ಅವಮಾನಕಾರಿ ಹೇಳಿಕೆ ನೀಡಿದ ಆರೋಪ;
ಅಂಬೇಡ್ಕರ್ ಸಂಘದ ಸದಸ್ಯರ ಪ್ರಕಾರ, ನಟ ಪ್ರಥಮ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 'ಆತನಿಗೆ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಏನು ಹಕ್ಕಿದೆ ' ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪೋಲಿಸರು ಆತನ ರಕ್ಷಣೆ ಮಾಡುತ್ತಾರೆಂಬ ಧೈರ್ಯದಿಂದಲೇ ಅವಹೇಳಕಾರಿ ಹೇಳಿಕೆ ಕೊಡುತ್ತಿದ್ದಾನೆ. ತನ್ನ ಹೇಳಿಕೆ ಬಗ್ಗೆ ಆತ ಎಲ್ಲಿವರೆಗೂ ಕ್ಷಮೆ ಕೇಳಲ್ಲವೋ, ಅಲ್ಲಿವರೆಗೂ ನಾವು ಹೋರಾಟ ಕೈ ಬಿಡಲ್ಲ ಎಂದು ಅಂಬೇಡ್ಕರ್ ಸಂಘಟನೆ ಸದಸ್ಯರು ಆಗ್ರಹಿಸಿದರು. ಯಾವಾಗ ಆತ ಏನೇ ಮಾತನಾಡಿದರೂ, ಪೋಲಿಸರು ರಕ್ಷಣೆ ಮಾಡಿ ಆತನನ್ನು ಕಳಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.