರಾಠಿಯಾಗಿರಲಿ , ಕನ್ನಡ, ತಮಿಳು-ಪಂಜಾಬಿಯಾಗಿರಲಿ, ಪ್ರತಿಯೊಂದು ಭಾಷೆಯಲ್ಲೂ ಇದರ ಜನಪ್ರಿಯತೆ ತುಂಬಾ ಹೆಚ್ಚಾಗಿದೆ. ಹಿಂದಿಯಲ್ಲಿ ಕನ್ನಡದಲ್ಲಿ ಇದನ್ನು ಸುದೀಪ್ ಹೋಸ್ಟ್ ಮಾಡುವಂತೆ, ಮಲಯಾಳಂನಲ್ಲಿ, ಇದನ್ನು ಸೂಪರ್ ಸ್ಟಾರ್ ಮೋಹನ್ ಲಾಲ್ ಹೋಸ್ಟ್ ಮಾಡುತ್ತಿದ್ದಾರೆ. .
27
ದೊಡ್ಡ ಸೆಲೆಬ್ರಿಟಿಗಳು
ಬಿಗ್ ಬಾಸ್ ಮಲಯಾಳಂ ಸೀಸನ್ 7 (Bigg Boss Malayalam 2025) ಪ್ರಾರಂಭವಾಗಿದೆ. ಮೋಹನ್ ಲಾಲ್ ಅವರ ಈ ಕಾರ್ಯಕ್ರಮದಲ್ಲಿ, ಚಲನಚಿತ್ರ ತಾರೆಯರ ಜೊತೆಗೆ ಸಾಮಾನ್ಯ ಜನರಿಗೂ ಭಾಗವಹಿಸುವ ಅವಕಾಶ ಸಿಕ್ಕಿದೆ. ಸೀಸನ್ನ ಆರಂಭದಲ್ಲಿ, ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಲು ಪ್ರಯತ್ನಿಸಿದ್ದಾರೆ.
37
ವಿವಾದದಲ್ಲಿ ಸೀಸನ್
ಆದರೆ ಈ ಸೀಸನ್ನಲ್ಲಿ, ಸಲಿಂಗಕಾಮಿ ಜೋಡಿ (lesbian couples) ಹೆಚ್ಚು ಗಮನ ಸೆಳೆಯಿತು. ಈ ಜೋಡಿಯ ಹೆಸರು ಹಲವು ಸಮಯದಿಂದ ವಿವಾದಗಳಿಗೆ ಸಿಲುಕಿದ್ದು, ಅವರು ತಮ್ಮ ವಿಶಿಷ್ಟ ಪ್ರೇಮಕಥೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಸುದ್ದಿ ಸದ್ಯಕ್ಕೆ ವೈರಲು ಆಗುತ್ತಿದ್ದು, ಜನ ಹುಬ್ಬೇರಿಸುವಂತೆ ಮಾಡಿದೆ.
ಲೆಸ್ಬಿಯನ್ ಜೋಡಿಯ ಪ್ರವೇಶದಿಂದಾಗಿ ಸುದ್ದಿಯಲ್ಲಿದೆ ಮಲಯಾಳಂ ಬಿಗ್ ಬಾಸ್
ಸಲಿಂಗಕಾಮಿ ಜೋಡಿಗಳಾದ ಆದಿಲಾ ನಸ್ರೀನ್ (Adila Nasreen)ಮತ್ತು ಫಾತಿಮಾ ನೂರಾ ಬಿಗ್ ಬಾಸ್ ಮಲಯಾಳಂ ಗೆ ಎಂಟ್ರಿ ಕೊಡುವ ಮೂಲಕ ಸುದ್ದಿಗೆ ಆಹಾರವಾಗಿದ್ದಾರೆ. ಅವರ ಪ್ರವೇಶವು ಬಿಗ್ ಬಾಸ್ ಮಲಯಾಳಂ ಸೀಸನ್ 7 ರ ಬಗ್ಗೆ ಸಾಕಷ್ಟು ಸದ್ದು ಮಾಡುವಂತೆ ಮಾಡಿದೆ.
57
ಪ್ರೇಮಕಥೆ ಹೇಗೆ ಪ್ರಾರಂಭವಾಯಿತು?
ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ (Fatima Noora) ತಮ್ಮ ಪ್ರೀತಿಗಾಗಿ ದೀರ್ಘ ಹೋರಾಟ ನಡೆಸಿದಂತಹ ಜೋಡಿ. ಜೂನ್ 2022 ರಲ್ಲಿ ಕೇರಳ ಹೈಕೋರ್ಟ್ ಅವರಿಗೆ ಒಟ್ಟಿಗೆ ವಾಸಿಸಲು ಅನುಮತಿ ನೀಡಿತು. ಆದಿಲಾ ಮತ್ತು ಫಾತಿಮಾ ಮೊದಲು ಸೌದಿ ಅರೇಬಿಯಾದಲ್ಲಿ ಭೇಟಿಯಾದರು. ಆ ಸಮಯದಲ್ಲಿ ಇಬ್ಬರೂ 12 ನೇ ತರಗತಿಯಲ್ಲಿ ಓದುತ್ತಿದ್ದರು.
67
ಸ್ನೇಹ ಪ್ರೀತಿಯಾಗಿ ಬದಲಾಯಿತು
ಇಬ್ಬರೂ ಓದುತ್ತಿರುವಾಗ ಸ್ನೇಹಿತರಾದರು ಮತ್ತು ನಿಧಾನವಾಗಿ ಅದು ಪ್ರೀತಿಯಾಗಿ ಬದಲಾಯಿತು. ಅವರ ಪ್ರೀತಿ ಎಷ್ಟು ತೀವ್ರವಾಗಿತ್ತೆಂದರೆ ಅವರು ಜೀವನಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದರು. ಅವರು ತಮ್ಮ ಕುಟುಂಬಕ್ಕೆ ಈ ಬಗ್ಗೆ ಹೇಳಿದಾಗ, ಮನೆಯವರಿಗೆ ಬರ ಸಿಡಿಲು ಬಡಿದಂತಾಗಿತ್ತು. ತಮ್ಮ ಮಗಳು ಲೆಸ್ಬಿಯನ್ ಎಂದು ನಂಬಲು ಅವರಿಗೆ ಸಾಧ್ಯವಾಗಲಿಲ್ಲ.
77
ಸೌದಿ ತೊರೆದು ಭಾರತಕ್ಕೆ ಬಂದ ಜೋಡಿ
ಆದಿಲಾ ಮತ್ತು ಫಾತಿಮಾ ಅವರ ಕುಟುಂಬವು ಈಗಾಗಲೇ ಪರಸ್ಪರ ಪರಿಚಿತರಾಗಿರುವುದರಿಂದ ಕುಟುಂಬವು ಇದನ್ನು ವಿರೋಧಿಸಿತು. ಕುಟುಂಬವು ಇದನ್ನು ವಿರೋಧಿಸಿದಾಗ, ಆದಿಲಾ ಮತ್ತು ಫಾತಿಮಾ ಸೌದಿಯನ್ನು ತೊರೆದು ಭಾರತಕ್ಕೆ ಬಂದು ಕೋಝಿಕ್ಕೋಡ್ನಲ್ಲಿ ಆಶ್ರಯ ಪಡೆದರು. ಇಲ್ಲಿ ಅವರು ಕೇರಳ ಹೈಕೋರ್ಟ್ನ ಬಾಗಿಲು ತಟ್ಟಿದರು. ಅವರು ಹೈಕೋರ್ಟ್ನಲ್ಲಿ 'ಹೇಬಿಯಸ್ ಕಾರ್ಪಸ್' ಅರ್ಜಿಯನ್ನು ಸಲ್ಲಿಸಿದರು ಮತ್ತು ಈ ಹೋರಾಟದಲ್ಲಿ ಗೆದ್ದರು.